ನವದೆಹಲಿ: ಕೇಂದ್ರ ಸರ್ಕಾರವು ಯುವಕರನ್ನು ತಲುಪುವ ಉದ್ದೇಶದಿಂದ ಜೆನ್ ಝೀಗಳು ಹೆಚ್ಚಾಗಿ ಬಳಸುವ ಆ್ಯಪ್ಗಳಲ್ಲಿ ಸಕ್ರಿಯವಾಗುತ್ತಿರುವ ನಡುವೆ, ವಿದೇಶಾಂಗ ಇಲಾಖೆಯು ಸ್ನ್ಯಾಪ್ಚಾಟ್ನಲ್ಲಿ ಚಾನಲ್ ಆರಂಭಿಸಿದೆ. ಈ ಮೂಲಕ ಸ್ನ್ಯಾಪ್ ಬಳಸುತ್ತಿರುವ ಮೊದಲ ಇಲಾಖೆ ಎನಿಸಿಕೊಂಡಿದೆ. ಈ ಬಗ್ಗೆ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ ಹಾಗೂ ಖಾತೆಯನ್ನು ಹಿಂಬಾಲಿಸುವಂತೆ ಮನವಿ ಮಾಡಿದ್ದಾರೆ.
ಸ್ನ್ಯಾಪ್ಚ್ಯಾಟ್ನಲ್ಲಿ ಫೋಟೋ, ವೀಡಿಯೊ, ಟೆಕ್ಸ್ಟ್ಗಳನ್ನು ಹಂಚಿಕೊಳ್ಳಬಹುದು. ಬಳಕೆದಾರರು ಅವುಗಳನ್ನು ನೋಡುತ್ತಿದ್ದಂತೆ ಆ ಪೋಸ್ಟ್ಗಳು ಡಿಲೀಟ್ ಆಗಿಬಿಡುತ್ತವೆ. ಅಂದರೆ ಒಮ್ಮೆ ಮಾತ್ರ ಪೋಸ್ಟ್ ವೀಕ್ಷಣೆ ಮಾಡಬಹುದು. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಂನಲ್ಲಿ ಆಗಾಗ ಸೆಲ್ಫಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರೆ, ಸಚಿವರು ಕೂಡ ಒಬ್ಬೊಬ್ಬರಾಗಿ ಈ ಕೆಲಸಕ್ಕಿಳಿಯುತ್ತಿದ್ದಾರೆ. ಹೀಗಿರುವಾಗಲೇ ಈ ಬೆಳವಣಿಗೆಯಾಗಿದೆ.
11:46 PM (IST) Aug 09
ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ಇಂದು ಹಾಲಿವುಡ್ ಸಿನಿಮಾ ನಟರತ ಲೆವಲ್ಗೆ ಬೆಳೆದುನಿಂತಿದ್ದಾರೆ. ಅವರು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದ್ದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ..
11:26 PM (IST) Aug 09
ನಟ ನಾಗ ಚೈತನ್ಯ ಜೊತೆ ಮದುವೆಯಾದ ಮೇಲೂ ನಟಿ ಶೋಭಿತಾ ಧೂಳಿಪಾಲಗೆ ತೆಲುಗು ಚಿತ್ರರಂಗದಲ್ಲಿ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಸದ್ಯ ಅವರು ಹಿಂದಿ ಮತ್ತು ತಮಿಳು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
10:41 PM (IST) Aug 09
Mahesh Babu New Look: ನಟ ಮಹೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ, ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿನ ಅವರ 'ರುದ್ರ' ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
10:15 PM (IST) Aug 09
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ ಜಾರ್ಖಂಡ್ ಸರ್ಕಾರ, ಮೂರು JPSC ಪರೀಕ್ಷೆಗಳನ್ನು ರದ್ದುಗೊಳಿಸಲು ಒಪ್ಪಿದೆ. ಆದರೆ, CGL ಪರೀಕ್ಷೆಯ ಬಗ್ಗೆ ಸರ್ಕಾರದ ನ್ಯಾಯಾಂಗ ತನಿಖೆ ಪ್ರಸ್ತಾಪವನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದು, CBI ತನಿಖೆಗೆ ಪಟ್ಟು.
09:46 PM (IST) Aug 09
'ಟಾಕ್ಸಿಕ್' ಸಿನಿಮಾ ರಿಲೀಸ್ಗೆ ರೆಡಿಯಾಗ್ತಿರೋ ತಾರಾ ಸುತಾರಿಯಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಹೊಳೆಯೋ ತ್ವಚೆ, ಪರ್ಫೆಕ್ಟ್ ಫಿಗರ್ ಹಿಂದಿನ ಗುಟ್ಟೇನು? ಇಲ್ಲಿದೆ ನೋಡಿ ಡೀಟೇಲ್ಸ್.
09:32 PM (IST) Aug 09
08:24 PM (IST) Aug 09
Sidharth Supports Kiara: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.
05:18 PM (IST) Aug 09
ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಸೃಷ್ಟಿಯಾದ 'ಡಾಲ್ಫಿನ್' ಸೂಪರ್ ಟೈಫೂನ್ ಜಪಾನ್, ಚೀನಾ ಮತ್ತು ತೈವಾನ್ಗಳಲ್ಲಿ ತೀವ್ರ ಹಾನಿ ಉಂಟುಮಾಡುತ್ತಿದೆ. ಈ ಚಂಡಮಾರುತದ ಅಬ್ಬರಕ್ಕೆ ಜಪಾನ್ನಲ್ಲಿ ಐವರು ಮೃತಪಟ್ಟಿದ್ದು, ಚೀನಾದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
04:51 PM (IST) Aug 09
03:42 PM (IST) Aug 09
ಕುಡಿದ ಅಮಲಿನಲ್ಲಿದ್ದ ಚಾಲಕನ ಬೇಜವಾಬ್ದಾರಿಯಿಂದಾಗಿ ಮೆಡಿಕೋ ಪ್ರಿಯಾಂಕಾ ಹೈದರಾಬಾದ್ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಇದು ದೇಶಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಈ ದುರಂತವು ಮೆಡಿಕಲ್ ಕಾಲೇಜುಗಳ ಸುತ್ತಮುತ್ತ ಸುರಕ್ಷತಾ ತಪಾಸಣೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ.
03:09 PM (IST) Aug 09
ಭಾರತದಲ್ಲಿ ಹತರಾದ ಉಗ್ರರ ಕುಟುಂಬಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಲಷ್ಕರ್-ಎ-ತೊಯ್ಬಾದ ಹಿರಿಯ ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್, ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.
02:52 PM (IST) Aug 09
ಕೆಲಸ ಬೇಕಾ, ಬಾಸ್ ಜೊತೆ ಎಲ್ಲವನ್ನೂ ಹಂಚಿಕೊಳ್ಳಬೇಕು. ಯುವ ಮಹಿಳೆಗೆ ಸಂದರ್ಶನದ ಬಳಿಕ ಸೂಚನೆ ನೀಡಲಾಗಿದೆ. ಇದೀಗ ಈ ವ್ಯಾಟ್ಸಾಪ್ ಚಾಟ್ ಬಹಿರಂಗವಾಗಿದೆ. ಗಾಯಕಿ ಚನ್ಮಯಿ ಶ್ರೀಪಾದ ಈ ಕುರಿತು ಪ್ರಶ್ನಿಸಿದ್ದಾರೆ.
02:38 PM (IST) Aug 09
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಶಾಪಗ್ರಸ್ಥ ಅರಣ್ಯದಲ್ಲಿ ನಡೆಯುವ ನಿಗೂಢ ಕಥೆಯನ್ನು ಹೊಂದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಲಭ್ಯವಿರುವ ಈ ಸಿನಿಮಾವು ಪ್ರತಿಯೊಂದು ದೃಶ್ಯದಲ್ಲೂ ರೋಚಕ ತಿರುವುಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
02:24 PM (IST) Aug 09
ಪಾಕಿಸ್ತಾನದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತೀರಾ? ಎಚ್ಚರ! ಇಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಈ ದಂಡದ ಲೆಕ್ಕಾಚಾರ ಹೇಗೆ? ತಿಳಿಯಲು ಕ್ಲಿಕ್ ಮಾಡಿ.
01:46 PM (IST) Aug 09
ಮೃಣಾಲ್ ಠಾಕೂರ್ ಹಾಗೂ ಯಶಸ್ವಿ ಜೈಸ್ವಾಲ್ ಮಧ್ಯೆ ಏನೋ ನಡೀತಿದೆ ಎಂಬ ವದಂತಿ ಬಗ್ಗೆ ಸ್ವತಃ ನಟಿಯೇ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಡೇಟಿಂಗ್ ವದಂತಿಗಳಿಗೆ ಒಂದು ಕ್ಲಾರಿಟಿ ಸಿಕ್ಕಿದೆ.
01:32 PM (IST) Aug 09
ಮಿಸ್ ಯೂನಿವರ್ಸ್ ಇಂಡಿಯಾ 2026ರ 52 ಫೈನಲಿಸ್ಟ್ಗಳು ತಮ್ಮ 10 ದಿನಗಳ ತರಬೇತಿ ಕಾರ್ಯಕ್ರಮದ ಭಾಗವಾಗಿ ಇಂದೋರ್ನಲ್ಲಿ ನಡೆದ ಸೂಫಿ ನೈಟ್ನಲ್ಲಿ ಭಾಗವಹಿಸಿದ್ದರು. ಗ್ಲಾಮಾನಂದ್ ಗ್ರೂಪ್ ಆಯೋಜಿಸುತ್ತಿರುವ ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ಜೈಪುರದಲ್ಲಿ ನಡೆಯಲಿದೆ.
01:23 PM (IST) Aug 09
ಕ್ರಿಕೆಟ್ ಅಭಿಮಾನಿಗಳಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗುಡ್ನ್ಯೂಸ್ ನೀಡಿದೆ. ಭಾರತ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಕುಳಿತು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡಿದೆ.
12:56 PM (IST) Aug 09
JPSC ಮತ್ತು JSSC ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ನಿಲುವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಕೇಶ್ ಸಿನ್ಹಾ, ಜಾರ್ಖಂಡ್ ಸರ್ಕಾರದ ಮಾತುಕತೆಯನ್ನು ಶ್ಲಾಘಿಸಿದ್ದಾರೆ.
12:32 PM (IST) Aug 09
ತಮಿಳುನಾಡು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತ ಅವರ ನಡುವಿನ ವಿಚ್ಛೇದನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಏಕಾಏಕಿ ಸಂಗೀತಾ ಅವರು ಕೋರ್ಟ್ನಲ್ಲಿ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದರ ನಡುವೆ ಇಬ್ಬರ ನಡುವಿನ ಮುನಿಸು ದೂರ ಆಗಿ ಒಂದಾಗುತ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
12:30 PM (IST) Aug 09
10 ಬುಲೆಟ್ಸ್ ಜೇಬನಲ್ಲಿ ಇಟ್ಕೊಂಡು ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದ ಅಪ್ರಾಪ್ತೆ.. ಅನುಮಾನಗೊಂಡ ಪೊಲೀಸರು ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಾರಣ ನೀಡಿದ್ದಾಳೆ. ಅದನ್ನು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.. ಸ್ಟೋರಿಯ ವಿವರ ಇಲ್ಲಿದೆ.
12:12 PM (IST) Aug 09
ನೋವಿನಲ್ಲೂ ನಲಿವಿನಲ್ಲೂ ವೇದಿಕೆಯಲ್ಲೂ, ಮನೆಯಲ್ಲೂ ಹಾಗೂ ಆಸ್ಪತ್ರೆಯಲ್ಲೂ ಎಲ್ಲೇ ಇರಲಿ, ಗಾಯಕ ಸೋನು ನಿಗಮ್ ಅವರಿಗೆ ಸಂಗೀತವೇ ಉಸಿರು, ಸಂಗೀತವೇ ಬದುಕು. ಈ ವಿಡಿಯೋ ಮೂಲಕ ಜಗತ್ತು ಈ ಗಾಯಕನ ಬಗ್ಗೆ ಕಂಡುಕೊಂಡ ಸತ್ಯವೇನು? ಈ ಸ್ಟೋರಿ ನೋಡಿ..
12:00 PM (IST) Aug 09
ಎಂಎಸ್ ಧೋನಿ ಅವರು ಈಗಲೂ ಬಿಸಿಸಿಐನಿಂದ ಹಣ ಪಡೆಯುತ್ತಿದ್ದಾರೆ. ಅವರಿಗೆ ತಿಂಗಳಿಗೆ ಎಷ್ಟು ಸಾವಿರ ಹಣ ಪಿಂಚಣಿ ರೂಪದಲ್ಲಿ ಬರುತ್ತಿದೆ ಗೊತ್ತಾ? ಕಂಪ್ಲೀಟ್ ಮಾಹಿತಿ ಸ್ಟೋರಿಯಲ್ಲಿದೆ..
11:08 AM (IST) Aug 09
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳು ತಮ್ಮದೇ ಆದ ಪ್ರಾದೇಶಿಕ ಕ್ರಿಕೆಟ್ ಲೀಗ್ಗಳನ್ನು ಆರಂಭಿಸುತ್ತಿವೆ. ಇದೀಗ ಆ ಸಾಲಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ.
09:50 AM (IST) Aug 09
ಶ್ರೀಲಂಕಾ ಎದುರು ಟೆಸ್ಟ್ ಸರಣಿ ಆಡಲು ಎಕ್ಸೈಟ್ ಆಗಿರುವ ಟೀಂ ಇಂಡಿಯಾ ಹಾದಿ ಅಷ್ಟು ಸುಲಭವಾಗಿಲ್ಲ. WTC ಪಾಯಿಂಟ್ಸ್ ಪಟ್ಟಿಯಲ್ಲಿ ಬಾಂಗ್ಲಾದೇಶಕ್ಕಿಂತ ಕಡೆಯಾಗಿದೆ. ಹೀಗಾಗಿ ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಭರ್ಜರಿಯಾಗಿ ಗೆದ್ದರಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆಸೆಯನ್ನ ಜೀವಂತವಾಗಿಟ್ಟುಕೊಳ್ಳಬಹುದು.
09:39 AM (IST) Aug 09
09:30 AM (IST) Aug 09
ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪತ್ನಿಯ ಇನ್ಸ್ಟಾಗ್ರಾಂ ಸಂದೇಶಗಳನ್ನು ನೋಡಿದ ಪತಿ, ಈ ಕೊಲೆ ಸಂಚನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
07:53 AM (IST) Aug 09
ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.
07:18 AM (IST) Aug 09
07:09 AM (IST) Aug 09