LIVE NOW
Published : Jan 12, 2026, 06:04 AM ISTUpdated : Jan 12, 2026, 09:13 AM IST

India Latest News Live: ವಿಜಯ್ ಹಜಾರೆ ಟ್ರೋಫಿ - ಮುಂಬೈ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

ಸಾರಾಂಶ

ಗುಜರಾತ್‌ನಲ್ಲಿರುವ ಐತಿಹಾಸಿಕ ಸೋಮನಾಥ ದೇಗುಲದ ಮೇಲೆ ನಡೆದ ಮೊದಲ ದಾಳಿಗೆ 1000 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ನಡೆದ ಶೌರ್ಯ ಯಾತ್ರೆಯಲ್ಲೂ ಭಾಗಿಯಾಗಿದ್ದ ಅವರು, ಶಿವನ ಆಯುಧ ‘ಡಮರು’ ನುಡಿಸಿ ಗಮನ ಸೆಳೆದರು.

Karnataka Cricket Team

09:13 AM (IST) Jan 12

ವಿಜಯ್ ಹಜಾರೆ ಟ್ರೋಫಿ - ಮುಂಬೈ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳು ಆರಂಭಗೊಂಡಿದ್ದು, ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Read Full Story

07:57 AM (IST) Jan 12

ಹೈದರಾಬಾದ್ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಬೀದರ್ ಜಿಲ್ಲೆಯ ಅಲ್ತಾಫ್‌ ಬಂಧನ

ಹೈದರಾಬಾದ್‌ನ ಕಟ್ಟಾ ಮೈಸಮ್ಮ ದೇವಸ್ಥಾನದಲ್ಲಿ ಬೀದರ್ ಮೂಲದ ಯುವಕನೊಬ್ಬ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದ್ದು, ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
Read Full Story

07:37 AM (IST) Jan 12

2 ದಿನ, 2000 ಬಲಿ? ಇರಾನ್‌ನಲ್ಲಿ ತುಂಬಿದ ಶವಾಗರಗಳು, ಶವವಿಡಲು ಜಾಗವೇ ಇಲ್ಲ; ಸೂಕ್ತ ವೈದ್ಯರೂ ಇಲ್ಲ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸೇನಾ ಪಡೆಗಳು ಪ್ರತಿಭಟನಾಕಾರರನ್ನು ನಿರ್ದಯವಾಗಿ ಹತ್ತಿಕ್ಕುತ್ತಿವೆ. ಇದರ ಪರಿಣಾಮವಾಗಿ, ಆಸ್ಪತ್ರೆಗಳು ಗಾಯಾಳುಗಳು ಮತ್ತು ಶವಗಳಿಂದ ತುಂಬಿ ತುಳುಕುತ್ತಿದ್ದು, ಸಾವಿನ ಸಂಖ್ಯೆಯ ಬಗ್ಗೆ ಗೊಂದಲಮಯ ವರದಿಗಳು ಬರುತ್ತಿವೆ.
Read Full Story

06:30 AM (IST) Jan 12

ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಸ್ಮಾರ್ಟ್‌ಫೋನ್‌ ಬಳಸದಿರುವ ಹಿಂದಿನ ರಹಸ್ಯ

ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಅವರು ತಾವು ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ, ಅಲ್‌ ಫಲಾಹ್‌ ವಿವಿ ಜಪ್ತಿ ಸಾಧ್ಯತೆಗಳಿವೆ.

Read Full Story

More Trending News