ರಾಜೀವನಗರದಲ್ಲಿ ನಕಲಿ ಮತದಾನ ಆರೋಪ; ಉಡುಪಿ ಜಿಲ್ಲಾಧಿಕಾರಿ ಹೇಳಿದ್ದೇನು?

By Ravi JanekalFirst Published Apr 26, 2024, 5:20 PM IST
Highlights

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವನಗರದ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇನ್ನೋರ್ವ ವ್ಯಕ್ತಿ ಮತ ಚಲಾಯಿಸಿರುವ ಆರೋಪ ವಿಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.

ಉಡುಪಿ (ಏ.26): ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವನಗರದ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇನ್ನೋರ್ವ ವ್ಯಕ್ತಿ ಮತ ಚಲಾಯಿಸಿರುವ ಆರೋಪ ವಿಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.

ರಾಜೀವನಗರದಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ. ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಹೆಸರಲ್ಲಿ ನಡೆದಿದ್ದ ಮತದಾನ. ಒಂದೇ ಮತಗಟ್ಟೆಯಲ್ಲಿ ಇಬ್ಬರು ಮತದಾರರ ಹೆಸರು ಒಂದೇ ರೀತಿ ಇರುವುದರಿಂದ ಪೊಲೀಸರು, ಮತಗಟ್ಟೆ ಅಧಿಕಾರಿಗಳು, ಏಜಂಟರಲ್ಲಿ ಗೊಂದಲಕ್ಕೆ ಕಾರಣವಾಗಿ ಈ ಘಟನೆ ನಡೆದಿದೆ. ವೋಟರ್ ಸ್ಲಿಪ್ ಅದಲುಬದಲಾಗಿರುವ ಕಾರಣ ಸಿಬ್ಬಂದಿಗೆ ಗೊಂದಲವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಕೃಷ್ಣ ನಾಯ್ಕ್ ಎನ್ನುವ ಮತ ಚಲಾವಣೆ ಮಾಡಿರುವ ವ್ಯಕ್ತಿಯನ್ನು ಚುನಾವಣಾ ಸಿಬ್ಬಂದಿ ಹುಡುಕುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಯಾರಿಗೆ ಒಲಿಯುತ್ತೆ ಗೆಲುವಿನ ಹಾರ? ಸಜ್ಜನ ರಾಜಕಾರಣಿಗಳ ಹೋರಾಟಕ್ಕೆ ಸಾಕ್ಷಿ ಈ ಕ್ಷೇತ್ರ!

ಘಟನೆ ಹಿನ್ನೆಲೆ: ಅರ್ಬಿಯ ಕೃಷ್ಣ ನಾಯ್ಕ್ ಎಂಬ ವ್ಯಕ್ತಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರನಾಗಿದ್ದಾನೆ. ಇಂದು ಮತ ಚಲಾಯಿಸಲು ಬಡಗಬೆಟ್ಟು ಗ್ರಾಪಂನ ರಾಜೀವ್ ನಗರದ ಪ್ರೌಢಶಾಲೆಗೆ ಬಂದಿದ್ದಾನೆ. ಆದರೆ ಈ ವೇಳೆ ತನ್ನ ಹೆಸರಲ್ಲಿ ಈಗಾಗಲೇ ಮತದಾನ ಆಗಿದೆ ಎಂದು ಚುನಾವಣೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಶಾಕ್ ಆಗಿದೆ. ನಾನು ಮತದಾನ ಮಾಡಿಲ್ಲ. ಈಗ್ತಾನೆ ಬಂದಿದ್ದಾನೆ. ನನ್ನ ಹೆಸರಲ್ಲಿ ಅದ್ಹೇಗೆ ಮತದಾನ ಆಯ್ತು ಎಂದು ಪ್ರಶ್ನಿಸಿದ್ದಾನೆ. ಆ ಬಳಿಕ ತನ್ನ ಹೆಸರಲ್ಲಿ ಇನ್ನೊಬ್ಬರು ಮತ ಚಲಾಯಿಸಿರುವುದು ಪತ್ತೆಯಾಗಿದೆ. ಈ ಘಟನೆ ಹಿನ್ನೆಲೆ ಎರಡೂ ಪಕ್ಷಗಳ ಮತಗಟ್ಟೆ ಏಜೆಂಟ್‌ರಿಂದ ವಿರೋಧ ವ್ಯಕ್ತವಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ನಕಲಿ ಮತದಾನ ಮಾಡಿದ ವ್ಯಕ್ತಿಯನ್ನ ಪತ್ತೆಹಚ್ಚುವಂತೆ ಒತ್ತಾಯಿಸಿದ್ದರು

click me!