Asianet Suvarna News Asianet Suvarna News

ಅಪರಾಧಿಗಳಿಗೆ ಭಯ ಹುಟ್ಟಿಸುವ ಕಾನೂನು ಶಿಕ್ಷೆ ತರಬೇಕು: ಭಾರತಿ ಶೆಟ್ಟಿ

*  ವಿದೇಶದಲ್ಲಿ ಇರುವ ಲಿವಿಂಗ್ ಟುಗೆದರ್ ಕಾನೂನುಬದ್ಧ ಮಾಡೋದಕ್ಕೆ ಆಗುತ್ತೆ‌ ನಿಮಗೆ
*  ಏಕಾಂಗಿ ಶಿಕ್ಷೆ ತರುವುದಕ್ಕೆ ಯಾಕೆ ಆಗೋದಿಲ್ಲ?
*  ಶೇ.70 ರಷ್ಟು ಮಂದಿ ಕಾನೂನು ಗೊತ್ತಿದ್ದವರೇ ಅತ್ಯಾಚಾರ ಮಾಡ್ತಿದ್ದಾರೆ 

ಬೆಂಗಳೂರು(ಸೆ.24): ಪ್ರತಿಯೊಬ್ಬರಿಗೆ ಜನ್ಮ ನೀಡುವವಳು ಹೆಣ್ಣು, ಜನ್ಮ ನೀಡುವ ಸ್ಥಳಕ್ಕೆ ರಾಡ್ ಹಾಕ್ತೇನೆ, ಬಾಟಲ್ ಹಾಕ್ತೇನೆ ಎನ್ನುವುದು ಎಷ್ಟು ಕ್ರೌರ್ಯ..?. ಗಂಡು, ಹೆಣ್ಣು ಮದುವೆ ಆಗದೆ ಒಟ್ಟಿಗೆ ಇರುವುದಕ್ಕೆ ಹೆದರ್ತಿದ್ರು, ಆದ್ರೀಗ 'ಲಿವಿಂಗ್ ಟುಗೆದರ್‌ ಅಂತಾ ಸ್ಟೈಲಾಗಿ ಹೇಳ್ತಾರೆ' ಮಾಧುಸ್ವಾಮಿ ಮಾತಿನ ಬಳಿಕ ಶಾಸಕಿ ಭಾರತಿ ಶೆಟ್ಟಿ ಅವರು ಭಾವುಕರಾಗಿ ಮಾತನಾಡಿದ್ದಾರೆ. ಎಲ್ಲದಕ್ಕೂ ತಿದ್ದುಪಡಿ ಎಲ್ಲದಕ್ಕೂ ಕಾನೂನು, ಎಷ್ಟೆಷ್ಟೋ ಸಮಿತಿಗಳು ಬಂದವು, ಏನಾಯ್ತು ಸಮಿತಿಗಳಿಂದ?. ನಮ್ಮ ಸಂಸ್ಕೃತಿ ನಾಶ ಮಾಡುವಂತ ಪದ್ದತಿಯನ್ನು ಅಸಿಂಧು ಮಾಡಬೇಕು. ಅಪರಾಧಿಗಳಿಗೆ ಭಯ ಹುಟ್ಟಿಸುವ ಕಾನೂನು ಶಿಕ್ಷೆ ತರಬೇಕು ಅಂತ ಆಗ್ರಹಿಸಿದ್ದಾರೆ. 

ಭಾರತ್‌ ಬಂದ್‌ ಯಶಸ್ವಿಗೊಳಿಸುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್‌

Video Top Stories