ಲಖನೌ: ಗ್ರಾಹಕರಿಗೆ ಆರೋಗ್ಯಕರ ಮೊಟ್ಟೆಯನ್ನು ವಿತರಿಸುವ ಉದ್ದೇಶದಿಂದ, ಔಷಧಗಳ ರೀತಿಯಲ್ಲೇ ಮೊಟ್ಟೆಯ ಮೇಲೂ ಮಾರಾಟಗಾರರು ಕಡ್ಡಾಯವಾಗಿ ಎಕ್ಸ್ಪೈರಿ ದಿನಾಂಕವನ್ನು ನಮೂದಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದು ಏ.1ರಿಂದಲೇ ಜಾರಿಗೆ ಬರಲಿದೆ.
‘ಏ.1ರಿಂದ ಮೊಟ್ಟೆಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸುವುದು ಕಡ್ಡಾಯ. ಇದರಿಂದ ಗ್ರಾಹಕರು ಮೊಟ್ಟೆ ಎಷ್ಟು ತಾಜಾ ಇದೆ ಎಂದು ತಿಳಿಯಬಹುದು. ಮೊಟ್ಟೆಗಳ ಮೇಲೆ ಯಾವುದೇ ಲೇಬಲ್ ಇಲ್ಲದಿದ್ದರೆ, ಅವುಗಳನ್ನು ಬಳಕೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11:07 PM (IST) Mar 18
10:08 PM (IST) Mar 18
ಭಾರತದಲ್ಲಿ ನಕ್ಸಲರು ಮತ್ತು ದಂಗೆಕೋರ ಗುಂಪುಗಳಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಓರ್ವ ಅಮೆರಿಕನ್ ಪ್ರಜೆ ಸೇರಿದಂತೆ ಏಳು ವಿದೇಶಿಗರನ್ನು ಬಂಧಿಸಿದೆ. ಮ್ಯಾನ್ಮಾರ್ನಲ್ಲಿ ತರಬೇತಿ ಪಡೆದಿದ್ದ ಈ ಆರೋಪಿಗಳಿಗೆ ನ್ಯಾಯಾಲಯ 11 ದಿನಗಳ ಕಸ್ಟಡಿ ನೀಡಿದೆ.
09:13 PM (IST) Mar 18
ಮೆಟ್ರೋ ಟ್ರೈನ್ನಲ್ಲಿ ಸ್ಲೀವ್ಲೆಸ್ ಡ್ರೆಸ್ ಹಾಕಿಕೊಂಡು ನಿಂತಿದ್ದ ಯುವತಿಯ ಕಂಕುಳಿಂದ ಬರುತ್ತಿದ್ದ ಬೆವರಿನ ವಾಸನೆಗೆ ಬೇಸತ್ತ ಸಹ ಪ್ರಯಾಣಿಕನೊಬ್ಬ, ಬ್ಯಾಗ್ನಲ್ಲಿ ಕೈ ಹಾಕಿ ಏನು ಮಾಡಿದ್ದಾನೆ ನೋಡಿ . ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
09:06 PM (IST) Mar 18
ಅಮೆರಿಕಾ-ಇಸ್ರೇಲ್ ಯುದ್ಧದ ನಡುವೆಯೂ, ಪರಿಣಾಮಕಾರಿಯಾಗಿ ಮುಚ್ಚಲ್ಪಟ್ಟ ಹರ್ಮುಜ್ ಜಲಸಂಧಿಯ ಮೂಲಕ ಇರಾನ್ ಮಿಲಿಯನ್ಗಟ್ಟಲೇ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. ತೈಲ ಆರಂಭವಾದಾಗಿನಿಂದ ತೈಲ ತುಂಬಿದ 90 ಹಡಗುಗಳು ಈ ಜಲಮಾರ್ಗವನ್ನು ದಾಟಿ ಸಾಗಿವೆ.
08:19 PM (IST) Mar 18
ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರ ಕೈ ಹಿಡಿಯಲು ಮತ್ತು ಸೊಂಟದ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ, ನೀತಾ ಅವರು ತಪ್ಪಿಸಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
06:15 PM (IST) Mar 18
ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಗೆ ಯಾರಾದರೂ ಮಾಟ ಮಾಡಿಸಿದ್ದರೇ? ಅವರ ಧ್ವನಿಗೆ ಬಂದಿದ್ದ ಸಮಸ್ಯೆ ಏನು? ಮನೆಯವರು ಯಾಕೆ ಹಾಗೆ ಅನುಮಾನಪಟ್ಟರು? ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನರಕ ತೋರಿಸಿದ ಆ ಹಾಡು ಯಾವುದು?
06:11 PM (IST) Mar 18
06:06 PM (IST) Mar 18
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇಬ್ಬರು ಸ್ಪೋಟಕ ಬ್ಯಾಟರ್ಗಳಿಗೆ ನಾಯಕ ಹಾಗೂ ಉಪನಾಯಕ ಪಟ್ಟ ಕಟ್ಟಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
05:57 PM (IST) Mar 18
ನಟಿ ರಿತು ಚೌಧರಿ ಹಂಚಿಕೊಂಡಿರುವ ಭಾವುಕ ಇನ್ಸ್ಟಾಗ್ರಾಮ್ ಸ್ಟೋರಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೀತಿ, ಬ್ರೇಕಪ್ ಮತ್ತು ವದಂತಿಗಳ ಬಗ್ಗೆ ಅವರ ಮಾತುಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
05:45 PM (IST) Mar 18
ದುಬೈ: ಅಂತಾರಾಷ್ಟ್ರೀಯ ಟಿ20 ನೂತನ ರ್ಯಾಂಕಿಂಗ್ ಪ್ರಕಟವಾಗಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ.ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ ಪಡೆದಿದ್ದಾರೆ.
05:37 PM (IST) Mar 18
ಮೊದಲು 'ಜನ ನಾಯಗನ್' ಚಿತ್ರವನ್ನು ಜನವರಿ 9 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇರುವುದು ಮತ್ತು ಕೋರ್ಟ್ ಕೇಸ್ಗಳಿಂದಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ.
05:24 PM (IST) Mar 18
ಲಾಹೋರ್: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸಡ್ಡು ಹೊಡೆದು ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ಇದೀಗ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಅಷ್ಟಕ್ಕೂ ಏನಿದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
04:47 PM (IST) Mar 18
ಉದಯಪುರದ ಮಾಜಿ ರಾಜಮನೆತನದ ಆಸ್ತಿ ವಿವಾದದಲ್ಲಿ, ದಿವಂಗತ ಅರವಿಂದ್ ಸಿಂಗ್ ಮೇವಾರ್ ಅವರ ಪುತ್ರಿ ಪದ್ಮಜಾ ಕುಮಾರಿ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸಹೋದರ ಲಕ್ಷ್ಯರಾಜ್ ಸಿಂಗ್ ಮಂಡಿಸಿರುವ 'ವಿಲ್' ಪ್ರಕರಣ ಬಾಕಿ ಇರುವ ಕಾರಣ, ಆಡಳಿತಾತ್ಮಕ ಹಕ್ಕು ನೀಡಲು ನ್ಯಾಯಾಲಯ ನಿರಾಕರಿಸಿದೆ.
03:27 PM (IST) Mar 18
ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದನ್ನು 'ದೊಡ್ಡ ರಾಜತಾಂತ್ರಿಕ ಪ್ರಮಾದ' ಎಂದು ಕ್ರೀಡಾ ಸಚಿವರು ಕರೆದಿದ್ದಾರೆ. ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
03:23 PM (IST) Mar 18
03:03 PM (IST) Mar 18
ರೋಗಿಯೊಬ್ಬರು ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳುವ ಮೂಲಕ ತಮ್ಮ ಬಿಲ್ನಲ್ಲಿ 44,000 ರೂ. ಉಳಿತಾಯ ಮಾಡಿದ್ದಾರೆ. ತಾವು ಪಡೆಯದ ಚಿಕಿತ್ಸೆಗೂ ಬಿಲ್ನಲ್ಲಿ ಹಣ ಸೇರಿಸಿರುವುದನ್ನು ಕಂಡುಕೊಂಡ ಅವರು, ಈ ಮೂಲಕ ಆಸ್ಪತ್ರೆ ಬಿಲ್ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮಹತ್ವವನ್ನು ಸಾರಿದ್ದಾರೆ.
02:34 PM (IST) Mar 18
02:19 PM (IST) Mar 18
ಅರ್ಜಿದಾರರ ಕುಟುಂಬ ಎದುರಿಸಿದ ವೈಯಕ್ತಿಕ ನಷ್ಟ ಅಥವಾ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯ, ಭಾವನೆಗಳು ನ್ಯಾಯಾಂಗ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಒತ್ತಿಹೇಳಿದೆ.
01:53 PM (IST) Mar 18
01:18 PM (IST) Mar 18
01:12 PM (IST) Mar 18
ಇರಾನ್-ಇಸ್ರೇಲ್ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ಅಸುರಕ್ಷಿತವಾಗಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತಕ್ಕೆ ನಿರಂತರ ತೈಲ ಪೂರೈಕೆಯ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ, ಸೌದಿಯು ತನ್ನ ಯಾನ್ಬು ಬಂದರಿನಿಂದ ಕೆಂಪು ಸಮುದ್ರದ ಮೂಲಕ ಪರ್ಯಾಯ ಮಾರ್ಗವನ್ನು ಬಳಸಿ ಭಾರತಕ್ಕೆ ಕಚ್ಚಾ ತೈಲ ಸಾಗಿಸುತ್ತಿದೆ.
12:59 PM (IST) Mar 18
ಐಪಿಎಲ್ 2026ರ ಸೀಸನ್ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಜಿಂಕ್ಯ ರಹಾನೆಯನ್ನು ತಮ್ಮ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಿದೆ. ರಿಂಕು ಸಿಂಗ್ ಹೆಸರು ಕೂಡ ಚರ್ಚೆಯಲ್ಲಿತ್ತು, ಆದರೆ ಮ್ಯಾನೇಜ್ಮೆಂಟ್ ರಹಾನೆ ಮೇಲೆಯೇ ನಂಬಿಕೆ ಇಟ್ಟಿದೆ. ಅಷ್ಟಕ್ಕೂ ಕೆಕೆಆರ್ ಪ್ಲ್ಯಾನ್ ಏನು?
12:49 PM (IST) Mar 18
13 ವರ್ಷದ ಮಗನೋಡುತ್ತಿದ್ದಂತೆಯೇ ಪತಿ ಈ ಘೋರ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ. ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು ಎಂದು ಮೃತ ಪುಷ್ಪಾ ಗುಪ್ತಾ ಅವರ ಸಹೋದರ ಕಮಲೇಶ್ ಕುಮಾರ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ.
12:45 PM (IST) Mar 18
ದೆಹಲಿಯ ಪಾಲಂ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ, ಅಗ್ನಿ ಶಾಮಕದಳದ ವಿಳಂಬ ಸಾವು ಹೆಚ್ಚಾಗಲು ಕಾರಣ ಎಂದು ಆರೋಪಿಸಲಾಗಿದೆ.
12:40 PM (IST) Mar 18
ಜೆರೋಧಾ ಸಿಇಒ ನಿತಿನ್ ಕಾಮತ್, ಬ್ಯಾಂಕಿಂಗ್ ಅಪ್ಲಿಕೇಶನ್ಗಳು ಭದ್ರತೆಯ ಹೆಸರಿನಲ್ಲಿ ಕೇಳುವ SMS, ಕಾಂಟ್ಯಾಕ್ಟ್ಗಳಂತಹ ಅತಿಯಾದ ಪರ್ಮಿಷನ್ಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಜಾಗತಿಕ ಸೈಬರ್ ಸೆಕ್ಯುರಿಟಿ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
12:09 PM (IST) Mar 18
ಸ್ಕೂಟರ್ಗೆ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತಪಟ್ಟ ಮೂವರೂ ಮಲಬಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
12:08 PM (IST) Mar 18
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ NDA ಜತೆ ಮೈತ್ರಿ ಮಾಡಿಕೊಂಡರೆ ದಳಪತಿ ವಿಜಯ್ ಅವರಿಗೆ ಬಿಜೆಪಿ 80 ಸ್ಥಾನ ಹಾಗೂ ಡಿಸಿಎಂ ಹುದ್ದೆ ನೀಡುವುದಾಗಿ ಆಫರ್ ನೀಡಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವಿಜಯ್ ಗೆಳತಿ ಹಾಗೂ ನಟಿ ಅಮಿತ್ ಶಾರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ.
11:49 AM (IST) Mar 18
11:47 AM (IST) Mar 18
11:37 AM (IST) Mar 18
11:28 AM (IST) Mar 18
ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳು ಮಾಡಿದ ಎರಡು ರೀಲ್ಸ್ ವೈರಲ್ ಆಗಿವೆ. ಒಂದರಲ್ಲಿ ತನ್ನನ್ನು ಮುಟ್ಟಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿದರೆ, ಮತ್ತೊಂದರಲ್ಲಿ ತಾನೇ ಯುವಕನೊಬ್ಬನನ್ನು ಅನುಮತಿಯಿಲ್ಲದೆ ಮುಟ್ಟಿದ್ದಾಳೆ. ಹುಡುಗ, ಮಹಿಳೆಯನ್ನು ಟಚ್ ಮಾಡಿದ್ರೆ ಪರಿಣಾಮ ಭಯಂಕರವಾಗಿರುತ್ತದೆ.
10:27 AM (IST) Mar 18
ಉತ್ತರ ಕೊರಿಯಾದ ಸಂಸತ್ ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ಶೇ. 99.97% ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ಆದರೆ, 1957ರ ಬಳಿಕ ಇದೇ ಮೊದಲ ಬಾರಿಗೆ ಶೇ. 0.07%ರಷ್ಟು ಜನ ಕಿಮ್ ವಿರುದ್ಧ ಮತ ಚಲಾಯಿಸಿದ್ದು, ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ.
10:26 AM (IST) Mar 18
ಲಿಫ್ಟ್ನಲ್ಲಿ ವೃದ್ಧ ಜೋಡಿಯೊಂದು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ. ಈ ರೊಮ್ಯಾಂಟಿಕ್ ಕ್ಷಣ ಹಾಸ್ಯಮಯವಾಗಿ ಬದಲಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
10:12 AM (IST) Mar 18
09:56 AM (IST) Mar 18
09:28 AM (IST) Mar 18
ಬಿಗ್ಬಾಸ್ ಖ್ಯಾತಿಯ ರೇಣು ಸುಧಿ, ತಮ್ಮ ಪತಿ ಕೊಲ್ಲಂ ಸುಧಿ ಅವರ ಫೋಟೋವನ್ನು ಇನ್ಸ್ಟಾಗ್ರಾಂ ಡಿಪಿಯಿಂದ ತೆಗೆದುಹಾಕಿದ್ದಕ್ಕೆ ಮತ್ತು ಪೇಯ್ಡ್ ಸಬ್ಸ್ಕ್ರಿಪ್ಷನ್ ಆರಂಭಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬ್ಲೂ ಟಿಕ್ಗಾಗಿ ಡಿಪಿ ಬದಲಿಸಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
08:40 AM (IST) Mar 18
08:39 AM (IST) Mar 18
family dispute: ಮದುವೆಯಾಗಿ ಇಬ್ಬರು ಮಕ್ಕಳಾದ ಬಳಿಕ ಸನ್ಯಾಸತ್ವ ಸ್ವೀಕರಿಸಿದ ವ್ಯಕ್ತಿಯನ್ನು, ಆತನ ಪತ್ನಿ ಮತ್ತು ಭಾವಮೈದುನ ಮಥುರಾದಲ್ಲಿ ಸಾರ್ವಜನಿಕವಾಗಿ ಥಳಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಹಲವು ವರ್ಷಗಳ ಕೌಟುಂಬಿಕ ಕಲಹವೇ ಈ ದಾಳಿಗೆ ಕಾರಣ ಎನ್ನಲಾಗಿದೆ.