ಭಾರತಕ್ಕೆ ಅಡಿಕೆ ಕಳ್ಳ ಸಾಗಾಟ ಮಾಡ್ತಿದ್ದ ವಿಶ್ವ ಕಂಡ ದಿಗ್ಗಜ ಕ್ರಿಕೆಟಿಗ!

By Web DeskFirst Published Nov 22, 2018, 8:30 PM IST
Highlights

ಭಾರತಕ್ಕೆ ಅಡಿಕೆ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪ ವಿಶ್ವ ಕಂಡ ದಿಗ್ಗಜ ಕ್ರಿಕೆಟಿಗರೊಬ್ಬರ ಮೇಲೆ ಬಂದಿದೆ. ಅನಾರೋಗ್ಯಕ್ಕೆ ತುತ್ತಾಗಿ ಸಮಸ್ಯೆ ಎದುರಿಸಿದ್ದ ಶ್ರೀಲಂಕಾದ ಕ್ರಿಕೆಟಿಗ ಇದೀಗ ಗಂಭೀರ ಆರೋಪ ಎದುರಿಸಬೇಕಾಗಿದೆ.

ಮುಂಬೈ[ನ.22] ವಿಶ್ವ ಕಂಡ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ ಮತ್ತು ಇಬ್ಬರು ಕ್ರಿಕೆಟಿಗರ ಹೆಸರು ಅಡಿಕೆ ಕಳ್ಳ ಸಾಗಣೆಯಲ್ಲಿ ಕೇಳಿ ಬಂದಿದೆ. ದೈನಿಕ ಜಾಗರಣ ಮಾಧ್ಯಮ ವರದಿ ಮಾಡಿರುವಂತೆ ತೆರಿಗೆ ಮೋಸ ಮಾಡಲು ಜಯಸೂರ್ಯ ಸೇರಿ ಇಬ್ಬರು ಇಂಥ ಕೆಲಸ ಮಾಡಿದ್ದಾರೆ.

ಲ್ಷಾಂತರ ರೂ. ಮೌಲ್ಯದ ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ ಅಡಿಕೆಯನ್ನು ನಾಗಪುರದಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದರು. ಈ ಸಂದರ್ಭ ಜಯಸೂರ್ಯ ಹೆಸರು ಕೇಳಿ ಬಂದಿತ್ತು.

16 ಬಾಲ್‌ನಲ್ಲಿ 74 ರನ್ ಚಚ್ಚಿದ ಮಿನಿ ಧೋನಿ, ದಾಖಲೆಗಳೆಲ್ಲ ಧೂಳಿಪಟ

ಇನ್ನು ಇಬ್ಬರು ಕ್ರಿಕೆಟಿಗರ ಹೆಸರು ಬಹಿರಂಗ ಆಗಬೇಕಿದೆ. ತೆರಿಗೆಗೆ  ಮೋಸ ಮಾಡಲು ಹೀಗೆ ಮಾಡಿದ್ದಾರೆ ಎನ್ನಲಾಗಿದ್ದು  ಡಿಸೆಂಬರ್ 2 ರಂದು ವಿಚಾರಣೆಗೆ ಸೂರ್ಯ ಮುಂಬೈಗೆ ಹಾಜರಾಗಬೇಕಾಗಿದೆ.

click me!