Asianet Suvarna News Asianet Suvarna News

ಕೊರೋನಾ ಶಂಕಿತರನ್ನು ಕರೆತಂದು PPE ಕಿಟ್‌ ಬೇಕಾಬಿಟ್ಟಿ ಬಿಸಾಡಿದ ಆ್ಯಂಬುಲೆನ್ಸ್‌ ಚಾಲಕ

ರಸ್ತೆ ಪಕ್ಕಕ್ಕೆ ಪಿಪಿಇ ಕಿಟ್‌ ಬಿಸಾಕಿಹೋದ ಆ್ಯಂಬುಲೆನ್ಸ್‌ ಚಾಲಕ| ಕೊರೋನಾ ಶಂಕಿತರನ್ನು ಆ್ಯಂಬುಲೆನ್ಸ್‌ ನಲ್ಲಿ ಕರೆತಂದಿದ್ದ ಚಾಲಕ| ಕೋವಿಡ್‌ -19 ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್‌ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ| ಜೈವಿಕ ಘನತ್ಯಾಜ್ಯ ಘಟಕದಡಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು|

Ambulance Driver  Thrown Coronavirus PPE kit by the Roadside in Gadag
Author
Bengaluru, First Published Apr 18, 2020, 9:14 AM IST

ಗದಗ(ಏ.18): ನಗರದಲ್ಲಿ ಆ್ಯಂಬುಲೆನ್ಸ್‌ ಚಾಲಕ ಪಿಪಿಇ ಕಿಟ್‌ ಧರಿಸಿಕೊಂಡ ಹತ್ತಾರು ಜನ ಕೊರೋನಾ ಶಂಕಿತರನ್ನು ಕರೆತಂದು ಆನಂತರ ಬೇಕಾಬಿಟ್ಟಿಯಾಗಿ ರಸ್ತೆ ಪಕ್ಕ ಕಿಟ್‌ ಎಸೆದು ಹೋಗಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

"

ಗದಗ ಜಿಲ್ಲಾ ಆಸ್ಪತ್ರೆ ರಸ್ತೆಯ ಮಲ್ಲಸಮುದ್ರ ಕ್ರಾಸ್‌ ಬಳಿ ರಸ್ತೆ ಪಕ್ಕಕ್ಕೆ ಪಿಪಿಇ ಕಿಟ್‌ ಬಿಸಾಕಿಹೋಗಿದ್ದಾನೆ. ಆ್ಯಂಬುಲೆಸ್ಸ್‌ ಚಾಲಕನ ಬೇಜವಾಬ್ದಾರಿತನದಿಂದ ಸಂಚರಿಸುವ ಸಾರ್ವಜನಿಕರಿಗೆ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಕೊರೋನಾ ಆತಂಕ: ಕಿರಾಣಿ ಅಂಗಡಿಗಳಿಗೆ ಬೀಗಮುದ್ರೆ

ಜಿಲ್ಲಾಸ್ಪತ್ರೆಯಿಂದ ಬಂದಿರುವ ಆ್ಯಂಬುಲೆಸ್ಸ್‌ ಚಾಲಕ ಪಿಪಿಇ ಕಿಟ್‌ ತೆಗೆದು ಬಿಸಾಕುವ ದೃಶ್ಯವನ್ನು ಮೊಬೈಲ್‌ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ. ಕೋವಿಡ್‌ -19 ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್‌ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಜೈವಿಕ ಘನತ್ಯಾಜ್ಯ ಘಟಕದಡಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಎನ್ನುವ ನಿಯಮವಿದೆ.

ಇನ್ನೊಂದೆಡೆ ಕೊರೋನಾ ವೈರಸ್‌ ತಡೆಗಟ್ಟಲು ಸರ್ಕಾರ ಹಾಗೂ ವೈದ್ಯಕೀಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಆದರೆ, ಈ ಚಾಲಕ ಪಿಪಿಇ ಕಿಟ್‌ ಎಸೆದು ಬೇಜವ್ದಾರಿತನ ಪ್ರದರ್ಶಿಸಿದ್ದಾನೆ. ಇದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆ್ಯಂಬುಲೆಸ್ಸ್‌ ಚಾಲಕನ ಯಾರು? ಯಾವ ಹಾಸ್ಪಿಟಲ್‌ ಆ್ಯಂಬುಲೆಸ್ಸ್‌ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬೇಕಾಬಿಟ್ಟಿಯಾಗಿ ಬಿದ್ದಿರುವ ಕಿಟ್‌ಗಳನ್ನು ಸುಟ್ಟು ಹಾಕಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
 

Follow Us:
Download App:
  • android
  • ios