ನವದೆಹಲಿ: ಕೇವಲ 20 ದಿನಗಳ ಹಿಂದೆ ಉತ್ತರಪ್ರದೇಶದ ಲಖನೌದಲ್ಲಿ ಆರಂಭಗೊಂಡು, ಬುಧವಾರ ಕರ್ನಾಟಕಕ್ಕೂ ವ್ಯಾಪಿಸಿದ್ದ 'ಐ ಲವ್ ಮೊಹಮ್ಮದ್' ವಿವಾದ ಇದೀಗ ಗುಜರಾತ್ ಗೂ ಹಬ್ಬಿದೆ. ಇದರೊಂದಿಗೆ ವಿವಾದ ಭುಗಿಲೆದ್ದ ರಾಜ್ಯಗಳ ಸಂಖ್ಯೆ 6ಕ್ಕೆ ಏರಿದೆ. ಮುಸ್ಲಿಮರ 'ಐ ಲವ್ ಮೊಹಮ್ಮದ್ ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂಗಳ 'ಐ ಲವ್ ಮಹಾದೇವ್' ಪೋಸ್ಟರ್ ವಾರ್ 6 ರಾಜ್ಯಗಳಲ್ಲಿ ಹಿಂದೂ ಮುಸ್ಲಿಂ ಕಲಹಕ್ಕೆ ಕಾರಣವಾಗಿದೆ. ಇಂಥ ಗಲಭೆ ಸಂಬಂಧ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದು, 38 ಜನರನ್ನು ಬಂಧಿಸಲಾಗಿದೆ. ಮೊದಲಿಗೆ ಕೇವಲ ಪೋಸ್ಟರ್ ವಾರ್ಗೆ ಸೀಮಿತವಾಗಿದ್ದ ಈ ವಿವಾದ ಇದೀಗ ಜಾಲತಾಣಗಳಲ್ಲಿ ವಿವಾದಿತ ವ ಸ್ಟೇಟಸ್ ವಾರ್ಗೂ ನಾಂದಿ ಹಾಡಿದೆ.
ಏನಿದು ವಿವಾದ?
ಉತ್ತರಪ್ರದೇಶದ ಕಾನ್ಸುರದಲ್ಲಿ ಸೆ.4ರಂದು ನಡೆದ ಈದ್ ಮಿಲಾದ್ ಉನ್ ನಬಿ ಮೆರವಣಿಗೆಯಲ್ಲಿ ಕೆಲ ಯುವಕರು 'ಐ ಲವ್ ಮೊಹಮ್ಮದ್' ಎಂದು ಬರೆದಿದ್ದ ಪೋಸ್ಟರ್ಗಳನ್ನು ಟ್ರಾ ಫಿಕ್ ಜಂಕ್ಷನ್ಗಳು, ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಆದರೆ, 'ಇದು ಹೊಸ ಸಂಪ್ರದಾಯ, ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥ ಪೋಸ್ಟರ್ ಪ್ರದರ್ಶನ ಕೋಮುಸಾಮರಸ್ಯಕ್ಕೆ ಧಕ್ಕೆ ತರಬಹುದು' ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್ ಕಿತ್ತೆಸೆದರು. ಅಲ್ಲಿಂದ ದಂಗಲ್ ಆರಂಭವಾಯಿತು.
11:15 PM (IST) Sep 26
IDF Hacks Gaza Phones to Stream Netanyahu UN Speech Amid UN Walkout ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
10:43 PM (IST) Sep 26
Shehbaz Sharif UNGA Lie ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, 'ಆಪರೇಷನ್ ಸಿಂಧೂರ್'ನಲ್ಲಿ ಭಾರತದ ವಿರುದ್ಧ ತಮ್ಮ ದೇಶ ಗೆದ್ದಿದೆ ಎಂದು ಹೇಳಿಕೊಂಡಿದ್ದಾರೆ.
09:22 PM (IST) Sep 26
Prakash Raj No Human is Illegal Slams Govt Over Gaza UAPA Arrests ನವದೆಹಲಿಯಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಭೂಮಿಯ ಮೇಲೆ ಯಾವ ಮಾನವನೂ ಅಕ್ರಮವಲ್ಲ ಮತ್ತು ವಲಸೆ ಅಪರಾಧವಲ್ಲ ಎಂದು ಪ್ರತಿಪಾದಿಸಿದ್ದಾರೆ.
08:41 PM (IST) Sep 26
Couple Donates 3.86 KG Gold Yagnopaveetham to Tirupati ವಿಶಾಖಪಟ್ಟಣದ ದಂಪತಿಗಳು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹3.86 ಕೋಟಿ ಮೌಲ್ಯದ, 3.86 ಕೆಜಿ ತೂಕದ ಚಿನ್ನದ ಯಜ್ಞೋಪವೀತವನ್ನು ದೇಣಿಗೆಯಾಗಿ ನೀಡಿದ್ದಾರೆ.
07:02 PM (IST) Sep 26
OPPO Reno14 5G Diwali Edition Launched ದೀಪಾವಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ OPPO Reno14 5G ದೀಪಾವಳಿ ಎಡಿಷನ್, ಉದ್ಯಮದಲ್ಲೇ ಮೊದಲ ಬಾರಿಗೆ ಹೀಟ್-ಸೆನ್ಸಿಟಿವ್, ಬಣ್ಣ ಬದಲಾಯಿಸುವ ತಂತ್ರಜ್ಞಾನವನ್ನು ಹೊಂದಿದೆ.
06:46 PM (IST) Sep 26
40 Minor Girls Found Locked in Toilet During Madrassa Inspection in UP ಲಕ್ನೋ ಸಮೀಪದ ನೋಂದಣಿಯಾಗದ ಮದರಸಾವೊಂದರಲ್ಲಿ ತಪಾಸಣೆ ನಡೆಸಿದಾಗ, 40 ಬಾಲಕಿಯರು ಶೌಚಾಲಯದಲ್ಲಿ ಬಂಧಿಯಾಗಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಕಟ್ಟಡವನ್ನು ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
05:51 PM (IST) Sep 26
05:51 PM (IST) Sep 26
ದುಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
04:31 PM (IST) Sep 26
ಬಾಂಗ್ಲಾದೇಶವನ್ನು ಸೋಲಿಸಿ ಏಷ್ಯಾಕಪ್ ಫೈನಲ್ಗೆ ಪ್ರವೇಶಿಸಿದ ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್ಗೆ ಅಭಿಮಾನಿಯೊಬ್ಬರು 'ಫೈನಲ್ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
04:22 PM (IST) Sep 26
Trisha Thosar Steals the Show: ಆರು ವರ್ಷದ ಮರಾಠಿ ನಟಿ ತ್ರಿಶಾ ತೋಶರ್, 'ನಾಲ್ 2' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
04:20 PM (IST) Sep 26
Sonam Wangchuk Arrested Under NSA Over Ladakh Protest Violence ಲೇಹ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಗಿದೆ.
03:03 PM (IST) Sep 26
02:50 PM (IST) Sep 26
Navratri 2025: ಪ್ರಧಾನಿ ನರೇಂದ್ರ ಮೋದಿಯವರ ನವರಾತ್ರಿ ಉಪವಾಸವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ಕಠಿಣ ಆಧ್ಯಾತ್ಮಿಕ ತಪಸ್ಸು. ಒಂಬತ್ತು ದಿನಗಳ ಕಾಲ ಕೇವಲ ನೀರು ಅಥವಾ ಒಂದೇ ಬಗೆಯ ಹಣ್ಣನ್ನು ಸೇವಿಸಿ ಇಂದ್ರಿಯ ನಿಗ್ರಹ ಆತ್ಮಶುದ್ಧೀಕರಣವನ್ನು ಸಾಧಿಸುತ್ತಾರೆ. ನವರಾತ್ರಿ ಉಪವಾಸದ ಬಗ್ಗೆ ತಿಳೀಯೋಣ.
01:58 PM (IST) Sep 26
ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ನಿರೀಕ್ಷೆಯಂತೆಯೇ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಹೀಗಿರುವಾಗಲೇ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಭಾರತ ತಂಡಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
01:37 PM (IST) Sep 26
Banned dog breed kills child: ಕಾನೂನುಬದ್ಧವಾಗಿ ಸಾಕುತ್ತಿದ್ದ ನಿಷೇಧಿತ ಎಕ್ಸ್ ಎಲ್ ಬುಲ್ಲಿ ತಳಿಯ ನಾಯಿಯೊಂದು 10 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಯಾವುದೇ ಆಕ್ರಮಣಕಾರಿ ಲಕ್ಷಣಗಳನ್ನು ತೋರದಿದ್ದ ಈ ಶ್ವಾನವು, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಮಗುವನ್ನು ಬಲಿ ಪಡೆದಿದೆ.
12:54 PM (IST) Sep 26
Mukhyamantri Mahila Udyami Yojana ಬಿಹಾರ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ 'ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ'ಯಡಿ 7.5 ಮಿಲಿಯನ್ ಮಹಿಳೆಯರ ಖಾತೆಗೆ ತಲಾ ₹10,000 ಜಮಾ ಮಾಡಿರುವುದಾಗಿ ಘೋಷಿಸಿದ್ದಾರೆ. ನವರಾತ್ರಿ ವೇಳೆ ಈ ಘೋಷಣೆ. ನಿತೀಶ್ ಕುಮಾರ್ ಸರ್ಕಾರ ಬಣ್ಣಿಸಿದ್ದಾರೆ.
12:41 PM (IST) Sep 26
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ದಾರೆ. ಏನದು ನೋಡೋಣ ಬನ್ನಿ.
12:23 PM (IST) Sep 26
Kashmiri Teacher Held: ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ನೆರವು ನೀಡಿದ ಆರೋಪದ ಮೇಲೆ ಶಿಕ್ಷಕ ಮೊಹಮ್ಮದ್ ಯೂಸುಫ್ ಕಟಾರಿಯನ್ನು ಬಂಧಿಸಲಾಗಿದೆ. ಈತನ ಕೈವಾಡ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯ ನಂತರ ಬೆಳಕಿಗೆ ಬಂದಿತ್ತು.
11:14 AM (IST) Sep 26
ದುಬೈ: ಪಹಲ್ಗಾಂ ಉಗ್ರದಾಳಿಯ ವಿಚಾರದ ಕುರಿತಂತೆ ಬಹಿರಂಗವಾಗಿ ತಮ್ಮ ಅನಿಸಿ ಹಂಚಿಕೊಂಡ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಐಸಿಸಿ ಎಚ್ಚರಿಕೆ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
10:47 AM (IST) Sep 26
Trump's anti-India policy: ಅಮೆರಿಕ ಅಧ್ಯಕ್ಷ ಟ್ರಂಪ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಭೇಟಿಯಾಗಿ 'ಶ್ರೇಷ್ಠ ನಾಯಕರು' ಎಂದು ಹೊಗಳಿದ್ದಾರೆ. ಭಾರತದೊಂದಿಗೆ ತೆರಿಗೆ ಸಮರ ನಡೆಯುತ್ತಿರುವ ಹೊತ್ತಲ್ಲೇ ನಡೆದ ಈ ಭೇಟಿಯು ಬದಲಾಗುತ್ತಿರುವ ರಾಜಕೀಯ ಸಮೀಕರಣದ ಸಂಕೇತವಾಗಿದೆ.
09:09 AM (IST) Sep 26
08:26 AM (IST) Sep 26
08:07 AM (IST) Sep 26
ಇಂದು ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ
ಸರ್ಕಾರವನ್ನೇ ಯಮಾರಿಸಿದ್ದ ಬುರುಡೆ ಗ್ಯಾಂಗ್
ಆಫ್ರಿಕಾ, ಗುಜರಾತ, ಸ್ಮಶಾನ ತೋರಿಸುವ ಗಣತಿ ಲೊಕೇಷನ್
ಮಿಗ್-21 ಯುದ್ಧವಿಮಾನ ನಿವೃತ್ತಿ
97 ತೇಜಸ್ ಖರೀದಿಗೆ ಸೇನೆ ಡೀಲ್