ವಾಷಿಂಗ್ಟನ್/ನವದೆಹಲಿ: ಭಾರತದ ಐಟಿ ಸೇವೆಗಳು, ಬಿಪಿಒ ಮತ್ತು ಕನ್ಸಲ್ಟಿಂಗ್ ಹಾಗೂ ಜಿಸಿಸಿ (ಗ್ಲೋಬಲ್ ಕೆಪ್ಯಾಬಿಲಿಟಿ ಸೆಂಟರ್)ಗಳ ಪಾಲಿಗೆ ತಲೆನೋವಾಗಬಹುದಾದ ವಿಧೇಯಕವೊಂದು ಅಮೆರಿಕದಲ್ಲಿ ಇದೀಗ ಸದ್ದಿಲ್ಲದೆ ಮಂಡನೆಯಾಗಿದೆ. ವಿದೇಶಿ ನೌಕರರು ಅಥವಾ ಕಂಪನಿಯಿಂದ ಪಡೆದುಕೊಳ್ಳುವ ಔಟ್ಸೋರ್ಸ್ (ಹೊರಗುತ್ತಿಗೆ) ಸೇವೆಗೆ ಪಾವತಿಸುವ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಈ ವಿಧೇಯಕದಲ್ಲಿದೆ. ವಿಧೇಯಕದ ಪ್ರಕಾರ ಅಮೆರಿಕದ ಯಾವುದೇ ವ್ಯಕ್ತಿ ಅಥವಾ ಕಂಪನಿ ಔಟ್ಸೋರ್ಸ್ ಸೇವೆಗಾಗಿ ವಿದೇಶದಲ್ಲಿರುವ ವ್ಯಕ್ತಿಗೆ ಹಣ ಪಾವತಿ ಮಾಡಿದರೆ ಆ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ.

10:44 PM (IST) Nov 05
ಭಾರತದ ಜ್ಞಾನ ದೇವತೆ ಸರಸ್ವತಿಯನ್ನು ಜಪಾನ್ನಲ್ಲಿ ಬೆಂಜೈಟೆನ್ ಎಂಬ ಅದೃಷ್ಟದೇವತೆಯಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದ ಮೂಲಕ ಜಪಾನ್ ತಲುಪಿದ ಈಕೆ, ವೀಣೆ, ಡ್ರ್ಯಾಗನ್ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದು ದುರ್ಗೆಯ ರೂಪದಲ್ಲಿಯೂ ಪೂಜಿಸಲ್ಪಡುತ್ತಾಳೆ.
09:58 PM (IST) Nov 05
ವೋಟ್ ಚೋರಿ ಎಂದು ಪೇಚಿಗೆ ಸಿಲುಕಿದ್ರಾ ರಾಹುಲ್? ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮಹಿಳೆ ಸ್ಫೋಟಕ ಹೇಳಿಕೆ, ಯಾವುದೇ ವೋಟ್ ಚೋರಿ ನಡೆದಿಲ್ಲ. 2024ರಲ್ಲಿ ನಾನೇ ಹೋಗಿ ಮತ ಹಾಕಿದ್ದೇನೆ. ಜೊತೆಗೆ ಫೋಟೋ ಕುರಿತ ಮಾಹಿತಿಯೂ ಬಹಿರಂಗ
09:53 PM (IST) Nov 05
09:34 PM (IST) Nov 05
ನಟಿ ರಶ್ಮಿಕಾ ಮಂದಣ್ಣ ಅವರು ಗಂಡಸರಿಗೂ ಪಿರಿಯಡ್ಸ್ ಆಗಬೇಕಿತ್ತು ಎಂದ ಹೇಳಿಕೆಯ ಬೆನ್ನಲ್ಲೇ, ಭಾಗವತ ಪುರಾಣದ ಒಂದು ಸ್ವಾರಸ್ಯಕರ ಕಥೆ ಮುನ್ನೆಲೆಗೆ ಬಂದಿದೆ. ಈ ಕಥೆಯ ಪ್ರಕಾರ, ಇಂದ್ರನ ಬ್ರಹ್ಮ ಹತ್ಯಾ ದೋಷದ ಪಾಪದ ಫಲವಾಗಿ ಮಹಿಳೆಯರಿಗೆ ಋತುಸ್ರಾವ ಪ್ರಾರಂಭವಾಯಿತು.
08:30 PM (IST) Nov 05
ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಮತ್ತು ರಾಧಾ ಯಾದವ್ ಅವರಿಗೆ ಮಹಾರಾಷ್ಟ್ರ ಸರ್ಕಾರ ತಲಾ 2.25 ಕೋಟಿ ರೂ. ಬಹುಮಾನ ಘೋಷಿಸಿದೆ. ಕೋಚ್ ಅಮೋಲ್ ಮಜುಂದಾರ್ ಅವರಿಗೂ 22.5 ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಿದೆ.
08:12 PM (IST) Nov 05
Rajnath Singh Slams Rahul Gandhi for Political Remarks on Military ಭಾರತೀಯ ಸೇನೆಯಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
08:03 PM (IST) Nov 05
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ರಿಷಭ್ ಪಂತ್ ಉಪನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಆದರೆ, ಉತ್ತಮ ಪ್ರದರ್ಶನ ನೀಡಿದರೂ ಶಮಿ ಮತ್ತು ಕರುಣ್ ನಾಯರ್ ಅವರನ್ನು ಕಡೆಗಣಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
07:52 PM (IST) Nov 05
Maharashtra Farmer Receives Just ₹6 as Crop Damage Compensation, Slams Central Government ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ರೈತನೊಬ್ಬ, ಭಾರೀ ಮಳೆಯಿಂದಾದ ಬೆಳೆ ನಷ್ಟಕ್ಕೆ ಸರ್ಕಾರದಿಂದ ಕೇವಲ 6 ರೂಪಾಯಿ ಪರಿಹಾರ ಪಡೆದಿದ್ದಾರೆ.
07:14 PM (IST) Nov 05
Faridabad shooting case: ಹರ್ಯಾಣದ ಬಲ್ಲಭಗಢದಲ್ಲಿ, ಹಲವು ತಿಂಗಳುಗಳಿಂದ ಪ್ರೇಮಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ, ಟ್ಯೂಷನ್ ಮುಗಿಸಿ ಬರುತ್ತಿದ್ದ 17 ವರ್ಷದ ಬಾಲಕಿಗೆ ಗುಂಡು ಹಾರಿಸಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
06:44 PM (IST) Nov 05
ಪರ್ತ್ನಲ್ಲಿ ನಡೆಯಲಿರುವ ಮೊದಲ ಆ್ಯಶಸ್ ಟೆಸ್ಟ್ಗೆ ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಪ್ಯಾಟ್ ಕಮಿನ್ಸ್ ಗಾಯದ ಕಾರಣ ಅಲಭ್ಯರಾಗಿದ್ದು, ಜೇಕ್ ವೆಥರಾಲ್ಡ್, ಬ್ರೆಂಡನ್ ಡೊಗೆಟ್ ಮತ್ತು ಸೀನ್ ಅಬಾಟ್ ಹೊಸದಾಗಿ ತಂಡ ಸೇರಿದ್ದಾರೆ.
06:03 PM (IST) Nov 05
UPS cargo plane crashಅಮೆರಿಕಾದ ಕೆಂಟುಕಿಯಲ್ಲಿ ಯುಪಿಎಸ್ ಕಾರ್ಗೋ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೊತ್ತಿ ಉರಿದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಘಟನೆಯ ಭಯಾನಕ ದೃಶ್ಯಗಳು ಅಹ್ಮದಾಬಾದ್ ದುರಂತವನ್ನು ನೆನಪಿಸುತ್ತಿವೆ.
05:27 PM (IST) Nov 05
ಬಿಗ್ ಬಾಸ್ ಹೋಸ್ಟ್ ಸಲ್ಮಾನ್ ಖಾನ್ಗೆ ಸಂಕಷ್ಟ, ಕೋಟಾ ಕೋರ್ಟ್ನಿಂದ ನೋಟಿಸ್, ಒಂದೆಡೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸತತ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್ ಇದೀಗ ಹೊಸ ಕಾನೂನು ತೊಡಕಿನಲ್ಲಿ ಸಿಲುಕಿದ್ದಾರೆ.
05:15 PM (IST) Nov 05
05:06 PM (IST) Nov 05
celebrity property deals: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ರಿಯಲ್ ಎಸ್ಟೇಟ್ನಲ್ಲಿ ಒಳ್ಳೆ ಹೂಡಿಕೆ ಮಾಡಿದ್ದು, ಈಗ ಮುಂಬೈನ ಗೋರೆಗಾಂವ್ನಲ್ಲಿದ್ದ ತಮ್ಮ ಎರಡು ಅಪಾರ್ಟ್ಮೆಂಟ್ಗಳನ್ನು ಸುಮಾರು 12 ಕೋಟಿ ರೂ.ಗೆ ಮಾರಾಟ ಮಾಡಿ, 13 ವರ್ಷಗಳಲ್ಲಿ ಶೇ.47ರಷ್ಟು ಲಾಭ ಗಳಿಸಿದ್ದಾರೆ.
04:58 PM (IST) Nov 05
Zerodha CEO Nithin Kamath Responds to Investors Complaint on ₹5 Cr Daily Withdrawal Limit ದಿನಕ್ಕೆ 5 ಕೋಟಿ ರೂಪಾಯಿ ವಿತ್ಡ್ರಾ ಲಿಮಿಟ್ ಇಟ್ಟಿರುವುದನ್ನು ಹೂಡಿಕೆದಾರರೊಬ್ಬರು 'ಸ್ಕ್ಯಾಮ್' ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಜೀರೋಧಾ ಸಿಇಒ ನಿತಿನ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.
04:00 PM (IST) Nov 05
Delhi Jal Board official murder:ದೆಹಲಿ ಜಲ ಮಂಡಳಿ ಅಧಿಕಾರಿಯೊಬ್ಬರು ರೋಹಿಣಿಯಲ್ಲಿರುವ ತಮ್ಮ ಫ್ಲಾಟ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕತ್ತಲ್ಲಿ ಚೂರಿಯಿಂದ ಇರಿದ ಗಾಯದ ಗುರುತಿದ್ದು ಅವರ ಪುತ್ರ ತಂದೆಯ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
03:33 PM (IST) Nov 05
Kerala HC Muslim Man Cannot Register Second Marriage Without Notifying First Wife " ಮುಸ್ಲಿಂ ಮಹಿಳೆಯರು ಪತಿ ತನ್ನೊಂದಿಗೆ ಸಂಬಂಧದಲ್ಲಿ ಇರುವಾಗಲೇ ಎರಡನೇ ಮದುವೆ ಆಗೋದನ್ನು ವಿರೋಧಿಸುತ್ತಾರೆ ಅನ್ನೋದು ಖಚಿತವಿದೆ' ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.
03:25 PM (IST) Nov 05
ಆ್ಯಕ್ಟೀವ್ ಇಲ್ಲದ ಹಳೇ ಖಾತೆಯಲ್ಲಿ ಹಣ ಇದೆಯಾ, RBI ನೆರವಿನಿಂದ ಮರಳಿ ಪಡೆಯುವುದು ಹೇಗೆ? 10 ವರ್ಷದಿಂದ ಬ್ಯಾಂಕ್ ಖಾತೆ ಬಳಸುತ್ತಿಲ್ಲ. ಆದರೆ ಖಾತೆಯಲ್ಲಿರುವ ಹಣ ಏನಾಯ್ತು? ಈ ಹಣ ಮರಳಿ ಪಡೆಯುವುದು ಹೇಗೆ?
02:51 PM (IST) Nov 05
Punjab state lottery winner: ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಜೈಪುರದ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11 ಕೋಟಿ ರೂಪಾಯಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಒಲಿದಿದೆ.
01:28 PM (IST) Nov 05
Rahul Gandhi Drops Hydrogen Bomb of Vote Theft ಹರಿಯಾಣ ಚುನಾವಣೆಯಲ್ಲಿ 'ವೋಟ್ ಚೋರಿ'ಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಬ್ರೆಜಿಲ್ನ ಮಾಡೆಲ್ ಒಬ್ಬರು 10 ಬೂತ್ಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
01:02 PM (IST) Nov 05
ಉತ್ತರಪ್ರದೇಶದ ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ, ಪ್ಲಾಟ್ಫಾರ್ಮ್ ಬದಲು ಹಳಿಗಳ ಮೇಲೆ ಇಳಿದ ನಾಲ್ವರು ಪ್ರಯಾಣಿಕರು ಮತ್ತೊಂದು ವೇಗದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
12:55 PM (IST) Nov 05
Mehli Mistry Resigns as Tata Trust Trustee ರತನ್ ಟಾಟಾ ಅವರ ಆಪ್ತಮಿತ್ರ ಮೆಹ್ಲಿ ಮಿಸ್ತ್ರಿ ಅವರು ಟಾಟಾ ಟ್ರಸ್ಟ್ನ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೋಯೆಲ್ ಟಾಟಾ ಅವರಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದಾರೆ.
12:16 PM (IST) Nov 05
Searching for gold in bus wreckage: ಕರ್ನೂಲ್ನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 20 ಜನರು ಸಜೀವ ದಹನವಾದರು. ಈ ದುರಂತದ ನಂತರ, ಕೆಲವರು ಸುಟ್ಟು ಕರಕಲಾದ ಬಸ್ಸಿನಲ್ಲಿ ಚಿನ್ನಾಭರಣಗಳಿಗಾಗಿ ಹುಡುಕಾಟ ನಡೆಸಿರುವ ಅಮಾನವೀಯ ಘಟನೆ ವರದಿಯಾಗಿದೆ.
11:30 AM (IST) Nov 05
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಹಿಂದೆ ಮತಗಳ್ಳತನದ ಬಗ್ಗೆ ಆರೋಪಿಸಿದ್ದ ಅವರು, ಇದೀಗ 'ಹೈಡ್ರೋಜನ್ ಬಾಂಬ್' ಸ್ಫೋಟಿಸುವುದಾಗಿ ಹೇಳಿದ್ದಾರೆ.
11:18 AM (IST) Nov 05
ಪಂಜಾಬ್ನ ಲೂಧಿಯಾನದಲ್ಲಿ ವಾರದ ಅಂತರದಲ್ಲಿ ಇಬ್ಬರು ಕಬಡ್ಡಿ ಆಟಗಾರರಾ ಹತ್ಯೆಯಾಗಿದೆ. ಕಳೆದವಾರ ತೇಜ್ಪಾಲ್ ಸಿಂಗ್ ಮತ್ತು ಈಗ ಗುರ್ವಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಗುರ್ವಿಂದರ್ ಸಿಂಗ್ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
08:28 AM (IST) Nov 05
Louisvilles Muhammad Ali International Airport: ಲೂಯಿಸ್ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಯುಪಿಎಸ್ ಸರಕು ವಿಮಾನ ಪತನಗೊಂಡಿದೆ.