LIVE NOW
Published : Aug 12, 2026, 06:43 AM ISTUpdated : Aug 12, 2026, 08:36 AM IST

India Latest News Live: ಭಾರತ ಜೊತೆ ಮತ್ತೆ ಕ್ರಿಕೆಟ್‌ ಆಡಲು ಬಾಂಗ್ಲಾ ಪ್ರಧಾನಿಯಿಂದ ಮಾತುಕತೆ!

ಸಾರಾಂಶ

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗೌರವ, ಹೆಮ್ಮೆ ಮತ್ತು ವೈಭವದಿಂದ ಆಚರಿಸಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣದ ಪಣ ತೊಡಿ. ಪ್ರತಿ ಮನೆಯ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ರೀಲ್ ಹಂಚಿಕೊಂಡಿರುವ ಮೋದಿ, ‘ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ ಹಾಗೂ ಅಭಿವೃದ್ಧಿಶೀಲ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲಿ, ಪ್ರತಿ ಹೃದಯದಲ್ಲಿ ತ್ರಿವರ್ಣ ಧ್ವಜ) ಆಚರಿಸೋಣ’ ಎಂದು ಹೇಳಿದ್ದಾರೆ.

ಜತೆಗೆ, ಮೈತ್ರಿಪಕ್ಷಗಳ ಜತೆಗಿನ ಸಾಪ್ತಾಹಿಕ ಸಭೆಗೆ ತಾವು ಆಗಮಿಸಿದ ವೇಳೆ ಸಂಸದರು ಮತ್ತು ಸಚಿವರು ತ್ರಿವರ್ಣ ಧ್ವಜವನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್‌ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.

08:36 AM (IST) Aug 12

ಭಾರತ ಜೊತೆ ಮತ್ತೆ ಕ್ರಿಕೆಟ್‌ ಆಡಲು ಬಾಂಗ್ಲಾ ಪ್ರಧಾನಿಯಿಂದ ಮಾತುಕತೆ!

ಭಾರತದೊಂದಿಗೆ ಹದಗೆಟ್ಟಿದ್ದ ಕ್ರಿಕೆಟ್ ಸಂಬಂಧವನ್ನು ಸರಿಪಡಿಸಲು ಬಾಂಗ್ಲಾದೇಶ ಮುಂದಾಗಿದ್ದು, ದ್ವಿಪಕ್ಷೀಯ ಸರಣಿ ಆಯೋಜನೆ ಕುರಿತು ಮಾತುಕತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಬಾಂಗ್ಲಾ ಪ್ರಧಾನಿ ಮತ್ತು ಭಾರತೀಯ ಹೈಕಮಿಷನರ್ ಚರ್ಚೆ ನಡೆಸುತ್ತಿದ್ದು, 2025ರಲ್ಲಿ ರದ್ದಾಗಿದ್ದ ಸರಣಿಯನ್ನು ಪುನರಾರಂಭಿಸುವ ಗುರಿ ಹೊಂದಲಾಗಿದೆ.
Read Full Story

08:33 AM (IST) Aug 12

ಹಣದ ಜೊತೆ ತೃಪ್ತಿ ನೀಡುವ ಬಿಸಿನೆಸ್ ಐಡಿಯಾ; ಬಂಡವಾಳವಿಲ್ಲದೆ ಲಕ್ಷಾಧಿಪತಿಯಾಗುವ ರಹಸ್ಯ

ಮಹಾನಗರಗಳಲ್ಲಿ ಜನಪ್ರಿಯವಾಗುತ್ತಿರುವ 'ಕಂಪ್ಯಾನಿಯನ್ ಆ್ಯಂಡ್ ಕನ್ಸೈರ್ಜ್', ರೆಂಟಲ್ ಬುಟಿಕ್, ಕ್ಲೌಡ್ ಕಿಚನ್‌ನಂತಹ ಕಡಿಮೆ ಬಂಡವಾಳದ ಬಿಸಿನೆಸ್‌ಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಉದ್ಯಮಗಳು ಯಾವುದೇ ದೊಡ್ಡ ಹೂಡಿಕೆಯಿಲ್ಲದೆ ತಿಂಗಳಿಗೆ ಲಕ್ಷದವರೆಗೆ ಆದಾಯ ಗಳಿಸುವ ಅವಕಾಶವನ್ನು ಒದಗಿಸುತ್ತವೆ.
Read Full Story

07:13 AM (IST) Aug 12

Jharkhan Student Protest - ರಾಹುಲ್ ಗಾಂಧಿಗೆ ಬಿಸಿ ತುಪ್ಪವಾದ ಜಾರ್ಖಂಡ್‌ನ ವಿದ್ಯಾರ್ಥಿ ಹೋರಾಟ!

ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಬಲಪ್ರಯೋಗವನ್ನು ಖಂಡಿಸಿ ಎನ್‌ಡಿಎ ಸಂಸದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿಯೇ ಈ ಘಟನೆ ನಡೆದಿದ್ದರಿಂದ, ಎನ್‌ಡಿಎ ಸಂಸದರು ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ 'ಜವಾಬ್ ದೋ' ಎಂದು ಆಗ್ರಹಿಸಿದರು.
Read Full Story

07:01 AM (IST) Aug 12

ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪನೆ - ಇಸ್ರೋಗೆ ನಾಸಾ ಆಹ್ವಾನ, ಸಾಫ್ಟ್ ಲ್ಯಾಂಡಿಂಗ್ ಅನುಭವ

ಅಮೆರಿಕದ ನಾಸಾ ಸಂಸ್ಥೆಯು ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಇಸ್ರೋವನ್ನು ಆಹ್ವಾನಿಸಿದೆ. ಆರ್ಟಿಮಿಸ್ ಒಪ್ಪಂದದ ಅಡಿಯಲ್ಲಿ ಈ ಸಹಭಾಗಿತ್ವವು ರೂಪುಗೊಳ್ಳಲಿದ್ದು, ಇದು ಚಂದ್ರಯಾನ-3ರ ಯಶಸ್ಸಿನ ಅನುಭವವನ್ನು ಬಳಸಿಕೊಂಡು, ನಾಸಾದ ತಂತ್ರಜ್ಞಾನವನ್ನು ಭಾರತಕ್ಕೆ ತರಲಿದೆ.
Read Full Story

More Trending News