ಮುಂಬೈ: ಡಾಲರ್ ಎದುರು ರುಪಾಯಿ ಮೌಲ್ಯ ಪತನ ಮುಂದುವರೆದಿದ್ದು, ಶುಕ್ರವಾರ 30 ಪೈಸೆ ಕುಸಿತ ಕಂಡು 91.88ರಲ್ಲಿ ಮುಕ್ತಾಯವಾಗಿದೆ. ಅದು ಅಮೆರಿಕದ ಕರೆನ್ಸಿ ಎದುರು ಭಾರತದ ಕರೆನ್ಸಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಮಧ್ಯಂತರದ ವೇಳೆ ರುಪಾಯಿ ಮೌಲ್ಯ 92ರ ಗಡಿದಾಟಿತ್ತಾದರೂ ಬಳಿಕ ಅಲ್ಪ ಚೇತರಿಕೆ ಕಂಡಿತು. ವಿದೇಶಿ ಸಾಂಸ್ಥಿಕೆ ಹೂಡಿಕೆದಾರರಿಂದ ಹಣ ವಾಪಸ್, ಕಚ್ಚಾತೈಲ ಬೆಲೆ ಏರಿಕೆ, ಅಮೆರಿಕದ ಬಾಂಡ್ನ ಪ್ರತಿಫಲ ಹೆಚ್ಚಾಳವಾಗಿದ್ದು, ಡಾಲರ್ಗೆ ಬೇಡಿಕೆ ಹೆಚ್ಚಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
10:27 PM (IST) Jan 24
Bangladesh And Icc T20i World Cup 2026: ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20ಐ ವಿಶ್ವಕಪ್ನಿಂದ ಬಾಂಗ್ಲಾದೇಶಕ್ಕೆ ಗೇಟ್ಪಾಸ್ ಸಿಕ್ಕಿದೆ. ಇದು ಎರಡೂ ಕ್ರಿಕೆಟ್ ಮಂಡಳಿಯ ಆದಾಯ ಮೇಲೆ ಪರಿಣಾಮ ಬೀರಲಿದೆ.
09:48 PM (IST) Jan 24
Telangana HC Quashes Death Sentence of Mother Who Killed Her Infant ಗಂಭೀರ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುವ ದಾಖಲೆಗಳಿದ್ದರೂ ವಿಚಾರಣಾ ನ್ಯಾಯಾಲಯವು ಆರೋಪಿಯ ಮಾನಸಿಕ ಆರೋಗ್ಯವನ್ನು ಪರೀಕ್ಷಿಸದಿರುವುದು "ಆಶ್ಚರ್ಯಕರ" ಎಂದು ಪೀಠ ಹೇಳಿದೆ.
09:15 PM (IST) Jan 24
Why Smriti Mandhana Called Off Wedding? Friend Alleges Palash Muchhal Cheated ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿದ್ಯಾನ್ ಮಾನೆ ಅವರ ಪ್ರಕಾರ, ಪಲಾಶ್ ಮುಚ್ಚಲ್ ಸ್ಮೃತಿಗೆ ಮೋಸ ಮಾಡಿದ್ದಲ್ಲದೆ, ಬೆಡ್ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.
09:07 PM (IST) Jan 24
ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ ನಂಬಿಕೆ, ಕಾಳಿಪಟ್ಟಿ ಕಂದಸ್ವಾಮಿ ದೇವಸ್ಥಾನದ ಕಪ್ಪು ವಿಭೂತಿ ಹಾವು,ಚೇಳು, ಕೀಟಗಳ ಕಡಿತಕ್ಕೆ ಅತ್ಯುತ್ತಮ ಔಷಧಿ ಎಂಬ ನಂಬಿಕೆ ಇದೆ. ಹಲವರು ಗುಣಮುಖರಾಗಿದ್ದಾರೆ.
07:21 PM (IST) Jan 24
Gautam Adani Company:ಗೌತಮ್ ಅದಾನಿ ಬಗ್ಗೆ ಅಮೆರಿಕದಿಂದ ಬರುತ್ತಿರುವ ಸುದ್ದಿಗಳಿಂದ ಹೂಡಿಕೆದಾರರು ಭಯಭೀತರಾಗಿದ್ದಾರೆ. ಅದಾನಿ ಗುಂಪಿನಲ್ಲಿ ಈ ಕಂಪನಿಯ ಪಾಲು 60 ರೂ.ಗೆ ಇಳಿದಿದೆ. ಇದು ಹೂಡಿಕೆ ಅವಕಾಶವೋ ಅಥವಾ ಅಪಾಯವೋ?
06:54 PM (IST) Jan 24
ಫರಿದಾಬಾದ್ ನಿವಾಸಿ ಕೃಷ್ಣ ಜೈಸ್ವಾಲ್ ಈ ಕೊಲೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಮಗಳು ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆತ ಹೇಳಿದ್ದ.
06:39 PM (IST) Jan 24
ಮನೆಯಲ್ಲಿ ಸೋಲಾರ್ ಹಾಕಿದ್ರೆ ಮಾತ್ರ ಪ್ರಾಥಮಿಕ ಶಿಕ್ಷಕರಿಗೆ ಸಂಬಳ, ಸರ್ಕಾರದ ಆದೇಶಕ್ಕೆ ಟೀಚರ್ಸ್ ಕಂಗಾಲಾಗಿದ್ದಾರೆ. ಮನೆಯಲ್ಲಿ ಶೇಕಡಾ 100 ರಷ್ಟು ಸೋಲಾರ್ ಪ್ಯಾನಲ್ ಇನ್ಸ್ಟಾಲ್ ಮಾಡಿದವರಿಗೆ ಸಂಬಂಳ ನೀಡಲಾಗುತ್ತದೆ. ಏನಿದರ ಸತ್ಯ?
05:50 PM (IST) Jan 24
ICC Removes Bangladesh from T20 World Cup 2026; Scotland Joins ಐಸಿಸಿ ಅಂತಿಮ ತೀರ್ಪು ನೀಡಿದೆ. ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್ನಿಂದ ಹೊರಹಾಕಲಾಗಿದ್ದು, ಸ್ಕಾಟ್ಲೆಂಡ್ ತಂಡಕ್ಕೆ ಚಾನ್ಸ್ ನೀಡಿದೆ.
05:16 PM (IST) Jan 24
ರಥ ಸಪ್ತಮಿಯ ವಿಶೇಷ ದಿನದಂದು ಶತ್ರುಕಾಟ, ನಕಾರಾತ್ಮಕ ಶಕ್ತಿ ಹಾಗೂ ಅರ್ಧಕ್ಕೆ ನಿಂತ ಕೆಲಸಗಳಂತಹ ಸಮಸ್ಯೆಗಳಿಗೆ ಜ್ಯೋತಿಷಿ ಸುಧೀಂದ್ರ ದೇಶಪಾಂಡೆ ಗುರೂಜಿಯವರು ಸರಳ ಪರಿಹಾರಗಳನ್ನು ಸೂಚಿಸಿದ್ದಾರೆ. ನಿಂಬೆಹಣ್ಣಿನ ಪ್ರಯೋಗ ಮತ್ತು ಸೂರ್ಯೋದಯದ ಸಮಯದ ಪ್ರಾರ್ಥನೆಯ ಮೂಲಕ ಬದಲಾವಣೆ ತರುವ ಉಪಾಯ ವಿವರಿಸಲಾಗಿದೆ.
05:13 PM (IST) Jan 24
ಬೆಡ್ ರೂಂನಲ್ಲಿ ಪತಿ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ ಹೆಂಡತಿ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದು ಅತ್ತೆ ಓಡೋಡಿ ಬಂದರೂ ಮನೆಯೊಳಗೆ ಪ್ರವೇಶಕ್ಕೂ ಅವಕಾಶ ಸಿಗಲಿಲ್ಲ.
04:59 PM (IST) Jan 24
04:36 PM (IST) Jan 24
04:18 PM (IST) Jan 24
US Clothing Crisis: Trump's 50% Tariff on Indian Garments Backfires ಅಮೆರಿಕ ಭಾರತದ ಮೇಲೆ ಸುಂಕ ವಿಧಿಸಿದ್ದು, ಇದು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಆದರೆ, ಈ ಸುಂಕಗಳಿಂದ ಭಾರತಕ್ಕಿಂತ ಅಮೆರಿಕ ಹೆಚ್ಚು ಹೊಡೆತ ಅನುಭವಿಸುತ್ತಿದೆ ಅನ್ನೋದು ಗೊತ್ತಾಗಿದೆ.
04:15 PM (IST) Jan 24
ವೇದಿಕೆ ಮೇಲೆ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ, ನಟಿ ಮೌನಿ ರಾಯ್ ನೋವಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ವೇದಿಕೆ ಮೇಲೆ ನಡೆದ ಘಟನೆ ಏನು? ಮೌನಿ ರಾಯ್ ಸೊಂಟಕ್ಕೆ ಕೈ ಹಾಕಿದ್ದು ಯಾರು?
11:41 AM (IST) Jan 24
09:33 AM (IST) Jan 24
2025ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.73ರಷ್ಟು ಹೆಚ್ಚಾಗಿದ್ದು, ₹4.2 ಲಕ್ಷ ಕೋಟಿ ತಲುಪಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ 18ನೇ ರೋಜ್ಗಾರ್ ಮೇಳದಲ್ಲಿ 61,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.
07:51 AM (IST) Jan 24
ಟಾಟಾ ಮೋಟಾರ್ಸ್ 17 ಹೊಸ ಟ್ರಕ್ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಹೊಚ್ಚಹೊಸ ಅಜುರಾ, ಇ.ವಿ. ಟ್ರಕ್ಗಳು ಮತ್ತು ಸುಧಾರಿತ ಪ್ರೈಮಾ, ಸಿಗ್ನಾ ಮಾದರಿಗಳು ಸೇರಿದ್ದು, ಇವುಗಳು ಅಧಿಕ ಪೇಲೋಡ್ ಸಾಮರ್ಥ್ಯ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.
07:05 AM (IST) Jan 24
ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅದರ ಪತನ ನಿಶ್ಚಿತ ಎಂದಿದ್ದಾರೆ. ಕೇರಳದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ದುರಾಡಳಿತವನ್ನು ಟೀಕಿಸಿದ ಅವರು, ಶಬರಿಮಲೆ ಚಿನ್ನ ಕಳ್ಳರನ್ನು ಜೈಲಿಗಟ್ಟುವುದಾಗಿ 'ಮೋದಿ ಗ್ಯಾರಂಟಿ' ನೀಡಿದ್ದಾರೆ.