LIVE NOW
Published : May 27, 2026, 07:02 AM ISTUpdated : May 27, 2026, 10:14 AM IST

India Latest News Live: 'ನಾವು ಬರ್ತಾ ಇದ್ದೇವೆ..' - ಗುಜರಾತ್ ಟೈಟಾನ್ಸ್ ಬಗ್ಗುಬಡಿದು ಎದುರಾಳಿಗಳ ಮೇಲೆ ಗುಡುಗಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್!

ಸಾರಾಂಶ

ತಿರಮಲ: ವಾರಾಂತ್ಯ, ಬೇಸಿಗೆ ರಜೆ ಹಿನ್ನೆಲೆ ಪವಿತ್ರ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬರುತ್ತಿದ್ದು, ಭಾನುವಾರ ಒಂದೇ ದಿನ ಯ 98,058 ಭಕ್ತರು ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿರುವ ಇಂಟಿಗ್ರೇಟೆಡ್‌ ಕಂಟ್ರೋಲ್‌ ಸೆಂಟರ್‌ ಮೂಲಕ ಪ್ರಯಾಣಿಕರ ನಿಖರ ಲೆಕ್ಕ ಹಾಕಲಾಗಿತ್ತು. ಇನ್ನು ಸೋಮವಾರ ಕೊಂಚ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ತಿರುಪತಿಗೆ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರ ಭೇಟಿ ಈ ಬಾರಿ ದಾಖಲೆಯಾಗಿದೆ. 2016-17ರ ಅವಧಿಯಲ್ಲಿ ಒಂದೇ ದಿನ 1.01 ಲಕ್ಷ ಭಕ್ತರು ಭೇಟಿ ನೀಡಿದ್ದು ಇದುವರೆಗಿನ ಗರಿಷ್ಠ. ಆದರೆ ಆಗಿನದ್ದು ಅಂದಾಜು ಲೆಕ್ಕಾಚಾರವಾಗಿತ್ತು.

 

10:14 AM (IST) May 27

'ನಾವು ಬರ್ತಾ ಇದ್ದೇವೆ..' - ಗುಜರಾತ್ ಟೈಟಾನ್ಸ್ ಬಗ್ಗುಬಡಿದು ಎದುರಾಳಿಗಳ ಮೇಲೆ ಗುಡುಗಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್!

2026ರ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಪಂದ್ಯದ ನಂತರ ಎದುರಾಳಿಗಳಿಗೆ ನೀಡಿದ ಖಡಕ್ ಎಚ್ಚರಿಕೆಯು ಪಂದ್ಯದ ಪ್ರಮುಖ ಹೈಲೈಟ್ ಆಗಿದೆ.
Read Full Story

09:22 AM (IST) May 27

ಇಂದು ಸನ್‌ರೈಸರ್ಸ್‌ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್‌ ಎಲಿಮಿನೇಟರ್‌ ಫೈಟ್! ಸೋತರೇ ಟೂರ್ನಿಯಿಂದ ಔಟ್!

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಕ್ವಾಲಿಫೈಯರ್‌-2 ಪ್ರವೇಶಿಸಲಿದೆ. ಈ ಪಂದ್ಯವು ವೈಭವ್ ಸೂರ್ಯವಂಶಿ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟರ್‌ಗಳ ನಡುವಿನ ಸೆಣಸಾಟವಾಗಲಿದೆ.
Read Full Story

09:03 AM (IST) May 27

IPL 2026 - ಆರ್‌ಸಿಬಿ 2ನೇ ಕಪ್‌ ಗೆಲ್ಲಲು ಇನ್ನೊಂದೇ ಹೆಜ್ಜೆ! ಬೆಂಗಳೂರು ಆರ್ಭಟಕ್ಕೆ ಗುಜರಾತ್ ಧೂಳೀಪಟ

ಹಾಲಿ ಚಾಂಪಿಯನ್‌ ಆರ್‌ಸಿಬಿ, ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು 92 ರನ್‌ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ರಜತ್ ಪಾಟೀದಾರ್ ಅವರ ಅಜೇಯ 93 ರನ್‌ಗಳ ನೆರವಿನಿಂದ ಆರ್‌ಸಿಬಿ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೆ, ಗುಜರಾತ್ 162 ರನ್‌ಗಳಿ ಸೋಲುಂಡಿತು.

Read Full Story

09:01 AM (IST) May 27

ಪರಾರಿ ಆಗಿದ್ದ ಕೈದಿ, ಮೋಹನ್‌ಲಾಲ್‌-ಬಚ್ಚನ್‌ ಜತೆ ಸಿನಿಮಾದಲ್ಲಿ ನಟನೆ! 12 ವರ್ಷಗಳಲ್ಲಿ 12 ಹೆಸರು

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ, ಪರೋಲ್ ಮೇಲೆ ಪರಾರಿಯಾಗಿ 12 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಈ ಅವಧಿಯಲ್ಲಿ, ಆತ ಹಲವು ಹೆಸರುಗಳನ್ನು ಬದಲಿಸಿಕೊಂಡು ಅಮಿತಾಭ್ ಬಚ್ಚನ್ ಮತ್ತು ಮೋಹನ್‌ಲಾಲ್ ಅವರಂತಹ ಖ್ಯಾತ ನಟರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದ. 12 ವರ್ಷಗಳ ನಂತರ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

More Trending News