Asianet Suvarna News Asianet Suvarna News

ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....

ಮಹಾರಾಷ್ಟ್ರದಿಂದ ಕಾರ್ಮಿಕರು ಮದ್ಯಪ್ರದೇಶದ ತಮ್ಮೂರಿಗೆ ಊರಿಗೆ ತೆರಳುತ್ತಿದ್ದರು. ರಸ್ತೆಯಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆ ಎಂದು ರೈಲ್ವೆ ಹಳಿ ಮೇಲೆ ಚಲಿಸುತ್ತಿದ್ದ ಕಾರ್ಮಿಕರು ರೈಲ್ವೆ ಹಳಿಗೆ ಸಿಲುಕಿ ಸಾವು.

17 Migrants Crushed to Death by Train in Aurangabad
Author
Bengaluru, First Published May 8, 2020, 8:27 AM IST

ಔರಂಗಾಬಾದ್ (ಮೇ 8): ಬೆಳಗ್ಗೆ ನಡೆದ ದುರಂತವೊಂದರಲ್ಲಿ ರೈಲು ಹಾಯ್ದು 17 ವಲಸೆ ಕಾರ್ಮಿಕರು ಅಸುನೀಗಿದ್ದಾರೆ. ಮಕ್ಕಳು, ಮರಿಯೊಂದಿಗೆ ಸಾಗುತ್ತಿದ್ದ ಈ ಕಾರ್ಮಿಕರು ರೈಲಿಲ್ಲವೆಂದು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಮೃತಪಟ್ಟವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. 

ಮಹಾರಾಷ್ಟ್ರದಿಂದ ಕಾರ್ಮಿಕರು ಮದ್ಯಪ್ರದೇಶದ ತಮ್ಮೂರಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರದ ನಿರೀಕ್ಷೆಯಲ್ಲಿದ್ದೇವೆ. ರಸ್ತೆಯಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆ ಎಂದು ರೈಲ್ವೆ ಹಳಿ ಮೇಲೆ ಚಲಿಸುತ್ತಿದ್ದ ಕಾರ್ಮಿಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಉಸಿರಾಡೋ ಗಾಳಿಯೇ ವಿಷವಾದಾಗ

ಔರಾಂಗಾಬಾದ್‌ದ ಕರ್ಮಾಡ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೆಲವರು ಟ್ರ್ಯಾಕ್ ಮೇಲೆ ಮಲಗಿದ್ದರು ಎನ್ನಲಾಗುತ್ತಿದೆ. ಕೆಲವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಫತ್ರೆಗೆ ದಾಖಲಿಸಲಾಗಿದೆ.

ಅತ್ತ ಕೊರೋನಾ ಕಾಟ, ಆಂಧ್ರಪ್ರದೇಶದಲ್ಲಿ ವಿಷಾನಿಲ ಸ್ಫೋಟ, ಇತ್ತ ತಮಿಳು ನಾಡಿನಲ್ಲಿ ಬಾಯ್ಲಲ್ ಸ್ಫೋಟ ಈ ಸುದ್ದಿಗಳ ನಡುವೆಯೇ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ಬಡ ಕೂಲಿ ಕಾರ್ಮಿಕರ ಮುಗ್ಧತೆಯಿಂದ ರೈಲಿಗೆ ಸಿಲುಕಿ ಬಲಿಯಾಗಿದ್ದಾರೆ. 

"

Follow Us:
Download App:
  • android
  • ios