ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.
ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಇನ್ನೂ ಭದ್ರವಾಗಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆಯಾದರೂ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್ಡಿಎ ಸ್ಥಾನಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ಜನವರಿಯಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಎನ್ಡಿಎಗೆ 352 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇದೀಗ 26 ಸೀಟುಗಳ ಕುಸಿತದೊಂದಿಗೆ 326 ಸ್ಥಾನಗಳನ್ನು ಅಂದಾಜಿಸಲಾಗಿದೆ.
10:44 PM (IST) Aug 28
ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್ ನಡೆಸಿದರು. ಈ ವೇಳೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ ಅವರು, ತಾಯ್ತನದ ಈ ಹಂತವನ್ನು ಎಂಜಾಯ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
10:04 PM (IST) Aug 28
ಒಂದೇ ಮನೆಯಲ್ಲಿರುವ ಹಳೆಯ ಫೋನ್ ಮೂಲಕ, 20 ವರ್ಷಗಳ ಅಂತರದಲ್ಲಿ ಬದುಕುತ್ತಿರುವ ಇಬ್ಬರು ಮಹಿಳೆಯರು ಮಾತಾಡಲು ಶುರು ಮಾಡ್ತಾರೆ. ಒಂದು ಸಣ್ಣ ಫೋನ್ ಕಾಲ್ ಇಬ್ಬರ ಜೀವನವನ್ನು ಹೇಗೆ ತಲೆಕೆಳಗು ಮಾಡುತ್ತೆ ಅನ್ನೋದೇ ಈ ಕೊರಿಯನ್ ಥ್ರಿಲ್ಲರ್ ಕಥೆ.
09:47 PM (IST) Aug 28
ನಿವೃತ್ತಿ ಯೋಜನೆಯು ಕೇವಲ ಒಂದು ನಿರ್ದಿಷ್ಟ ಹಣದ ಮೊತ್ತವನ್ನು ಗುರಿಯಾಗಿಸುವುದಲ್ಲ, ಬದಲಿಗೆ ಹಣದುಬ್ಬರಕ್ಕೆ ಅನುಗುಣವಾಗಿ ನಿಮ್ಮ ಭವಿಷ್ಯದ ತಿಂಗಳ ಖರ್ಚುಗಳನ್ನು ಅಂದಾಜಿಸುವುದರೊಂದಿಗೆ ಆರಂಭವಾಗಬೇಕು. ಸುಸ್ಥಿರ ಹೂಡಿಕೆ, ನಿಯಮಿತ ಆದಾಯದ ಮೂಲಗಳು ಮತ್ತು ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಸರಿಯಾದ ಯೋಜನೆಯೇ ನೆಮ್ಮದಿಯ ನಿವೃತ್ತಿ ಜೀವನಕ್ಕೆ ದಾರಿಯಾಗಿದೆ.
09:26 PM (IST) Aug 28
ರಾಕಿ ಭಾಯ್ ಸಿನಿಮಾದಲ್ಲಿ ಅತಿಥಿ ಪಾತ್ರಗಳಿಗಿಂತಲೂ ಹೆಚ್ಚಾಗಿ ಈ 'ಟಿಕೆಟ್' ಎಂಬ ಪುಟಾಣಿ ಪಾತ್ರ ಜನರಿಗೆ ಹತ್ತಿರವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ 'ಟಾಕ್ಸಿಕ್' ಸಿನಿಮಾಗೆ ಕಬೀರ್ ಪಹ್ವಾ ಅವರ ನಟನೆ ಒಂದು ವಿಶೇಷ ಮೆರುಗು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾರೀತ? ನೋಡಿ..
07:34 PM (IST) Aug 28
ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇಲ್ಲಿವೆ JioHotstarನಲ್ಲಿ ನೋಡಬಹುದಾದ 5 ಬೆಸ್ಟ್ ಸಿನಿಮಾಗಳು. ‘Neru’, ‘Sookshmadarshini’, ‘Abraham Ozler’, ‘21 Hours’ ಮತ್ತು ‘Heaven’ ಸಿನಿಮಾಗಳ ವಿಶೇಷತೆ ಇಲ್ಲಿದೆ.
07:28 PM (IST) Aug 28
06:42 PM (IST) Aug 28
ಎಲ್ಲರೂ ಪಬ್ಜಿ ಗೇಮ್ ಆಡದಿದ್ದರೂ ಬಹುತೇಕರು ಕೇಳಿದ್ದಾರೆ. ಮಕ್ಕಳು, ಯುವ ಸಮೂಹ ಸೇರಿದಂತೆ ಬಹುತೇಕರು ಆಡುತ್ತಿದ್ದ ಪಬ್ಜಿ ಗೇಮ್ ಕ್ರಿಯೇಟರ್ ಫಾರೂಖ್ ಅಹಮ್ಮದ್ ಸಾವು ಕಂಡಿದ್ದಾರೆ. ಕೇವಲ 28ನೇ ವಯಸ್ಸಿಗೆ ಏನಾಯಿತು?
06:33 PM (IST) Aug 28
ಎಷ್ಟೇ ಸಂಪಾದಿಸಿದ್ರೂ ಕೈಯಲ್ಲಿ ಹಣ ನಿಲ್ತಾ ಇಲ್ವಾ? ನಮಗೇ ಗೊತ್ತಿಲ್ಲದೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಚಾಣಕ್ಯನ ಪ್ರಕಾರ, ಕೆಲವು ಅಭ್ಯಾಸಗಳಿರುವವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ಅವು ಯಾವುವು ಅಂತ ನೋಡೋಣ.
06:12 PM (IST) Aug 28
2016 ರಲ್ಲಿ 'ಬಡೇ ಭೈಯಾ ಕಿ ದುಲ್ಹನಿಯಾ' ಮೂಲಕ ನಟನೆ ಆರಂಭಿಸಿದ ಉರ್ಫಿ, ನಂತರ ಚಂದ್ರ ನಂದಿನಿ, ಮೇರಿ ದುರ್ಗಾ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು 'ಬಿಗ್ ಬಾಸ್ OTT' ಸೀಸನ್ 1 ರಿಂದ. ಈ ಕಿಲಾಡಿ ನಟಿ ಈಗ ಆಸ್ಪತ್ರೆ ಪಾಲಾಗಿದ್ದು, ಅಲ್ಲಿಯೂ ತಮ್ಮ ಕಿತಾಪತಿ ಬಿಟ್ಟಿಲ್ಲ!
06:00 PM (IST) Aug 28
‘ಸಹ: ಲೈಫ್ ಆಫ್ ಸಂಜು’ ಸಿನಿಮಾ ಬಗ್ಗೆ ಯಂಗ್ ಹೀರೋಯಿನ್ ಶ್ವೇತಾ ಲಕ್ಷ್ಮಣ್ ಸಖತ್ ಕಾನ್ಫಿಡೆನ್ಸ್ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಪ್ರೇಕ್ಷಕರು ಡಿಸಪ್ಪಾಯಿಂಟ್ ಆದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.
05:56 PM (IST) Aug 28
05:32 PM (IST) Aug 28
ಬೆಂಗಳೂರು: ಕಳೆದ 10 ದಿನಗಳ ಹಿಂದೆ ಗಗನ ಮುಖಿಯಾಗಿದ್ದ ಚಿನ್ನದ ಬೆಲೆ ಇದೀಗ ಇಳಿಮುಖ ಕಾಣುವತ್ತ ಸಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಹಾಗಿದ್ದರೇ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.
05:30 PM (IST) Aug 28
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಕ್ಕೆ ಅನುಮತಿ ನೀಡಿದ ಸೆನ್ಸಾರ್ ಬೋರ್ಡ್ ವಿರುದ್ಧವೂ ಅವರು ಕಿಡಿಕಾರಿದ್ದಾರೆ.
05:25 PM (IST) Aug 28
04:42 PM (IST) Aug 28
03:41 PM (IST) Aug 28
03:16 PM (IST) Aug 28
01:53 PM (IST) Aug 28
01:35 PM (IST) Aug 28
'ಇಂಡಿಯಾ ಟುಡೇ-ಸಿವೋಟರ್' ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ, 2029ರ ಪ್ರಧಾನಿ ಹುದ್ದೆಗೆ ನಟ ಸಿ.ಜೋಸೆಫ್ ವಿಜಯ್ ಮೂರನೇ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಂತರದ ಸ್ಥಾನದಲ್ಲಿರುವ ವಿಜಯ್, ಶೇ. 9.2ರಷ್ಟು ಜನರ ಬೆಂಬಲ ಗಳಿಸಿದ್ದಾರೆ.
01:25 PM (IST) Aug 28
01:04 PM (IST) Aug 28
ಅನುವಂಶಿಕವಾಗಿ ಬಂದ ಆಸ್ತಿ ಅಥವಾ ಚಿನ್ನವನ್ನು ಪಡೆದಾಗ ಯಾವುದೇ ತೆರಿಗೆ ಇರುವುದಿಲ್ಲ, ಆದರೆ ಅದನ್ನು ಲಾಭಕ್ಕೆ ಮಾರಾಟ ಮಾಡಿದಾಗ ಬಂಡವಾಳ ಗಳಿಕೆ ತೆರಿಗೆ (Capital Gains Tax) ಅನ್ವಯಿಸುತ್ತದೆ. ಈ ತೆರಿಗೆಯಿಂದ ವಿನಾಯಿತಿ ಪಡೆಯಲು, ಗಳಿಸಿದ ಲಾಭವನ್ನು ಹೊಸ ವಸತಿ ಆಸ್ತಿಯಲ್ಲಿ ಮರುಹೂಡಿಕೆ ಮಾಡಬಹುದು ಅಥವಾ 'ಕ್ಯಾಪಿಟಲ್ ಗೇನ್ಸ್ ಅಕೌಂಟ್'ನಲ್ಲಿ ತಾತ್ಕಾಲಿಕವಾಗಿ ಜಮೆ ಮಾಡಬಹುದು.
12:43 PM (IST) Aug 28
12:33 PM (IST) Aug 28
ನೇಪಾಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ರೂ, ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಹರಿಯುವ ಗಂಡಕ್ ನದಿಯ ನೀರಿನ ಮಟ್ಟ ಸದ್ಯಕ್ಕೆ ಸಾಮಾನ್ಯವಾಗಿ ಇದೆ. ಯಾವುದೇ ತಕ್ಷಣದ ಪರಿಣಾಮ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೂ, ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಅಲರ್ಟ್ ಘೋಷಿಸಿದೆ.
12:09 PM (IST) Aug 28
11:57 AM (IST) Aug 28
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಗಳಲ್ಲಿನ ಠೇವಣಿ ಕಳೆದ 12 ವರ್ಷಗಳಲ್ಲಿ 12.8 ಪಟ್ಟು ಹೆಚ್ಚಾಗಿ 3.17 ಲಕ್ಷ ಕೋಟಿ ರೂಪಾಯಿ ತಲುಪಿದೆ. ಆಗಸ್ಟ್ 2026ರ ವೇಳೆಗೆ ಒಟ್ಟು 59.09 ಕೋಟಿ ಖಾತೆಗಳಿದ್ದು, ಈ ಯೋಜನೆಯು ಡಿಜಿಟಲ್ ಬ್ಯಾಂಕಿಂಗ್ಗೆ ದೊಡ್ಡ ಉತ್ತೇಜನ ನೀಡಿದೆ.
11:15 AM (IST) Aug 28
10:44 AM (IST) Aug 28
10:36 AM (IST) Aug 28
07:59 AM (IST) Aug 28
ಚೀನಾ-ನೇಪಾಳ ಗಡಿಯ ಸಮೀಪ ಟಿಬೆಟ್ನಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಉಸಿರಾಟದ ತೊಂದರೆ, ಆಹಾರ-ನೀರಿನ ಕೊರತೆಯಿಂದ ಬಳಲುತ್ತಿರುವ ಯಾತ್ರಿಕರು, ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಬೆಜಿಂಗ್; ಚೀನಾ-ನೇಪಾಳ ಗಡಿಯ ಸಮೀಪವಿರುವ ಟಿಬೆಟ್ನಲ್ಲಿ ಸಂಭವಿಸಿದ ಭಾರಿ ಭೂಕಂಪ ಹಾಗೂ ಹಿಮಪಾತದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸದ್ಯ ಭಾರತೀಯ ಯಾತ್ರಿಕರು ಸಾವು-ಬದುಕಿನ ನಡುವೆ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅನೇಕ ಭಾರತೀಯ ಪ್ರವಾಸಿಗರು ಈ ವಿನಾಶಕಾರಿ ದುರಂತದಲ್ಲಿ ಸಿಲುಕಿಕೊಂಡಿದ್ದು, ಅವರ ಸುರಕ್ಷತೆ ಕುರಿತು ತೀವ್ರ ಆತಂಕ ಎದುರಾಗಿದೆ.