ನವದೆಹಲಿ: ಬಿಹಾರದಲ್ಲಿ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಒಂದೇ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ, ಪ್ರತಿಪಕ್ಷ ಆರ್ಜೆಡಿಯ ಪಾಲಿಗೆ ಹೊಸ ತಲೆನೋವು ಶುರುವಾಗಿದೆ. ಐಆರ್ಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿ ಲಾಲೂ ಕುಟುಂಬದ ಮೂವರ ವಿರುದ್ಧ ದೆಹಲಿ ಕೋರ್ಟ್ ದೋಷಾರೋಪ ಹೊರಿಸಿದೆ. ಐಆರ್ಸಿಟಿ ಹೋಟೆಲ್ಗಳನ್ನು ಅಕ್ರಮವಾಗಿ ಖಾಸಗಿ ಸಂಸ್ಥೆಗೆ ಲೀಸ್ಗೆ ನೀಡಿ, ಬದಲಿಗೆ 3 ಎಕರೆ ಭೂಮಿಯನ್ನು ಪಡೆದ ಆರೋಪ ಮಾಜಿ ಮುಖ್ಯಮಂತ್ರಿ ದಂಪತಿಯಾದ ಲಾಲೂ ಹಾಗೂ ರಾಬ್ದಿ ದೇವಿ, ಪುತ್ರ ತೇಜಸ್ವಿ ಯಾದವ್ ಅವರ ಮೇಲಿದೆ

10:32 PM (IST) Oct 15
Ahmedabad Nominated to Host 2030 Commonwealth Games 2030ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಕಾಮನ್ವೆಲ್ತ್ ಕ್ರೀಡಾಕೂಟದ ಕಾರ್ಯಕಾರಿ ಮಂಡಳಿಯು ಅಹಮದಾಬಾದ್ ಅನ್ನು ನಾಮನಿರ್ದೇಶನ ಮಾಡಿದೆ.
10:24 PM (IST) Oct 15
07:33 PM (IST) Oct 15
Hardik Pandyas Girlfriend Mahika Sharma Hints at Marriage ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನದ ನಂತರ ಮಾಡೆಲ್ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
06:08 PM (IST) Oct 15
06:07 PM (IST) Oct 15
Veteran Actor Pankaj Dheer Dies ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರದ ಮೂಲಕ ಮನೆಮಾತಾಗಿದ್ದ ಮತ್ತು ಡಾ. ವಿಷ್ಣುವರ್ಧನ್ ಅವರ 'ವಿಷ್ಣುಸೇನಾ' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಪಂಕಜ್ ಧೀರ್, ಕ್ಯಾನ್ಸರ್ನೊಂದಿಗೆ ಸುದೀರ್ಘ ಹೋರಾಟದ ನಂತರ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು.
06:07 PM (IST) Oct 15
Sonakshi Sinha Zaheer Iqbal: ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸಿ ಮದ್ವೆಯಾದಾಗಿನಿಂದಲೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಗಾಗ ಟ್ರೋಲ್ ಆಗ್ತಾನೆ ಇರ್ತಾರೆ. ಈಗ ಅವರು ಮತ್ತೊಂದು ಹೊಸ ಕಾರಣಕ್ಕೆ ಟ್ರೋಲ್ ಆಗಿದ್ದು, ಟ್ರೋಲರ್ಸ್ಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
05:02 PM (IST) Oct 15
Buy 10g Gold for Just ₹38K Centre Mandates Hallmarking on 9-Carat Gold ಏರುತ್ತಿರುವ ಚಿನ್ನದ ಬೆಲೆಯಿಂದಾಗಿ ಮಧ್ಯಮ ವರ್ಗದವರಿಗೆ ಚಿನ್ನ ಖರೀದಿಸುವುದು ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರವು ಕೈಗೆಟುಕುವ ದರದಲ್ಲಿ 9 ಕ್ಯಾರೆಟ್ ಹಾಲ್ಮಾರ್ಕ್ ಚಿನ್ನವನ್ನು ಪರಿಚಯಿಸಿದೆ.
04:59 PM (IST) Oct 15
ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮೊದಲ ಸಲ ತುಟಿಬಿಚ್ಚಿದ್ದಾರೆ.
03:57 PM (IST) Oct 15
Centre Plans Next Phase of PSB Mergers IOB, CBI, BoI Likely to Merge with SBI, PNB ಸಂಪುಟ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯ ವಿಲೀನ ಪ್ರಕ್ರಿಯೆಯ ಹಂತಗಳನ್ನು ಪರಿಶೀಲನೆ ಮಾಡುತ್ತಿದೆ.
03:46 PM (IST) Oct 15
ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಈಗಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾಗದ ಶಮಿ, ಇದೀಗ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.
03:19 PM (IST) Oct 15
US vs China military technology: ಚೀನಾವೂ ಇಡೀ ವಿಶ್ವವನ್ನೇ ತಲುಪಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಜಗತ್ತಿನ ಯಾವ ಮೂಲೆಯಿಂದಲಾದರೂ ಬೆದರಿಕೆಗಳನ್ನು ಪತ್ತೆ ಹಚ್ಚುವ ಹಾಗೂ ಎದುರಿಸುವ ಸಾಮರ್ಥ್ಯ ಈ ರಕ್ಷಣಾ ವ್ಯವಸ್ಥೆಗಿದೆ ಎಂದು ವರದಿಯಾಗಿದೆ.
02:23 PM (IST) Oct 15
Mukesh Ambani's Antilia kitchen: ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಅಡುಗೆಮನೆಯ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಕುಟುಂಬದ ಸಸ್ಯಹಾರಿ ಆಹಾರ ಪದ್ಧತಿ ಮತ್ತು ಮೆನುವನ್ನು ಯಾರು ನಿರ್ಧರಿಸುತ್ತಾರೆ?
01:56 PM (IST) Oct 15
ಹೊಸದಾಗಿ ಬೈಕ್ ಖರೀದಿಸುವವರಲ್ಲಿ ಹೆಚ್ಚಿನವರು ನೋಡುವ ಅಂಶವೆಂದರೆ ಮೈಲೇಜ್. ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್ಗಳ ಮೇಲೆ ಆಸಕ್ತಿ ತೋರಿಸುತ್ತಾರೆ. ಭಾರತದಲ್ಲಿ ಲಭ್ಯವಿರುವ ಅಂತಹ ಕೆಲವು ಬಜೆಟ್ ಸ್ನೇಹಿ ಬೈಕ್ಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
01:40 PM (IST) Oct 15
ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜಿಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೆಲ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದೆ. ಆರ್ಸಿಬಿ ರಿಲೀಸ್ ಮಾಡಬಹುದಾದ ಆಟಗಾರರು ಯಾರು? ಯಾರನ್ನು ಆರ್ಸಿಬಿ ಫ್ರಾಂಚೈಸಿಯು ರೀಟೈನ್ ಮಾಡಿಕೊಳ್ಳಲಿದೆ ನೋಡೋಣ ಬನ್ನಿ.
01:27 PM (IST) Oct 15
ಅಮಿತಾಭ್ ಬಚ್ಚನ್ ಅವರ ಕೆಬಿಸಿ ಶೋನಲ್ಲಿ ಗುಜರಾತ್ನ ಬಾಲಕ ಇತೀಶ್ ಭಟ್ನ ವರ್ತನೆ ವೈರಲ್ ಆಗಿದೆ. ಕೆಲವರು ಇದನ್ನು ಬ್ರಾಹ್ಮಣ ಸಮುದಾಯದ ದುರಹಂಕಾರವೆಂದು ಟೀಕಿಸಿದ್ದು, ಬಾಲಕನ ವರ್ತನೆಗೆ ಜಾತಿಯ ಲೇಪ ಮಾಡಿರುವುದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.
12:53 PM (IST) Oct 15
12:39 PM (IST) Oct 15
Prashant Kishor Bihar election: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಪಕ್ಷ ಸಂಘಟನೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.
12:13 PM (IST) Oct 15
Tamil Actor Sarathkumar: 'ಡ್ಯೂಡ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಪ್ರದೀಪ್ ರಂಗನಾಥನ್ ಅವರಿಗೆ ಅವಮಾನಿಸಿದ ಪತ್ರಕರ್ತೆಗೆ, ಹಿರಿಯ ನಟ ಶರತ್ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಹೀರೋ ಎಂದರೆ ಯಾರು ಎಂಬುದನ್ನು ವಿವರಿಸಿ, ಪತ್ರಕರ್ತೆಯ ಮಾತಿಗೆ ತಿರುಗೇಟು ನೀಡಿದ ಅವರ ವಿಡಿಯೋ ಭಾರಿ ವೈರಲ್ ಆಗಿದೆ.
11:15 AM (IST) Oct 15
11:04 AM (IST) Oct 15
Allegations against Ashley Tellis: ಅಮೆರಿಕಾದಲ್ಲಿ ರಕ್ಷಣಾ ತಜ್ಞರಾಗಿರುವ ಭಾರತೀಯ ಮೂಲದ ಆಶ್ಲೇ ಜೆ. ಟೆಲ್ಲಿಸ್ ಅವರನ್ನು, ರಹಸ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರು ಯುಎಸ್-ಭಾರತ ಸಂಬಂಧಗಳ ಪ್ರಮುಖ ತಜ್ಞರಾಗಿದ್ದರು
09:47 AM (IST) Oct 15
2025-26ನೇ ಸಾಲಿನ 91ನೇ ಆವೃತ್ತಿಯ ರಣಜಿ ಟ್ರೋಫಿ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದೆ. ತನ್ನ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವು ರಾಜ್ಕೋಟ್ನಲ್ಲಿ ಬಲಿಷ್ಠ ಸೌರಾಷ್ಟ್ರವನ್ನು ಎದುರಿಸಲಿದೆ.