ನವದೆಹಲಿ: 2026ರ ಐಪಿಎಲ್ಗೂ ಮುನ್ನ ಟೂರ್ನಿಯಲ್ಲಿ ಗೂಗಲ್ನ ಎಐ ಪ್ಲಾಟ್ಫಾರ್ಮ್ ಆಗಿರುವ ಜೆಮಿನಿ ಪ್ರಾಯೋಜಕತ್ವ ಪಡೆದಿದೆ. 3 ವರ್ಷಗಳ ಅವಧಿಗೆ ₹270 ಕೋಟಿಗೆ ಈ ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಟಾಟಾ ಗ್ರೂಪ್ ಐಪಿಎಲ್ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದರ ಅವಧಿ 2028ರ ವರೆಗೂ ಇರಲಿದೆ. ಸಹ ಪ್ರಾಯೋಜಕರಾಗಿ ಈ ಬಾರಿ ಗೂಗಲ್ ಜೆಮಿನಿ ಸೇರ್ಪಡೆಯಾಗಿದೆ. ಇನ್ನು, ಬಿಸಿಸಿಐ ಆಯೋಜಿಸುತ್ತಿರುವ ಡಬ್ಲ್ಯುಪಿಎಲ್(ವುಮೆನ್ಸ್ ಪ್ರೀಮಿಯರ್ ಲೀಗ್)ನಲ್ಲಿ ಚಾಟ್ಜಿಪಿಟಿ ಪ್ರಾಯೋಜಕತ್ವ ಹೊಂದಿದೆ. ಈ ಸಂಸ್ಥೆಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಜೆಮಿನಿ ಈಗ ಐಪಿಎಲ್ನಲ್ಲಿ ಪ್ರಾಯೋಜಕತ್ವ ಪಡೆದಿದೆ. ಎರಡು ದೊಡ್ಡ ಎಐ ಬ್ರ್ಯಾಂಡ್ಗಳು ಕ್ರಿಕೆಟ್ನಲ್ಲಿ ಭಾಗಿಯಾಗುತ್ತಿರುವುದು ಆಸಕ್ತಿದಾಯಕವಾಗಿದೆ. ಇದರಿಂದ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಹಾಗೂ ಡಬ್ಲ್ಯುಪಿಎಲ್ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಮೌಲ್ಯ ಇನ್ನೂ ಹೆಚ್ಚಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 2026ರ ಐಪಿಎಲ್ ಪಂದ್ಯಗಳು ಮಾ.26ಕ್ಕೆ ಆರಂಭಗೊಳ್ಳಲಿದ್ದು, ಮೇ 31ರ ವರೆಗೂ ನಡೆಯಲಿವೆ.
10:50 PM (IST) Jan 21
09:21 PM (IST) Jan 21
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡ್ ಸ್ವಾಧೀನ ಯೋಜನೆಯನ್ನು ಸಮರ್ಥಿಸಿಕೊಂಡರು. ಗ್ರೀನ್ಲ್ಯಾಂಡ್ನ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದ್ದಾರೆ.
09:09 PM (IST) Jan 21
ತಾನು ಪತಿಯನ್ನು ಪ್ರೀತಿಸಿ ಮದುವೆಯಾಗಿಲ್ಲ, ಬದಲಾಗಿ ಆತನ ಹಣ ಮತ್ತು ಐಷಾರಾಮಿ ಜೀವನದ ಆಸೆ ಪೂರೈಸುವ ಶಕ್ತಿಗಾಗಿ ವರಿಸಿದ್ದೇನೆ ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರೀತಿಗಿಂತ ಭೌತಿಕ ಆಸೆಗಳು ಮುಖ್ಯವಾಗುತ್ತಿವೆ ಎಂದಿದ್ದಾರೆ.
07:56 PM (IST) Jan 21
ಮಹಿಳಾ ಐಪಿಎಲ್ನಲ್ಲಿ 16 ವರ್ಷದ ದಿಯಾ ಯಾದವ್ ಅತಿ ಕಿರಿಯ ಆಟಗಾರ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿಯಾಗಿರುವ ಇವರು, ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ 'ಚೋಟಿ ಶಫಾಲಿ' ಎಂದೇ ಖ್ಯಾತರಾಗಿದ್ದಾರೆ.
07:06 PM (IST) Jan 21
ಕಲ್ಯಾಣ್-ಡೊಂಬಿವ್ಲಿಯಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜೊತೆಗಿನ ತನ್ನ ಕಹಿಯನ್ನು ಬದಿಗಿಟ್ಟು ಮೈತ್ರಿ ಮಾಡಿಕೊಂಡಿದೆ.
06:41 PM (IST) Jan 21
Yuzvendra Chahal: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಆರ್ಜೆ ಮಹಾವಶ್ ಜೊತೆಗಿನ ಸ್ನೇಹದಿಂದ ಸುದ್ದಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ, ಇದೀಗ ಪರಸ್ಪರ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ.
06:32 PM (IST) Jan 21
06:27 PM (IST) Jan 21
ನೆರೆಮನೆಯವನೊಂದಿಗೆ ತನ್ನ ಅನೈ*ತಿಕ ಸಂಬಂಧವನ್ನು ನೋಡಿದ 5 ವರ್ಷದ ಮಗನನ್ನು ಮಹಡಿಯಿಂದ ತಳ್ಳಿ ಕೊಂದ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
05:54 PM (IST) Jan 21
05:28 PM (IST) Jan 21
Deepak Suicide Case: Accused Shimjitha Arrested from Relative's House ದೀಪಕ್ ಸಾವಿನ ಪ್ರಕರಣ ದಾಖಲಾದ ನಂತರ ಶಿಮ್ಜಿತಾ ತಲೆಮರೆಸಿಕೊಂಡಿದ್ದರು. ತರುವಾಯ, ಪೊಲೀಸ್ ತನಿಖೆಯ ಸಮಯದಲ್ಲಿ ಶಿಮ್ಜಿತಾ ಅವರನ್ನು ಬಂಧಿಸಲಾಗಿದೆ.
05:03 PM (IST) Jan 21
ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದ ನರ್ಸ್ ಒಬ್ಬರು ತಮ್ಮದೇ ಸ್ವಂತ ಮಗುವಿನ ಜನನದ ವೇಳೆ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ನಡೆದಿದೆ.
05:00 PM (IST) Jan 21
ಎಟರ್ನಲ್ (ಹಿಂದಿನ ಜೊಮಾಟೋ) ಸಂಸ್ಥಾಪಕ ದೀಪಿಂದರ್ ಗೋಯೆಲ್ ಅವರು ಗ್ರೂಪ್ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಿಂಕಿಟ್ನ ಮುಖ್ಯಸ್ಥ ಅಲ್ಬಿಂದರ್ ದಿಂಡ್ಸಾ ಹೊಸ ಸಿಇಒ ಆಗಲಿದ್ದು, ಗೋಯೆಲ್ ಅವರು ಹೆಚ್ಚಿನ ಅಪಾಯದ ಹೊಸ ಆಲೋಚನೆಗಳನ್ನು ಅನ್ವೇಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.
03:50 PM (IST) Jan 21
ಗುಜರಾತ್ನ ಸೂರತ್ನಲ್ಲಿ 33 ಗ್ರಾಮಗಳಿಗೆ ನೀರು ಪೂರೈಸಲು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್, ಉದ್ಘಾಟನೆಗೂ ಮುನ್ನವೇ ಪರೀಕ್ಷೆಯ ವೇಳೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.
03:31 PM (IST) Jan 21
Air fryer ಸೇರಿ ಅಡುಗೆ ಮನೆಯಲ್ಲಿರುವ ಹಲವು ಎಲೆಕ್ಟ್ರಿಕ್ ಉಪಕರಣಗಳು ನಮಗೆ ವಿಧ ವಿಧವಾಗಿ ಸಹಕರಿಸುತ್ತದೆ. ಅದರಲ್ಲಿಯೂ ಏರ್ ಫ್ರೈಯರ್ನಲ್ಲಿ ಮಾಡಿದ ಕುರುಕು ತಿಂಡಿಗಳು ಗರಿ ಗರಿಯಾಗಲೇನು ಮಾಡಬೇಕು? ನಿಮಗಾಗಿ ಟಿಪ್ಸ್.
03:06 PM (IST) Jan 21
02:52 PM (IST) Jan 21
ಢಾಕಾ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಿಗದಿಯಾಗಿವೆ. ಆದರೆ ಬಾಂಗ್ಲಾದೇಶ ಮೊಂಡುವಾದ ಮುಂದುವರೆಸಿದ್ದು, ಭಾರತಕ್ಕೆ ಕ್ರಿಕೆಟ್ ಆಡಲು ಬರೊಲ್ಲ ಎಂದು ಪಟ್ಟು ಹಿಡಿದಿದೆ.
02:25 PM (IST) Jan 21
01:00 PM (IST) Jan 21
ಮಧ್ಯಪ್ರದೇಶದಲ್ಲಿ, ಮಾಲೀಕನ ಸಾವಿನ ನಂತರ ಆತನ ಶವವಿದ್ದ ವಾಹನವನ್ನು ಶ್ವಾನವೊಂದು 4 ಕಿ.ಮೀ. ಹಿಂಬಾಲಿಸಿದೆ. ಮರಣೋತ್ತರ ಪರೀಕ್ಷೆಯಿಂದ ಹಿಡಿದು ಅಂತಿಮ ಸಂಸ್ಕಾರದವರೆಗೂ ಶವದ ಬಳಿಯೇ ಇದ್ದು, ತನ್ನ ಅಪಾರ ನಿಯತ್ತನ್ನು ಪ್ರದರ್ಶಿಸಿ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.
12:11 PM (IST) Jan 21
11:55 AM (IST) Jan 21
ಪ್ರಿಯಾಂಕಾ ಚೋಪ್ರಾ ಅವರ ಯಶಸ್ಸು ಅವರ ಕುಟುಂಬದ ಮೇಲೆ, ವಿಶೇಷವಾಗಿ ಅವರ ಸಹೋದರ ಸಿದ್ಧಾರ್ಥ್ ಚೋಪ್ರಾ ಮೇಲೆ ಬೀರಿದ ಪರಿಣಾಮವನ್ನು ಅವರ ತಾಯಿ ಮಧು ಚೋಪ್ರಾ ವಿವರಿಸಿದ್ದಾರೆ. ಮಗ ಸಿದ್ಧಾರ್ಥ್ ಪೋಷಕರ ಹೆಚ್ಚಿನ ಗಮನವಿಲ್ಲದೆ ಏಕಾಂಗಿಯಾಗಿ ಬೆಳೆಯಬೇಕಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
11:08 AM (IST) Jan 21
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬರುವ 2026ರ ಐಪಿಎಲ್ ಟೂರ್ನಿ ಆಯೋಜನೆಗೊಳ್ಳಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
10:54 AM (IST) Jan 21
ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು 27 ವರ್ಷಗಳ ಸುದೀರ್ಘ ಸೇವೆ ಬಳಿಕ ನಾಸಾದಿಂದ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಯಾತ್ರೆಗಳನ್ನು ಪೂರ್ಣಗೊಳಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
10:00 AM (IST) Jan 21
ವಡೋದರಾ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.
08:54 AM (IST) Jan 21
ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡಕ್ಕೆ ಬೂಮ್ರಾ, ಹಾರ್ದಿಕ್ ಪಾಂಡ್ಯರ ವಾಪಸಾತಿಯಿಂದ ಬಲ ಬಂದಿದ್ದು, ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.
08:33 AM (IST) Jan 21
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ನಾಪತ್ತೆಯಾಗಿದ್ದ ಅಭಿ ಎಂಬ ಹಿಂದೂ ವಿದ್ಯಾರ್ಥಿಯ ಶವ ನವೊಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗಿದೆ.
07:34 AM (IST) Jan 21