Published : Nov 05, 2025, 07:14 AM ISTUpdated : Nov 05, 2025, 10:44 PM IST

India Latest News Live: ಜಪಾನಿಗರ ಅದೃಷ್ಟದೇವಿಯಾದ ಸರಸ್ವತಿ ಮಾತೆ! ಹಂಸದ ಬದಲು ಡ್ರ್ಯಾಗನ್​ ಮೇಲೆ ಕುಳಿತ ದೇವಿಯ ನಿಗೂಢ ರಹಸ್ಯ

ಸಾರಾಂಶ

ವಾಷಿಂಗ್ಟನ್‌/ನವದೆಹಲಿ: ಭಾರತದ ಐಟಿ ಸೇವೆಗಳು, ಬಿಪಿಒ ಮತ್ತು ಕನ್ಸಲ್ಟಿಂಗ್ ಹಾಗೂ ಜಿಸಿಸಿ (ಗ್ಲೋಬಲ್ ಕೆಪ್ಯಾಬಿಲಿಟಿ ಸೆಂಟರ್‌)ಗಳ ಪಾಲಿಗೆ ತಲೆನೋವಾಗಬಹುದಾದ ವಿಧೇಯಕವೊಂದು ಅಮೆರಿಕದಲ್ಲಿ ಇದೀಗ ಸದ್ದಿಲ್ಲದೆ ಮಂಡನೆಯಾಗಿದೆ. ವಿದೇಶಿ ನೌಕರರು ಅಥವಾ ಕಂಪನಿಯಿಂದ ಪಡೆದುಕೊಳ್ಳುವ ಔಟ್‌ಸೋರ್ಸ್‌ (ಹೊರಗುತ್ತಿಗೆ) ಸೇವೆಗೆ ಪಾವತಿಸುವ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಈ ವಿಧೇಯಕದಲ್ಲಿದೆ. ವಿಧೇಯಕದ ಪ್ರಕಾರ ಅಮೆರಿಕದ ಯಾವುದೇ ವ್ಯಕ್ತಿ ಅಥವಾ ಕಂಪನಿ ಔಟ್‌ಸೋರ್ಸ್‌ ಸೇವೆಗಾಗಿ ವಿದೇಶದಲ್ಲಿರುವ ವ್ಯಕ್ತಿಗೆ ಹಣ ಪಾವತಿ ಮಾಡಿದರೆ ಆ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ.

Goddess Saraswati Became Benzaiten In Japanese Culture

10:44 PM (IST) Nov 05

ಜಪಾನಿಗರ ಅದೃಷ್ಟದೇವಿಯಾದ ಸರಸ್ವತಿ ಮಾತೆ! ಹಂಸದ ಬದಲು ಡ್ರ್ಯಾಗನ್​ ಮೇಲೆ ಕುಳಿತ ದೇವಿಯ ನಿಗೂಢ ರಹಸ್ಯ

ಭಾರತದ ಜ್ಞಾನ ದೇವತೆ ಸರಸ್ವತಿಯನ್ನು ಜಪಾನ್‌ನಲ್ಲಿ ಬೆಂಜೈಟೆನ್ ಎಂಬ ಅದೃಷ್ಟದೇವತೆಯಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದ ಮೂಲಕ ಜಪಾನ್ ತಲುಪಿದ ಈಕೆ, ವೀಣೆ, ಡ್ರ್ಯಾಗನ್ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದು ದುರ್ಗೆಯ ರೂಪದಲ್ಲಿಯೂ ಪೂಜಿಸಲ್ಪಡುತ್ತಾಳೆ.

Read Full Story

09:58 PM (IST) Nov 05

ವೋಟ್ ಚೋರಿ ಎಂದು ಪೇಚಿಗೆ ಸಿಲುಕಿದ್ರಾ ರಾಹುಲ್? ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮಹಿಳೆ ಸ್ಫೋಟಕ ಹೇಳಿಕೆ

ವೋಟ್ ಚೋರಿ ಎಂದು ಪೇಚಿಗೆ ಸಿಲುಕಿದ್ರಾ ರಾಹುಲ್? ಬ್ರೆಜಿಲ್ ಮಾಡೆಲ್ ಫೋಟೋ ಇರುವ ಮಹಿಳೆ ಸ್ಫೋಟಕ ಹೇಳಿಕೆ, ಯಾವುದೇ ವೋಟ್ ಚೋರಿ ನಡೆದಿಲ್ಲ. 2024ರಲ್ಲಿ ನಾನೇ ಹೋಗಿ ಮತ ಹಾಕಿದ್ದೇನೆ. ಜೊತೆಗೆ ಫೋಟೋ ಕುರಿತ ಮಾಹಿತಿಯೂ ಬಹಿರಂಗ

 

Read Full Story

09:53 PM (IST) Nov 05

ಏಕಾಏಕಿ ಲೈವ್​ನಲ್ಲಿ ಬಂದು ಕನ್ನಡಿಗರಿಗೆ ಹೀಗೆ ಎಚ್ಚರಿಕೆ ಕೋಡೋದಾ Rashmika Mandanna? ನಟಿಗೆ ಏನಾಯ್ತು?

ನಟಿ ರಶ್ಮಿಕಾ ಮಂದಣ್ಣ ಅವರು ಶುದ್ಧ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಅವರು ಅಭಿಮಾನಿಗಳ ಆರೋಗ್ಯ ಮತ್ತು ಟ್ರಾಫಿಕ್ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಎಚ್ಚರಿಕೆಯಿಂದ ಇರಲು ಹೇಳಿದ್ದಾರೆ. ಆದರೆ, ಇದು ಕನ್ನಡಿಗರನ್ನು ಓಲೈಸುವ ಗಿಮಿಕ್ ಎಂದು ಕೆಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
Read Full Story

09:34 PM (IST) Nov 05

ಮುಟ್ಟಿನ ಬಗ್ಗೆ Rashmika Mandanna ಆಸೆಯನ್ನು ಆಗ್ಲೇ ಕೇಳಿಬಿಟ್ಟಿದ್ದ ಇಂದ್ರದೇವ! ಈ ಇಂಟರೆಸ್ಟಿಂಗ್​ ಸ್ಟೋರಿ ಕೇಳಿ

ನಟಿ ರಶ್ಮಿಕಾ ಮಂದಣ್ಣ ಅವರು ಗಂಡಸರಿಗೂ ಪಿರಿಯಡ್ಸ್ ಆಗಬೇಕಿತ್ತು ಎಂದ ಹೇಳಿಕೆಯ ಬೆನ್ನಲ್ಲೇ, ಭಾಗವತ ಪುರಾಣದ ಒಂದು ಸ್ವಾರಸ್ಯಕರ ಕಥೆ ಮುನ್ನೆಲೆಗೆ ಬಂದಿದೆ. ಈ ಕಥೆಯ ಪ್ರಕಾರ, ಇಂದ್ರನ ಬ್ರಹ್ಮ ಹತ್ಯಾ ದೋಷದ ಪಾಪದ ಫಲವಾಗಿ ಮಹಿಳೆಯರಿಗೆ ಋತುಸ್ರಾವ ಪ್ರಾರಂಭವಾಯಿತು.

Read Full Story

08:30 PM (IST) Nov 05

ಸ್ಮೃತಿ ಮಂಧನಾ, ಜೆಮಿಮಾಗೆ ಬಂಪರ್ ನಗದು ಬಹುಮಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ!

ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಮತ್ತು ರಾಧಾ ಯಾದವ್ ಅವರಿಗೆ ಮಹಾರಾಷ್ಟ್ರ ಸರ್ಕಾರ ತಲಾ 2.25 ಕೋಟಿ ರೂ. ಬಹುಮಾನ ಘೋಷಿಸಿದೆ. ಕೋಚ್ ಅಮೋಲ್ ಮಜುಂದಾರ್ ಅವರಿಗೂ 22.5 ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಿದೆ.

Read Full Story

08:12 PM (IST) Nov 05

'ದೇಶದ ಸೇನೆಗೆ ಇರೋದು ಒಂದೇ ಧರ್ಮ..' ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Rajnath Singh Slams Rahul Gandhi for Political Remarks on Military ಭಾರತೀಯ ಸೇನೆಯಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Read Full Story

08:03 PM (IST) Nov 05

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಪ್ರಕಟ; ಪಂತ್ ಕಮ್‌ಬ್ಯಾಕ್, ಆದ್ರೆ ಮುಗಿಯಿತಾ ಈ 2 ಕ್ರಿಕೆಟಿಗರ ವೃತ್ತಿಬದುಕು?

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ರಿಷಭ್ ಪಂತ್ ಉಪನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಆದರೆ, ಉತ್ತಮ ಪ್ರದರ್ಶನ ನೀಡಿದರೂ ಶಮಿ ಮತ್ತು ಕರುಣ್ ನಾಯರ್ ಅವರನ್ನು ಕಡೆಗಣಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story

07:52 PM (IST) Nov 05

ಕೇಂದ್ರದಿಂದ ಅನ್ನದಾತನಿಗೆ ದ್ರೋಹ, ಬೆಳೆಹಾನಿ ಪರಿಹಾರವಾಗಿ ಕೇವಲ 6 ರೂಪಾಯಿ ಪಡೆದ ರೈತ!

Maharashtra Farmer Receives Just ₹6 as Crop Damage Compensation, Slams Central Government ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ರೈತನೊಬ್ಬ, ಭಾರೀ ಮಳೆಯಿಂದಾದ ಬೆಳೆ ನಷ್ಟಕ್ಕೆ ಸರ್ಕಾರದಿಂದ ಕೇವಲ 6 ರೂಪಾಯಿ ಪರಿಹಾರ ಪಡೆದಿದ್ದಾರೆ. 

Read Full Story

07:14 PM (IST) Nov 05

ಪ್ರೇಮಿಸುವಂತೆ ಕಿರುಕುಳ - ಟ್ಯೂಷನ್ ಮುಗಿಸಿ ಬರ್ತಿದ್ದ ಅಪ್ರಾಪ್ತೆಗೆ ಗುಂಡೇಟು - ಸಿಸಿಟಿವಿಯಲ್ಲಿ ದೃಶ್ಯ ಸೆರೆ

Faridabad shooting case: ಹರ್ಯಾಣದ ಬಲ್ಲಭಗಢದಲ್ಲಿ, ಹಲವು ತಿಂಗಳುಗಳಿಂದ ಪ್ರೇಮಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ, ಟ್ಯೂಷನ್ ಮುಗಿಸಿ ಬರುತ್ತಿದ್ದ 17 ವರ್ಷದ ಬಾಲಕಿಗೆ ಗುಂಡು ಹಾರಿಸಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

Read Full Story

06:44 PM (IST) Nov 05

ಆ್ಯಶಸ್ ಮೊದಲ ಟೆಸ್ಟ್‌ಗೆ ಆಸೀಸ್ ತಂಡ ಪ್ರಕಟ; ಕೊಹ್ಲಿ ಕೆಣಕಿದ ಆಟಗಾರನಿಗಿಲ್ಲ ಸ್ಥಾನ!

ಪರ್ತ್‌ನಲ್ಲಿ ನಡೆಯಲಿರುವ ಮೊದಲ ಆ್ಯಶಸ್ ಟೆಸ್ಟ್‌ಗೆ ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಪ್ಯಾಟ್ ಕಮಿನ್ಸ್ ಗಾಯದ ಕಾರಣ ಅಲಭ್ಯರಾಗಿದ್ದು, ಜೇಕ್ ವೆಥರಾಲ್ಡ್, ಬ್ರೆಂಡನ್ ಡೊಗೆಟ್ ಮತ್ತು ಸೀನ್ ಅಬಾಟ್ ಹೊಸದಾಗಿ ತಂಡ ಸೇರಿದ್ದಾರೆ. 

Read Full Story

06:03 PM (IST) Nov 05

ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ - ವಿಮಾನದಲ್ಲಿದ್ದ ಎಲ್ಲರೂ ಸಾವು - ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ

UPS cargo plane crashಅಮೆರಿಕಾದ ಕೆಂಟುಕಿಯಲ್ಲಿ ಯುಪಿಎಸ್ ಕಾರ್ಗೋ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೊತ್ತಿ ಉರಿದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲರೂ  ಸಾವನ್ನಪ್ಪಿದ್ದು, ಘಟನೆಯ ಭಯಾನಕ ದೃಶ್ಯಗಳು ಅಹ್ಮದಾಬಾದ್ ದುರಂತವನ್ನು ನೆನಪಿಸುತ್ತಿವೆ.

Read Full Story

05:27 PM (IST) Nov 05

ಬಿಗ್ ಬಾಸ್ ಹೋಸ್ಟ್ ಸಲ್ಮಾನ್ ಖಾನ್‌ಗೆ ಸಂಕಷ್ಟ, ಕೋಟಾ ಕೋರ್ಟ್‌ನಿಂದ ನೋಟಿಸ್

ಬಿಗ್ ಬಾಸ್ ಹೋಸ್ಟ್ ಸಲ್ಮಾನ್ ಖಾನ್‌ಗೆ ಸಂಕಷ್ಟ, ಕೋಟಾ ಕೋರ್ಟ್‌ನಿಂದ ನೋಟಿಸ್, ಒಂದೆಡೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸತತ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್ ಇದೀಗ ಹೊಸ ಕಾನೂನು ತೊಡಕಿನಲ್ಲಿ ಸಿಲುಕಿದ್ದಾರೆ.

Read Full Story

05:15 PM (IST) Nov 05

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 - ಭಾರತ ಸಂಭಾವ್ಯ ತಂಡ ಇಲ್ಲಿದೆ ನೋಡಿ!

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಸರಣಿಯಲ್ಲಿ 1-1 ಸಮಬಲವಿದೆ. ಮೂರನೇ ಪಂದ್ಯ ಗೆದ್ದ ತಂಡವನ್ನೇ ಉಳಿಸಿಕೊಳ್ಳುವ ಸುಳಿವನ್ನು ನಾಯಕ ಸೂರ್ಯಕುಮಾರ್ ಯಾದವ್ ನೀಡಿದ್ದು, ಇದರಿಂದಾಗಿ ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.
Read Full Story

05:06 PM (IST) Nov 05

ರಿಯಲ್ ಎಸ್ಟೇಟ್‌ನಲ್ಲಿ ಅಪ್ಪ ಮಗನ ಚಮತ್ಕಾರ - ಶೇ.47 ಲಾಭದೊಂದಿಗೆ 2 ಲಕ್ಸುರಿ ಫ್ಲಾಟ್‌ಗಳ ಸೇಲ್ ಮಾಡಿದ ಅಮಿತಾಭ್

celebrity property deals: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ರಿಯಲ್ ಎಸ್ಟೇಟ್‌ನಲ್ಲಿ ಒಳ್ಳೆ ಹೂಡಿಕೆ ಮಾಡಿದ್ದು, ಈಗ ಮುಂಬೈನ ಗೋರೆಗಾಂವ್‌ನಲ್ಲಿದ್ದ ತಮ್ಮ ಎರಡು ಅಪಾರ್ಟ್‌ಮೆಂಟ್‌ಗಳನ್ನು ಸುಮಾರು 12 ಕೋಟಿ ರೂ.ಗೆ ಮಾರಾಟ ಮಾಡಿ, 13 ವರ್ಷಗಳಲ್ಲಿ ಶೇ.47ರಷ್ಟು ಲಾಭ ಗಳಿಸಿದ್ದಾರೆ. 

Read Full Story

04:58 PM (IST) Nov 05

ದಿನಕ್ಕೆ ಬರೀ ಐದು ಕೋಟಿ ವಿತ್‌ಡ್ರಾ ಲಿಮಿಟ್‌ ಇಟ್ಟಿರುವುದು ಜೀರೋಧಾ ಸ್ಕ್ಯಾಮ್‌ ಎಂದ ಇನ್ವೆಸ್ಟರ್‌, ಉತ್ತರ ನೀಡಿದ ಸಿಇಒ ನಿತಿನ್‌ ಕಾಮತ್‌

Zerodha CEO Nithin Kamath Responds to Investors Complaint on ₹5 Cr Daily Withdrawal Limit ದಿನಕ್ಕೆ 5 ಕೋಟಿ ರೂಪಾಯಿ ವಿತ್‌ಡ್ರಾ ಲಿಮಿಟ್‌ ಇಟ್ಟಿರುವುದನ್ನು ಹೂಡಿಕೆದಾರರೊಬ್ಬರು 'ಸ್ಕ್ಯಾಮ್' ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಜೀರೋಧಾ ಸಿಇಒ ನಿತಿನ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.

Read Full Story

04:00 PM (IST) Nov 05

NSG ಮೇಜರ್ ತಂದೆ, ಜಲಮಂಡಳಿಯ ಹಿರಿಯ ಅಧಿಕಾರಿ ನಿಗೂಢ ಸಾವು - ಕತ್ತಲ್ಲಿ ಇರಿದ ಗುರುತು

Delhi Jal Board official murder:ದೆಹಲಿ ಜಲ ಮಂಡಳಿ ಅಧಿಕಾರಿಯೊಬ್ಬರು ರೋಹಿಣಿಯಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕತ್ತಲ್ಲಿ ಚೂರಿಯಿಂದ ಇರಿದ ಗಾಯದ ಗುರುತಿದ್ದು ಅವರ ಪುತ್ರ ತಂದೆಯ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. 

Read Full Story

03:33 PM (IST) Nov 05

ಮೊದಲ ಹೆಂಡ್ತಿಗೆ ಸೂಚನೆ ನೀಡದೆ 2ನೇ ಮದುವೆ ನೋಂದಣಿ ಸಾಧ್ಯವಿಲ್ಲ ಎಂದು ಮುಸ್ಲಿಂ ವ್ಯಕ್ತಿಗೆ ತಿಳಿಸಿದ ಕೇರಳ ಹೈಕೋರ್ಟ್‌!

Kerala HC Muslim Man Cannot Register Second Marriage Without Notifying First Wife " ಮುಸ್ಲಿಂ ಮಹಿಳೆಯರು ಪತಿ ತನ್ನೊಂದಿಗೆ ಸಂಬಂಧದಲ್ಲಿ ಇರುವಾಗಲೇ ಎರಡನೇ ಮದುವೆ ಆಗೋದನ್ನು ವಿರೋಧಿಸುತ್ತಾರೆ ಅನ್ನೋದು ಖಚಿತವಿದೆ' ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

 

Read Full Story

03:25 PM (IST) Nov 05

ಆ್ಯಕ್ಟೀವ್ ಇಲ್ಲದ ಹಳೇ ಖಾತೆಯಲ್ಲಿ ಹಣ ಇದೆಯಾ, RBI ನೆರವಿನಿಂದ ಮರಳಿ ಪಡೆಯುವುದು ಹೇಗೆ?

ಆ್ಯಕ್ಟೀವ್ ಇಲ್ಲದ ಹಳೇ ಖಾತೆಯಲ್ಲಿ ಹಣ ಇದೆಯಾ, RBI ನೆರವಿನಿಂದ ಮರಳಿ ಪಡೆಯುವುದು ಹೇಗೆ? 10 ವರ್ಷದಿಂದ ಬ್ಯಾಂಕ್ ಖಾತೆ ಬಳಸುತ್ತಿಲ್ಲ. ಆದರೆ ಖಾತೆಯಲ್ಲಿರುವ ಹಣ ಏನಾಯ್ತು? ಈ ಹಣ ಮರಳಿ ಪಡೆಯುವುದು ಹೇಗೆ?

Read Full Story

02:51 PM (IST) Nov 05

500 ರೂ ಸಾಲ ಮಾಡಿದವನಿಗೆ ಮಗುಚಿದ 11 ಕೋಟಿ ಲಾಟರಿ - ತರಕಾರಿ ವ್ಯಾಪಾರಿ ಬದುಕು ಬದಲಿಸಿದ ಅದೃಷ್ಟದಾಟ

Punjab state lottery winner: ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಜೈಪುರದ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11 ಕೋಟಿ ರೂಪಾಯಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಒಲಿದಿದೆ. 

Read Full Story

01:28 PM (IST) Nov 05

'ಹರಿಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ 22 ಬಾರಿ ವೋಟ್‌ ಮಾಡಿದ್ದಾಳೆ..' ಮತಗಳವು ವಿಚಾರದಲ್ಲಿ ರಾಹುಲ್‌ ಗಾಂಧಿ ಹೈಡ್ರೋಜನ್‌ ಬಾಂಬ್‌..!

Rahul Gandhi Drops Hydrogen Bomb of Vote Theft ಹರಿಯಾಣ ಚುನಾವಣೆಯಲ್ಲಿ 'ವೋಟ್ ಚೋರಿ'ಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಬ್ರೆಜಿಲ್‌ನ ಮಾಡೆಲ್ ಒಬ್ಬರು 10 ಬೂತ್‌ಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Read Full Story

01:02 PM (IST) Nov 05

ಪ್ಲಾಟ್‌ಫಾರ್ಮ್ ಬದಲು ಮತ್ತೊಂದು ಬದಿಯಲ್ಲಿ ಇಳಿದವರ ಮೇಲೆ ಚಲಿಸಿದ ರೈಲು - ನಾಲ್ವರು ಸಾವು

ಉತ್ತರಪ್ರದೇಶದ ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ, ಪ್ಲಾಟ್‌ಫಾರ್ಮ್ ಬದಲು ಹಳಿಗಳ ಮೇಲೆ ಇಳಿದ ನಾಲ್ವರು ಪ್ರಯಾಣಿಕರು ಮತ್ತೊಂದು ವೇಗದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

Read Full Story

12:55 PM (IST) Nov 05

'ರತನ್‌ ಟಾಟಾ ಕನಸನ್ನು ಉಳಿಸಿ..' ಟಾಟಾ ಟ್ರಸ್ಟ್‌ನಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಹ್ಲಿ ಮಿಸ್ತ್ರಿ!

Mehli Mistry Resigns as Tata Trust Trustee ರತನ್ ಟಾಟಾ ಅವರ ಆಪ್ತಮಿತ್ರ ಮೆಹ್ಲಿ ಮಿಸ್ತ್ರಿ ಅವರು ಟಾಟಾ ಟ್ರಸ್ಟ್‌ನ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ನೋಯೆಲ್‌ ಟಾಟಾ ಅವರಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದಾರೆ.

Read Full Story

12:16 PM (IST) Nov 05

20 ಜನರ ಸಜೀವ ದಹನಕ್ಕೆ ಕಾರಣವಾದ ಬಸ್ಸಲ್ಲಿ ಚಿನ್ನಕ್ಕಾಗಿ ಹುಡುಕಾಟ - ಬೆಂಕಿ ಬಿದ್ರೆ ಚಳಿ ಕಾಯಿಸಿದ್ರು ಅನ್ನೋದು ಇದಕ್ಕಾ?

Searching for gold in bus wreckage: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 20 ಜನರು ಸಜೀವ ದಹನವಾದರು. ಈ ದುರಂತದ ನಂತರ, ಕೆಲವರು ಸುಟ್ಟು ಕರಕಲಾದ ಬಸ್ಸಿನಲ್ಲಿ ಚಿನ್ನಾಭರಣಗಳಿಗಾಗಿ ಹುಡುಕಾಟ ನಡೆಸಿರುವ ಅಮಾನವೀಯ ಘಟನೆ ವರದಿಯಾಗಿದೆ. 

Read Full Story

11:30 AM (IST) Nov 05

Hydrogen Bomb Loading - ರಾಹುಲ್ ಗಾಂಧಿ 'ಹೈಡ್ರೋಜನ್ ಬಾಂಬ್' - ಇಂದು ಬಯಲಾಗಲಿದೆಯೇ ಮಹಾ ರಹಸ್ಯ?

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಹಿಂದೆ ಮತಗಳ್ಳತನದ ಬಗ್ಗೆ ಆರೋಪಿಸಿದ್ದ ಅವರು, ಇದೀಗ 'ಹೈಡ್ರೋಜನ್ ಬಾಂಬ್' ಸ್ಫೋಟಿಸುವುದಾಗಿ ಹೇಳಿದ್ದಾರೆ. 

Read Full Story

11:18 AM (IST) Nov 05

ಪಂಜಾಬ್‌ನಲ್ಲಿ ಮತ್ತೊಬ್ಬ ಕಬ್ಬಡಿ ಆಟಗಾರನ ಹತ್ಯೆ - ಒಂದೇ ವಾರದಲ್ಲಿ 2ನೇ ಘಟನೆ - ಹೊಣೆಹೊತ್ತ ಬಿಷ್ಣೋಯ್ ಗ್ಯಾಂಗ್

ಪಂಜಾಬ್‌ನ ಲೂಧಿಯಾನದಲ್ಲಿ ವಾರದ ಅಂತರದಲ್ಲಿ ಇಬ್ಬರು ಕಬಡ್ಡಿ ಆಟಗಾರರಾ ಹತ್ಯೆಯಾಗಿದೆ. ಕಳೆದವಾರ ತೇಜ್‌ಪಾಲ್ ಸಿಂಗ್ ಮತ್ತು ಈಗ ಗುರ್ವಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಗುರ್ವಿಂದರ್ ಸಿಂಗ್ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.

Read Full Story

08:28 AM (IST) Nov 05

ಟೇಕಾಫ್ ಆಗ್ತಿದ್ದತೆ ಆಗಸದಿಂದ ಬೆಂಕಿಯುಂಡೆಯಾಗಿ ಅಪ್ಪಳಿಸಿ ಪಲ್ಟಿಯಾದ ವಿಮಾನ - ಭಯಾನಕ ವಿಡಿಯೋ

Louisvilles Muhammad Ali International Airport: ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಯುಪಿಎಸ್ ಸರಕು ವಿಮಾನ ಪತನಗೊಂಡಿದೆ. 

Read Full Story

More Trending News