ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲೀಯರು!

By Web DeskFirst Published Apr 18, 2019, 2:47 PM IST
Highlights

ಚುನಾವಣೆ ಮಧ್ಯೆ ಅಟ್ಟಹಾಸ ಮೆರೆದ ನಕ್ಸಲರು| ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲರು| ಮಹಿಳಾ ಚುನಾವಣಾಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ನಕ್ಸಲರು| ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಘಟನೆ| ಚುನಾವಣಾ ಅಧಿಕಾರಿಯ ವಾಹನಕ್ಕೆ ಬೆಂಕಿ ಹಚ್ಚಿ ಗುಂಡಿಕ್ಕಿದ ದುರುಳರು|

ಭುವನೇಶ್ವರ್(ಏ.18): ದೇಶ ಎರಡನೇ ಹಂತದ ಮತದಾನಕ್ಕೆ ಮುನ್ನುಡಿ ಬರೆದಿರುವ ಮಧ್ಯೆಯೇ, ಒಡಿಶಾದಲ್ಲಿ ನಕ್ಸಲರು ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಅಧಿಕಾರಿಯನ್ನು, ನಕ್ಸಲೀಯರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Odisha: Maoists kill polling official, torch vehicles ahead of 2nd phase of LS polls

Read Story | https://t.co/xhr0C0TfVw pic.twitter.com/aS470d4elI

— ANI Digital (@ani_digital)

ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ  ಅಧಿಕಾರಿಯ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು, ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯನ್ನು ನಕ್ಸಲರು ಬಹಿಷ್ಕರಿಸಿದ್ದು, ಕರಪತ್ರ ಬ್ಯಾನರ್ ಗಳನ್ನು ಅಂಟಿಸಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನತೆಗೆ ಕರೆ ನೀಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!