ಕಾಂಗ್ರೆಸ್ ಕೈಯಿಂದ ಜಾರುತ್ತಿದೆ ರಾಜಸ್ಥಾನ, ಐಶ್ವರ್ಯಗೂ ತಟ್ಟಿದ ಕೊರೋನಾ: ಜು.12ರ ಟಾಪ್ 10 ಸುದ್ದಿ!

By Suvarna NewsFirst Published Jul 12, 2020, 4:44 PM IST
Highlights

ಸಚಿವ ಸಚಿನ್ ಪೈಲೆಟ್ ಬಿಜೆಪಿಯತ್ತ ಮುಖಮಾಡಿದ್ದು, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪತನದ ಹಾದಿ ತುಳಿಯುತ್ತಿದೆ.  ಬೆಂಗಳೂರಿನಲ್ಲಿ ಜಾರಿ ಮಾಡಿರುವ ಲಾಕ್‌ಡೌನ್ ಇದೀಗ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಚಿಂತಿಸುತ್ತಿದೆ. ಅಮಿತಾಬ್ ಬಚ್ಚನ್, ಅಭೀಷೇಕ್ ಬಚ್ಚನ್ ಬೆನ್ನಲ್ಲೇ, ಐಶ್ವರ್ಯ ರೈ ಹಾಗೂ ಪುತ್ರಿ ಆರಾಧ್ಯಗೂ ಕೊರೋನಾ ತಟ್ಟಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್‌ಗೆ ಹುಟ್ಟು ಹಬ್ಬದ ಸಂಭ್ರಮ, ಚೀನಾ ಅಸಲಿ ಮುಖ ಬಯಲು ಮಾಡಿದ ವಿಜ್ಞಾನಿ ಸೇರಿದಂತೆ ಜುಲೈ 12ರ ಟಾಪ್ 10 ಸುದ್ದಿ ಇಲ್ಲಿವೆ.

ಬಿಜೆಪಿಯತ್ತ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನ?

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುವುದು ಸದ್ಯ ನಡೆಯುತ್ತಿರುವ ಬೆಳವಣಿಗೆಯಲ್ಲಿ ಬಯಲಾಗಿದೆ. ಅಲ್ಲದೇ ಇವರು ಸದ್ಯ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರುತ್ತಾರೆಂಬ ಮಾತುಗಳೂ ಜೋರಾಗಿವೆ. 

ರಾಜ್ಯ ಮತ್ತೆ ಲಾಕ್‌ಡೌನ್ ಆಗುತ್ತಾ? ಅಂತರ್ ಜಿಲ್ಲಾ ಸಂಚಾರ ಬಂದ್? ಸಿಎಂ ನಡೆ ಏನು..?...

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಮತ್ತೆ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ: ಸಚಿವ ಕೋಟ...

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಮಂಗಳೂರು, ಉಳ್ಳಾಲ ಸೇರಿದಂತೆ ಸಂಪರ್ಕಿತ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.

ಕೊರೋನಾ ವೈರಸ್‌ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!

ಕೊರೋನಾ ವೈರಸ್‌ ಹರಡುವಿಕೆ ವಿಷಯವನ್ನು ಬಹಿರಂಗಪಡಿಸದೆ ಚೀನಾ ಬಹುಕಾಲ ಮುಚ್ಚಿಟ್ಟಿತ್ತು ಎಂಬ ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳ ಆರೋಪಕ್ಕೆ ಈಗ ಪುಷ್ಟಿಸಿಕ್ಕಿದೆ. ಹಾಂಕಾಂಗ್‌ನಿಂದ ಅಮೆರಿಕಕ್ಕೆ ಪರಾರಿಯಾಗಿರುವ ವೈರಾಣು ತಜ್ಞೆಯೊಬ್ಬರು ಖುದ್ದು ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಾಗೂ ಕೊರೋನಾ ಪಾಸಿಟಿವ್!

ಬಾಲಿವುಡ್‌ ಸೂಪರ್‌ಸ್ಟಾರ್ ಅಮಿತಾಭ್  ಬಚ್ಚನ್‌ ಹಾಗೂ ಪುತ್ರ ಅಭಿಷೇಕ್‌ ಬಚ್ಚನ್‌ಗೆ ಕೊರೋನಾ ಸೋಂಕು ಇರುವುದಾಗಿ ನಿನ್ನೆ  ದೃಢಪಟ್ಟಿತ್ತು ಇದೀಗ ಮರುಪರೀಕ್ಷೆ ನಂತರ  ನಟಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಪಾಸಿಟಿವ್‌ ಎಂದು ತಿಳಿದುಬಂದಿದೆ.

'ಭಜರಂಗಿ-2' ಟೀಸರ್ ರಿಲೀಸ್‌; ಹ್ಯಾಪಿ ಬರ್ತಡೇ ಹ್ಯಾಟ್ರಿಕ್ ಹೀರೋ!...

ಕನ್ನಡ ಚಿತ್ರರಂಗದ ಫಾರ್‌ಎವರ್‌ ಎಂಗ್ ಮ್ಯಾನ್‌, ಹ್ಯಾಟ್ರಿಕ್ ಹೀರೋ ಶಿವರಾಜ್‌ಕಕುಮಾರ್‌ 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವಣ್ಣ ಜನ್ಮ ದಿನದ ಪ್ರಯುಕ್ತ ನಿರ್ದೇಶಕ ಎ.ಹರ್ಷ 'ಭಜರಂಗಿ-2' ಚಿತ್ರ ಪೋಸ್ಟರ್‌ ಮತ್ತು ಟೀಸರ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ  ಸಾಮಾಜಿಕ ಜಾಲತಾಣದಲ್ಲಿ #HappyBirthdayShivanna ಟ್ರೆಂಡ್‌ ಆಗುತ್ತಿದ್ದು #Bhajarangi2 ಕೂಡ ಟ್ರೆಂಡಿಂಗ್ ಲಿಸ್ಟ್‌ಗೆ ಸೇರಿಕೊಂಡಿದೆ.


ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ!...

ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹೀಂದ್ರ XUV300 ಕಾರು ಇದೀಗ ಸ್ಪೋರ್ಟ್ ವೇರಿಯೆಂಟ್ ಕಾರು ಬಿಡುಗಡೆ ಮಾಡುತ್ತಿದೆ. 

ಭಾರತಕ್ಕೆ ನುಗ್ಗಲು 300 ಉಗ್ರರು ಗಡಿಯಲ್ಲಿ ಸಜ್ಜು!...

ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಶಿಬಿರಗಳು ಉಗ್ರರಿಂದ ಸಂಪೂರ್ಣ ಭರ್ತಿಯಾಗಿದ್ದು, ಸುಮಾರು 300 ಉಗ್ರರು ಭಾರತಕ್ಕೆ ಒಳನುಸುಳಲು ಕಾಯುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಾನ್ಪುರ ಡಾನ್ ವಿಕಾಸ್ ದುಬೆ‌ 33 ಮನೆ ಒಡೆಯ!...

ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ, ನೂರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆತನ ಆಸ್ತಿಪಾಸ್ತಿಯ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸುವ ಸಾಧ್ಯತೆ ಇದೆ.

PUC ಓದಿದ ಕ್ರಿಮಿನಲ್ ಸ್ವಪ್ನಾ ದೂತಾವಾಸ ಕಚೇರಿಯಲ್ಲಿ ಆಫೀಸರ್ ಆಗಿದ್ದೇಗೆ..? ಸ್ಮಗ್ಲಿಂಗ್ ಸುಂದರಿಯ ಸೀಕ್ರೆಟ್

ಪಿಯುಸಿ ತನಕ ಮಾತ್ರ ಓದಿರುವ ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದು ಹೇಗೆ..? ಕ್ರಿಮಿನಲ್ ಹಿನ್ನೆಲೆ ಇರೋ ಸ್ವಪ್ನಾಗೆ ಕೇರಳ ಸಿಎಂ ಜೊತೆ ಕ್ಲೋಸ್ ಲಿಂಕ್..!

click me!