ಕೊರೋನಾ ರಾಯಭಾರಿಯಾಗಿ ಯಶ್ ಆಯ್ಕೆ, ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ: ಮೇ.12ರ ಟಾಪ್ 10 ಸುದ್ದಿ!

By Suvarna NewsFirst Published May 12, 2021, 4:45 PM IST
Highlights

ಕೊರೋನಾ ನಿಯಂತ್ರಣಕ್ಕೆ ಸ್ಯಾಂಡಲ್‌ವುಡ್ ನಟ ಯಶ್ ಕೈಜೋಡಿಸಿದ್ದಾರೆ. ಇನ್ನು 2ನೇ ಡೋಸ್ ವಿಳಂಬವಾದರೆ ಸಮಸ್ಯೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಇತ್ತ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಬಿಗ್ ಬಾಸ್ ಮನೆಯನ್ನು ಕೋವಿಡ್ ಕೇರ್ ಬಳಕೆಗೆ ಪತ್ರ, ಒಂದೇ ವಾರದಲ್ಲಿ 5ನೇ ಬಾರಿಗೆ ಇಂಧನ ಬೆಲೆ ಏರಿಕೆ ಸೇರಿದಂತೆ ಮೇ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

2ನೇ ಡೋಸ್ ವಿಳಂಬವಾದರೆ ಆತಂಕ ಬೇಡ; ತಜ್ಞರ ವರದಿಯಿಂದ ನಿಟ್ಟುಸಿರು ಬಿಟ್ಟ ಜನ!...

ಮೊದಲ ಡೋಸ್ ಪಡೆದ ಮಂದಿಗೆ 2ನೇ ಡೋಸ್ ಸಿಗುತ್ತಿಲ್ಲ. ಇದರಿಂದ ಜನರು ಆತಂಕಗೊಂಡಿದ್ದಾರೆ. ಆದರೆ 2ನೇ ಡೋಸ್ ವಿಳಂಬವಾಗುತ್ತಿದೆ. ನಿಗದಿತ ಸಮಯಕ್ಕೆ ಸಿಗುತ್ತಿಲ್ಲ ಅನ್ನೋ ಜನರ ಚಿಂತೆಯನ್ನು ತಜ್ಞ ವೈದ್ಯರು ದೂರ ಮಾಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಕ್ಕೆ ಆತಂಕ ಕೊಟ್ಟಿದೆ 533 ಜಿಲ್ಲೆಗಳ ವರದಿ!...

ಕೊರೊನಾ ಮಹಾಸ್ಫೋಟ ಸಂಭವಿಸಿ ಇಡೀ ಇಂಡಿಯಾದಲ್ಲಿ ಆರ್ಭಟಿಸುತ್ತಿದೆ. ಇದರ ಪ್ರಮಾಣ ದೇಶದ 533 ಜಿಲ್ಲೆಗಳಲ್ಲಿ ಶೇ.10 ರಷ್ಟು ಪಾಸಿಟಿವ್ ರೇಟ್ ಇದ್ದು  ಕೇಂದ್ರ ಹಾಗು ರಾಜ್ಯ ಸರ್ಕಾರಗಳನ್ನು ಆತಂಕ ದತ್ತ ದೂಡುತ್ತಿದೆ. 

ಇಸ್ರೇಲ್ ಮೇಲೆ ರಾಕೆಟ್ ದಾಳಿ: ಕೇರಳ ಮೂಲದ ಮಹಿಳೆ ಸಾವು!...

ಪ್ಯಾಲೇಸ್ತೀನ್‌‌ದಲ್ಲಿನ ಗಾಜಾ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತದ ಕೋವಿಡ್‌ ಹೋರಾಟಕ್ಕೆ ಟ್ವೀಟರ್‌ 110 ಕೋಟಿ ರೂ. ನೆರವು!...

ಕೊರೋನಾ ವೈರಸ್‌ನ 2ನೇ ಅಲೆಯ ವಿರುದ್ಧ ಸೆಣಸುತ್ತಿರುವ ಭಾರತಕ್ಕೆ, ಸಾಮಾಜಿಕ ಜಾಲತಾಣ ಟ್ವೀಟರ್‌ ಸಂಸ್ಥೆ 110 ಕೋಟಿ ರು.(15 ಮಿಲಿಯನ್‌ ಡಾಲರ್‌) ನೆರವಿನ ಹಸ್ತ ಚಾಚಿದೆ.

ಮನೆಯಿಂದ ಹೊರಬರದಂತೆ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ...

ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತೀಯ ಕ್ರಿಕೆಟಿಗರಿಗೆ ಮನೆ ಬಿಟ್ಟು ಹೊರಬರದಂತೆ ಬಿಸಿಸಿಐ ಎಚ್ಚರಿಕೆ ನೀಡಿದೆ. 

ಕೊರೋನಾ: ಇದು ಉದ್ಭವಿಸಿದ ವೈರಸ್‌ ಅಲ್ಲ, ಚೀನಾ ಸೃಷ್ಟಿಸಿದ ರೋಗ!...

2015ರಲ್ಲೇ ಕತ್ತಿ ಮಸೆದಿತ್ತು ಚೀನಾ. ಆರು ವರ್ಷ ಹಳೆಯ ಜೈವಿಕ ಆಸ್ತ್ರವೇ ಕೊರೋನಾ ವೈರಸ್. ಚೀನಾ ಸೇನಾ ನೆಲೆಯ ರಹಸ್ಯ ದಾಖಲೆ ಹೇಳಿದ ಸಾರ್ಸ್‌ ಕೊರೋನಾ ವೈರಸ್‌ ಕೊರೋನಾ ವೈರಸ್‌ ಸೀಕ್ರೆಟ್‌ ಏನು ಗೊತ್ತಾ? ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ಗೆ ಸಿಕ್ಕ ದಾಖಲೆ ತೆರೆದಿಟ್ಟಿದೆ ಕೊರೋನಾ ವೈರಸ್‌ ಜನ್ಮ ರಹಸ್ಯ

ಬಿಗ್‌ಬಾಸ್ ಮನೆ ಕೊರೋನಾ ಕೇರ್‌ಗೆ ಬಳಕೆ ?...

ಬೆಂಗಳೂರಿನಲ್ಲಿರುವ ಬಿಗ್‌ಬಾಸ್ ಮನೆ ಹಾಗೂ ಕಂಠೀರವ ಸ್ಟುಡಿಯೋವನ್ನು ಕೋವಿಡ್ ಕೇರ್ ಸೆಂಟರ್ ಆಗಿ ರೂಪಿಸಬೇಕು ಎಂದು ನಿರ್ಮಾಪಕ ಭಾಮ ಹರೀಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇರಳ ಪೊಲೀಸರ ಸಖತ್ ಪ್ಲಾನ್: ಯಶ್ ಕೊರೋನಾ ರಾಯಭಾರಿ...

ರಾಕಿ ಭಾಯ್ ಯಶ್ ಕೇರಳ ಪೊಲೀಸರ ರಾಯಭಾರಿ ಆಗಿದ್ದಾರೆ. ಕೊರೋನಾ ಕುರಿತು ಯಶ್ ಜಾಗೃತಿ ಮೂಡಿಸುತ್ತಿದ್ದಾರೆ. ಕೇರಳ ಪೊಲೀಸರ ಜೊತೆ ರಾಕಿಂಗ್ ಸ್ಟಾರ್ ಕೈಜೋಡಿಸಿದ್ದಾರೆ.

ಬಾಲಕಿ ಕಂಡುಹಿಡಿದ ಈ ಮಾಸ್ಕ್ ಧರಿಸಿದರೆ ಕೊರೋನಾ ಚಾನ್ಸೇ ಇಲ್ಲ!...

ಈ ಬಾಲಕಿಯ ಸಾಧನೆಯನ್ನು ಮೆಚ್ಚಲೇಬೇಕು. ಕ್ಲಾಸ್  12  ವಿದ್ಯಾರ್ಥಿನಿ ದಿಗಂತಿಕಾ ಬೋಸ್  ಕೊರೋನಾ ಕೊಲ್ಲುವ ಮಾಸ್ಕ್  ಕಂಡುಹಿಡಿದಿದ್ದಾರೆ. 

ಪೆಟ್ರೋಲ್, ಡೀಸೆಲ್ ಶಾಕ್: ಒಂದೇ ವಾರದಲ್ಲಿ ಐದನೇ ಬಾರಿ ಬೆಲೆ ಹೆಚ್ಚಳ!...

ಒಂದೆಡೆ ಕೊರೋನಾ ವೈರಸ್‌ ಹೊಡೆತದಿಂದ ಶ್ರೀಸಾಮಾನ್ಯರು ತತ್ತರಿಸುತ್ತಿರುವಾಗಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶಾಕ್‌ ಮೇಲೆ ಶಾಕ್‌ ನೀಡಲು ಆರಂಭಿಸಿವೆ.

click me!