LIVE NOW
Published : Jan 21, 2026, 07:02 AM ISTUpdated : Jan 21, 2026, 10:50 PM IST

India Latest News Live: ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ - ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!

ಸಾರಾಂಶ

ನವದೆಹಲಿ: 2026ರ ಐಪಿಎಲ್‌ಗೂ ಮುನ್ನ ಟೂರ್ನಿಯಲ್ಲಿ ಗೂಗಲ್‌ನ ಎಐ ಪ್ಲಾಟ್‌ಫಾರ್ಮ್‌ ಆಗಿರುವ ಜೆಮಿನಿ ಪ್ರಾಯೋಜಕತ್ವ ಪಡೆದಿದೆ. 3 ವರ್ಷಗಳ ಅವಧಿಗೆ ₹270 ಕೋಟಿಗೆ ಈ ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಟಾಟಾ ಗ್ರೂಪ್‌ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದರ ಅವಧಿ 2028ರ ವರೆಗೂ ಇರಲಿದೆ. ಸಹ ಪ್ರಾಯೋಜಕರಾಗಿ ಈ ಬಾರಿ ಗೂಗಲ್‌ ಜೆಮಿನಿ ಸೇರ್ಪಡೆಯಾಗಿದೆ. ಇನ್ನು, ಬಿಸಿಸಿಐ ಆಯೋಜಿಸುತ್ತಿರುವ ಡಬ್ಲ್ಯುಪಿಎಲ್‌(ವುಮೆನ್ಸ್‌ ಪ್ರೀಮಿಯರ್‌ ಲೀಗ್‌)ನಲ್ಲಿ ಚಾಟ್‌ಜಿಪಿಟಿ ಪ್ರಾಯೋಜಕತ್ವ ಹೊಂದಿದೆ. ಈ ಸಂಸ್ಥೆಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಗೂಗಲ್‌ ಜೆಮಿನಿ ಈಗ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಪಡೆದಿದೆ. ಎರಡು ದೊಡ್ಡ ಎಐ ಬ್ರ್ಯಾಂಡ್‌ಗಳು ಕ್ರಿಕೆಟ್‌ನಲ್ಲಿ ಭಾಗಿಯಾಗುತ್ತಿರುವುದು ಆಸಕ್ತಿದಾಯಕವಾಗಿದೆ. ಇದರಿಂದ ಕ್ರಿಕೆಟ್ ಲೋಕದಲ್ಲಿ ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಮೌಲ್ಯ ಇನ್ನೂ ಹೆಚ್ಚಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 2026ರ ಐಪಿಎಲ್‌ ಪಂದ್ಯಗಳು ಮಾ.26ಕ್ಕೆ ಆರಂಭಗೊಳ್ಳಲಿದ್ದು, ಮೇ 31ರ ವರೆಗೂ ನಡೆಯಲಿವೆ.

10:50 PM (IST) Jan 21

ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ - ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!

ಕೆನಡಾದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಜೂಲಿಯಾ ಆನ್‌, ತಮಗೆ ಅಮೆರಿಕದ O-1B ವೀಸಾ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬೋಲ್ಡ್ ವಿಡಿಯೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದ ಅವರು, ಬಹುಶಃ ತಮ್ಮ ದೊಡ್ಡ ಸ್ತನಗಳೇ ಈ 'ಅಸಾಧಾರಣ ಸಾಮರ್ಥ್ಯ' ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
Read Full Story

09:21 PM (IST) Jan 21

ವಿರೋಧದ ಬಳಿಕ ಮೆತ್ತಗಾದ ದೊಡ್ಡಣ್ಣ, 'ನನಗೆ ಗ್ರೀನ್‌ಲ್ಯಾಂಡ್‌ ಬೇಕು, ಆದರೆ ಸೇನೆ ಉಪಯೋಗ ಮಾಡಲ್ಲ' ಎಂದ ಟ್ರಂಪ್‌!

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಸ್ವಾಧೀನ ಯೋಜನೆಯನ್ನು ಸಮರ್ಥಿಸಿಕೊಂಡರು. ಗ್ರೀನ್‌ಲ್ಯಾಂಡ್‌ನ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದ್ದಾರೆ.

Read Full Story

09:09 PM (IST) Jan 21

ನನ್ನ ಗಂಡ ಕ್ಯೂಟ್ ಇಲ್ಲ, ಆದ್ರೆ ವ್ಯಾಲೆಟ್ ಕ್ಯೂಟ್ ಆಗಿದೆ; ಜೀವನಕ್ಕೆ ಪತಿ ಸೌಂದರ್ಯ ಮುಖ್ಯವೇ ಅಲ್ಲ ಎಂದ ಪತ್ನಿ!

ತಾನು ಪತಿಯನ್ನು ಪ್ರೀತಿಸಿ ಮದುವೆಯಾಗಿಲ್ಲ, ಬದಲಾಗಿ ಆತನ ಹಣ ಮತ್ತು ಐಷಾರಾಮಿ ಜೀವನದ ಆಸೆ ಪೂರೈಸುವ ಶಕ್ತಿಗಾಗಿ ವರಿಸಿದ್ದೇನೆ ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರೀತಿಗಿಂತ ಭೌತಿಕ ಆಸೆಗಳು ಮುಖ್ಯವಾಗುತ್ತಿವೆ ಎಂದಿದ್ದಾರೆ.

Read Full Story

07:56 PM (IST) Jan 21

WPLನ ಹೊಸ ತಾರೆ - ಯಾರು ಈ 16ರ ಹರೆಯದ ಚೋಟಿ ಶಫಾಲಿ

ಮಹಿಳಾ ಐಪಿಎಲ್‌ನಲ್ಲಿ 16 ವರ್ಷದ ದಿಯಾ ಯಾದವ್ ಅತಿ ಕಿರಿಯ ಆಟಗಾರ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿಯಾಗಿರುವ ಇವರು, ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ 'ಚೋಟಿ ಶಫಾಲಿ' ಎಂದೇ ಖ್ಯಾತರಾಗಿದ್ದಾರೆ. 

Read Full Story

07:06 PM (IST) Jan 21

ಮಹಾಯುತಿ ಬ್ರೇಕ್‌? - ದೇವೇಂದ್ರ ಫಡ್ನವಿಸ್‌ಗೆ ಕೈಕೊಟ್ಟ ಶಿಂಧೆ ಸೇನೆ, ರಾಜ್‌ ಠಾಕ್ರೆ ಎಂಎನ್‌ಎಸ್‌ ಜೊತೆ ಮೈತ್ರಿ!

ಕಲ್ಯಾಣ್-ಡೊಂಬಿವ್ಲಿಯಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜೊತೆಗಿನ ತನ್ನ ಕಹಿಯನ್ನು ಬದಿಗಿಟ್ಟು ಮೈತ್ರಿ ಮಾಡಿಕೊಂಡಿದೆ.

Read Full Story

06:41 PM (IST) Jan 21

ಧನಶ್ರೀ ವರ್ಮಾ ಜತೆಗಿನ ವಿಚ್ಛೇದನದ ಬಳಿಕ ಯಜುವೇಂದ್ರ ಚಾಹಲ್‌ಗೆ ಇನ್ನೊಂದು ಆಘಾತ!

Yuzvendra Chahal: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಆರ್‌ಜೆ ಮಹಾವಶ್ ಜೊತೆಗಿನ ಸ್ನೇಹದಿಂದ ಸುದ್ದಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ, ಇದೀಗ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

Read Full Story

06:32 PM (IST) Jan 21

ರಕ್ಷಣಾ ಸಚಿವರನ್ನೇ ಫೂಲ್​ ಮಾಡಿದ ಪಾಕಿಗಳು! ನಕಲಿ ಅಂಗಡಿ ಉದ್ಘಾಟನೆಗೆ ಕರೆದು ಬಕ್ರಾ ಮಾಡಿದ್ರು

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಯಾಲ್‌ಕೋಟ್‌ನಲ್ಲಿ ಪಿಜ್ಜಾ ಹಟ್ ಎಂದು ಭಾವಿಸಿ ನಕಲಿ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದ್ದಾರೆ. ಈ ಘಟನೆಯ ನಂತರ, ಪಿಜ್ಜಾ ಹಟ್ ಅಧಿಕೃತವಾಗಿ ಅದು ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದು, ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
Read Full Story

06:27 PM (IST) Jan 21

ನೆರೆಮನೆಯವನೊಂದಿಗೆ ತಾಯಿಯ ಸರಸ ನೋಡಿದ ಕಂದ - ಮಹಡಿಯಿಂದ ತಳ್ಳಿ 5 ವರ್ಷದ ಮಗನ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ನೆರೆಮನೆಯವನೊಂದಿಗೆ ತನ್ನ ಅನೈ*ತಿಕ ಸಂಬಂಧವನ್ನು ನೋಡಿದ 5 ವರ್ಷದ ಮಗನನ್ನು ಮಹಡಿಯಿಂದ ತಳ್ಳಿ ಕೊಂದ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

Read Full Story

05:54 PM (IST) Jan 21

ಮೊದಲ ಹೆಂಡ್ತಿ ನನ್ನ ಕಸಿನ್​, 2ನೆಯವ್ಳು ರಾಂಗ್​ ನಂಬರ್​, 3ನೇಯವ್ಳು ಅವಳ ಫ್ರೆಂಡ್, ಕೋಪ ಬಂದಾಗ 4ನೆಯವ್ಳು!

ವೈರಲ್ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ವರು ಪತ್ನಿಯರನ್ನು ಪರಿಚಯಿಸಿದ್ದಾನೆ. ರಾಂಗ್ ನಂಬರ್, ಸ್ನೇಹಿತೆಯ ಪ್ರೀತಿ ಮತ್ತು ಜಗಳದಂತಹ ವಿಚಿತ್ರ ಕಾರಣಗಳಿಂದ ಈತ ನಾಲ್ಕು ಮದುವೆಯಾಗಿದ್ದು, ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Read Full Story

05:28 PM (IST) Jan 21

ಅಮಾಯಕ ದೀಪಕ್‌ನ ಆ*ತ್ಮಹ*ತ್ಯೆಗೆ ಕಾರಣವಾಗಿದ್ದ ಶಿಮ್ಜಿತಾ ಅರೆಸ್ಟ್‌, ಸಂಬಂಧಿಯ ಮನೆಯಿಂದ ಬಂಧನ!

Deepak Suicide Case: Accused Shimjitha Arrested from Relative's House ದೀಪಕ್ ಸಾವಿನ ಪ್ರಕರಣ ದಾಖಲಾದ ನಂತರ ಶಿಮ್ಜಿತಾ ತಲೆಮರೆಸಿಕೊಂಡಿದ್ದರು. ತರುವಾಯ, ಪೊಲೀಸ್ ತನಿಖೆಯ ಸಮಯದಲ್ಲಿ ಶಿಮ್ಜಿತಾ ಅವರನ್ನು ಬಂಧಿಸಲಾಗಿದೆ.

Read Full Story

05:03 PM (IST) Jan 21

200ಕ್ಕೂ ಹೆಚ್ಚು ಜನರಿಗೆ ಹೆರಿಗೆ ಮಾಡಿಸಿದ ನರ್ಸ್‌ ತನ್ನ ಮೊದಲ ಮಗುವಿನ ಜನನದ ವೇಳೆ ಸಾವು

ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದ ನರ್ಸ್ ಒಬ್ಬರು ತಮ್ಮದೇ ಸ್ವಂತ ಮಗುವಿನ ಜನನದ ವೇಳೆ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ನಡೆದಿದೆ.

Read Full Story

05:00 PM (IST) Jan 21

Breaking - ಜೊಮಾಟೋ ಸಿಇಒ ಸ್ಥಾನದಿಂದ ಕೆಳಗಿಳಿದ ದಿಪೀಂದರ್‌ ಗೋಯೆಲ್‌!

ಎಟರ್ನಲ್‌ (ಹಿಂದಿನ ಜೊಮಾಟೋ) ಸಂಸ್ಥಾಪಕ ದೀಪಿಂದರ್‌ ಗೋಯೆಲ್‌ ಅವರು ಗ್ರೂಪ್‌ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಿಂಕಿಟ್‌ನ ಮುಖ್ಯಸ್ಥ ಅಲ್ಬಿಂದರ್‌ ದಿಂಡ್ಸಾ ಹೊಸ ಸಿಇಒ ಆಗಲಿದ್ದು, ಗೋಯೆಲ್ ಅವರು ಹೆಚ್ಚಿನ ಅಪಾಯದ ಹೊಸ ಆಲೋಚನೆಗಳನ್ನು ಅನ್ವೇಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story

03:50 PM (IST) Jan 21

ಉದ್ಘಾಟನೆಗೂ ಮೊದಲೇ ಕುಸಿದು ಬಿತ್ತು 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್‌ - ಕಳಪೆ ಕಾಮಗಾರಿ ಆರೋಪ

ಗುಜರಾತ್‌ನ ಸೂರತ್‌ನಲ್ಲಿ 33 ಗ್ರಾಮಗಳಿಗೆ ನೀರು ಪೂರೈಸಲು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್, ಉದ್ಘಾಟನೆಗೂ ಮುನ್ನವೇ ಪರೀಕ್ಷೆಯ ವೇಳೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.

Read Full Story

03:31 PM (IST) Jan 21

Air fryerನಲ್ಲಿ ಕರಿದ ಬೋಂಡಾ, ಬಜ್ಜಿ ಗರಿ ಗರಿ ಆಗ್ಬೇಕು ಅಂದ್ರೆ ಹೀಗ್ ಮಾಡಿ

Air fryer ಸೇರಿ ಅಡುಗೆ ಮನೆಯಲ್ಲಿರುವ ಹಲವು ಎಲೆಕ್ಟ್ರಿಕ್ ಉಪಕರಣಗಳು ನಮಗೆ ವಿಧ ವಿಧವಾಗಿ ಸಹಕರಿಸುತ್ತದೆ. ಅದರಲ್ಲಿಯೂ ಏರ್ ಫ್ರೈಯರ್‌ನಲ್ಲಿ ಮಾಡಿದ ಕುರುಕು ತಿಂಡಿಗಳು ಗರಿ ಗರಿಯಾಗಲೇನು ಮಾಡಬೇಕು? ನಿಮಗಾಗಿ ಟಿಪ್ಸ್.

 

Read Full Story

03:06 PM (IST) Jan 21

ದಾಳಿಂಬೆ ಸಿಪ್ಪೆ ಜೊತೆ ಇದನ್ನು ಬೆರೆಸಿದರೆ ನೈಸರ್ಗಿಕವಾಗಿ ಶಾಶ್ವತ ಕಪ್ಪಾಗುವುದು ನಿಮ್ಮ ಕೂದಲು!

ಇಂದಿನ ದಿನಗಳಲ್ಲಿ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ರಾಸಾಯನಿಕಯುಕ್ತ ಹೇರ್ ಡೈಗಳು ಕ್ಯಾನ್ಸರ್‌ನಂತಹ ಅಪಾಯಗಳನ್ನು ತರುವುದರಿಂದ, ಮನೆಯಲ್ಲಿಯೇ ದಾಳಿಂಬೆ ಸಿಪ್ಪೆ, ಸಾಸಿವೆ ಎಣ್ಣೆ ಬಳಸಿ ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕೂದಲನ್ನು ಕಪ್ಪಾಗಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Read Full Story

02:52 PM (IST) Jan 21

ಐಸಿಸಿಯ ಒತ್ತಡಕ್ಕೆ ಮಣಿಯಲ್ಲ, ಭಾರತಕ್ಕೆ ಹೋಗಲ್ಲ - ಮೊಂಡುವಾದ ಮಾಡುತ್ತಿರುವ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದಲೇ ಔಟ್?

ಢಾಕಾ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಿಗದಿಯಾಗಿವೆ. ಆದರೆ ಬಾಂಗ್ಲಾದೇಶ ಮೊಂಡುವಾದ ಮುಂದುವರೆಸಿದ್ದು, ಭಾರತಕ್ಕೆ ಕ್ರಿಕೆಟ್ ಆಡಲು ಬರೊಲ್ಲ ಎಂದು ಪಟ್ಟು ಹಿಡಿದಿದೆ.

 

Read Full Story

02:25 PM (IST) Jan 21

ತಮ್ಮೂರು ಅರುಣಾಚಲ ಪ್ರದೇಶದ ಬುಡಕಟ್ಟು ನೃತ್ಯಕ್ಕೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಕಿರೆನ್ ರಿಜಿಜು

ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಅರುಣಾಚಲ ಪ್ರದೇಶದ ಸರೋಕ್ ಹಬ್ಬದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ, ಅಲ್ಲಿನ ಅಕ ಸಮುದಾಯದ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅವರ ಈ ನೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

01:00 PM (IST) Jan 21

ನೇಣಿಗೆ ಕೊರಳೊಡ್ಡುವ ಮುನ್ನ ನಾ ನೆನಪಾಗಲಿಲ್ಲವೇ - ಮಾಲೀಕನ ಶವ ಇದ್ದ ವಾಹನವನ್ನು 4 ಕಿಮೀ ವರೆಗೂ ಹಿಂಬಾಲಿಸಿದ ಶ್ವಾನ

ಮಧ್ಯಪ್ರದೇಶದಲ್ಲಿ, ಮಾಲೀಕನ ಸಾವಿನ ನಂತರ ಆತನ ಶವವಿದ್ದ ವಾಹನವನ್ನು ಶ್ವಾನವೊಂದು 4 ಕಿ.ಮೀ. ಹಿಂಬಾಲಿಸಿದೆ. ಮರಣೋತ್ತರ ಪರೀಕ್ಷೆಯಿಂದ ಹಿಡಿದು ಅಂತಿಮ ಸಂಸ್ಕಾರದವರೆಗೂ ಶವದ ಬಳಿಯೇ ಇದ್ದು, ತನ್ನ ಅಪಾರ ನಿಯತ್ತನ್ನು ಪ್ರದರ್ಶಿಸಿ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.

Read Full Story

12:11 PM (IST) Jan 21

ಲಿವ್​-ಇನ್​ ಸಂಬಂಧದಲ್ಲಿ ಪತ್ನಿಯ ಸ್ಥಾನಮಾನ - ತಪ್ಪಿದರೆ ಕಠಿಣ ಶಿಕ್ಷೆ- ಹೈಕೋರ್ಟ್​ನಿಂದ ಐತಿಹಾಸಿಕ ತೀರ್ಪು

ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯರಿಗೆ ಪತ್ನಿಯ ಸ್ಥಾನಮಾನ ನೀಡುವ ಮೂಲಕ ರಕ್ಷಣೆ ಒದಗಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಹೊಂದುವ ಪುರುಷರ ವಿರುದ್ಧ ಹೊಸ ಕಾನೂನಿನಡಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story

11:55 AM (IST) Jan 21

ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ - ತಾಯಿ ಮಧು ಚೋಪ್ರಾ ಬೇಸರ

ಪ್ರಿಯಾಂಕಾ ಚೋಪ್ರಾ ಅವರ ಯಶಸ್ಸು ಅವರ ಕುಟುಂಬದ ಮೇಲೆ, ವಿಶೇಷವಾಗಿ ಅವರ ಸಹೋದರ ಸಿದ್ಧಾರ್ಥ್ ಚೋಪ್ರಾ ಮೇಲೆ ಬೀರಿದ ಪರಿಣಾಮವನ್ನು ಅವರ ತಾಯಿ ಮಧು ಚೋಪ್ರಾ ವಿವರಿಸಿದ್ದಾರೆ. ಮಗ ಸಿದ್ಧಾರ್ಥ್ ಪೋಷಕರ ಹೆಚ್ಚಿನ ಗಮನವಿಲ್ಲದೆ ಏಕಾಂಗಿಯಾಗಿ ಬೆಳೆಯಬೇಕಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 

Read Full Story

11:08 AM (IST) Jan 21

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ - ಇಂದು ಅಧಿಕೃತ ಘೋಷಣೆ? ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬರುವ 2026ರ ಐಪಿಎಲ್ ಟೂರ್ನಿ ಆಯೋಜನೆಗೊಳ್ಳಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

10:54 AM (IST) Jan 21

ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುದೀರ್ಘ ಬಾಹ್ಯಾಕಾಶ ಸೇವೆಯಿಂದ ನಿವೃತ್ತಿ

ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು 27 ವರ್ಷಗಳ ಸುದೀರ್ಘ ಸೇವೆ ಬಳಿಕ ನಾಸಾದಿಂದ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಯಾತ್ರೆಗಳನ್ನು ಪೂರ್ಣಗೊಳಿಸಿ ಹಲವು  ದಾಖಲೆ ನಿರ್ಮಿಸಿದ್ದಾರೆ.

Read Full Story

10:00 AM (IST) Jan 21

ಮುಂಬೈ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ-ಆಫ್‌ ಕನಸು ಜೀವಂತ! ಹರ್ಮನ್‌ಪ್ರೀತ್ ಕೌರ್ ಪಡೆಗೆ ಸಂಕಷ್ಟ

ವಡೋದರಾ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.

 

Read Full Story

08:54 AM (IST) Jan 21

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಕೊನೆಯ ಚಾಲೆಂಜ್‌; ಇಂದು ಭಾರತ-ಕಿವೀಸ್ ಮೊದಲ ಫೈಟ್

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡವು ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ತಂಡಕ್ಕೆ ಬೂಮ್ರಾ, ಹಾರ್ದಿಕ್‌ ಪಾಂಡ್ಯರ ವಾಪಸಾತಿಯಿಂದ ಬಲ ಬಂದಿದ್ದು, ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.  

Read Full Story

08:33 AM (IST) Jan 21

ಬಾಂಗ್ಲಾದೇಶ - ನಾಪತ್ತೆಯಾಗಿದ್ದ ಹಿಂದೂ ವಿದ್ಯಾರ್ಥಿ ಶವ ನದಿಯಲ್ಲಿ ಪತ್ತೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ನಾಪತ್ತೆಯಾಗಿದ್ದ ಅಭಿ ಎಂಬ ಹಿಂದೂ ವಿದ್ಯಾರ್ಥಿಯ ಶವ ನವೊಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗಿದೆ.

Read Full Story

07:34 AM (IST) Jan 21

ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ

ಮಧುರೈ ಎಲ್‌ಐಸಿ ಕಚೇರಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಪೊಲೀಸರ ತನಿಖೆಯಿಂದ ಇದೊಂದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಡೆತ್ ಕ್ಲೇಮ್ ಫೈಲ್‌ಗಳನ್ನು ನಾಶಮಾಡಲು ಸಹೋದ್ಯೋಗಿಯೇ ನಡೆಸಿದ ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.
Read Full Story

More Trending News