ಮೂಕ ಪ್ರಾಣಿಗಳ ಮೇಲೆ ವಿಕೃತಿ ಮೆರೆಯುವ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಪ್ರಾಣಿಗಳನ್ನು ಬಿಡದೇ ಅತ್ಯಾಚಾರ ಮಾಡಿರುವ ಪ್ರಕಟರಣಗಳೂ ಇವೆ. ಮಂಡ್ಯದ ಮದ್ದೂರಿನಲ್ಲಿ ಮತ್ತಿನಲ್ಲಿದ್ದ ಯುವಕರು ಮೇಯುತ್ತಿದ್ದ ಹಸುವಿನ ಮೇಲೆ ತಮ್ಮ ವಿಕೃತಿ ತೋರಿಸಿದ್ದಾರೆ.
ಮಂಡ್ಯ(ನ.11): ಮೂಕ ಪ್ರಾಣಿಗಳ ಮೇಲೆ ವಿಕೃತಿ ಮೆರೆಯುವ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಪ್ರಾಣಿಗಳನ್ನು ಬಿಡದೇ ಅತ್ಯಾಚಾರ ಮಾಡಿರುವ ಪ್ರಕಟರಣಗಳೂ ಇವೆ. ಮಂಡ್ಯದ ಮದ್ದೂರಿನಲ್ಲಿ ಮತ್ತಿನಲ್ಲಿದ್ದ ಯುವಕರು ಮೇಯುತ್ತಿದ್ದ ಹಸುವಿನ ಮೇಲೆ ತಮ್ಮ ವಿಕೃತಿ ತೋರಿಸಿದ್ದಾರೆ.
ಮಂಡ್ಯದ ಮದ್ದೂರಿನ ಸಮೀಪ ಎಂದಿನಂತೆಯೇ ಹಸುಗಳನ್ನು ಮೇಯಲು ಬಿಡಲಾಗಿತ್ತು. ಆದರೆ ಮತ್ತಿನಲ್ಲಿದ್ದ ಯುವಕರ ಗುಂಪು ಮೇಯುತ್ತಿದ್ದ ಹಸುವನ್ನು ಹಿಂಸಿಸಿದ್ದಾರೆ. ಹಸುವಿನ ಮಾಲೀಕ ಈ ಬಗ್ಗೆ ಆರೋಪ ಮಾಡಿದ್ದಾರೆ.
ಗಾಂಜಾ ಮತ್ತಿನಲ್ಲಿ ಗೋ ಮಾತೆ ಮೇಲೆ ವಿಕೃತಿ:
ಹಸುವಿನ ಕೆಚ್ಚಲು ಕುಯ್ದು ವಿಕೃತಿ ಮೆರದ ಘಟನೆ ಪಟ್ಟಣದ ವಿವಿ ನಗರದಲ್ಲಿ ಜರುಗಿದೆ. ಯುವಕರ ಗುಂಪೊಂದು ಗಾಂಜಾ ಸೇವನೆ ಮಾಡಿ ಓಡಾಡುತ್ತಿದ್ದರು. ಈ ವೇಳೆ ಹಸುವನ್ನು ಮೇಯಲು ಬಿಟ್ಟಿದಾಗ ಕೆಚ್ಚಲು ಕೊಯ್ದು ವಿಕೃತಿ ಮೆರದಿದ್ದಾರೆಂದು ಹಸುವಿನ ಮಾಲೀಕ ಕೃಷ್ಣಪ್ಪ ಆರೋಪ ಮಾಡಿದ್ದಾರೆ. ಮೂಕ ಪ್ರಾಣಿ ವೇದನೆ ಅರಿತು ಆರೋಪಿ ಪತ್ತೆ ಹಚ್ಚುವಂತೆ ಕೃಷ್ಣ ಆಗ್ರಹಿಸಿದ್ದಾರೆ .
ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ..!