Asianet Suvarna News Asianet Suvarna News

ಮಂಗಳಮುಖಿಯರ ಹೊಸ 'ಸಂಕಲ್ಪ'; ಮಾದರಿಯಾಯ್ತು ಇವರ ಕಲ್ಪ..!

ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ ಬಿಗ್ 3 ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ನಮ್ಮೊಳಗಿರುವ ಸಾಧಕರನ್ನು ಗುರುತಿಸುತ್ತದೆ. ಅದೇ ರೀತಿ ಇಂದಿನ ನಮ್ಮ ಹೀರೋ ಯಾರು ಎಂದು ನೋಡುವುದಾದರೆ ಇವರು ಮಂಗಳಮುಖಿಯರು. 

ಬೆಂಗಳೂರು (ಜ. 02): ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ ಬಿಗ್ 3 ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ನಮ್ಮೊಳಗಿರುವ ಸಾಧಕರನ್ನು ಗುರುತಿಸುತ್ತದೆ. ಅದೇ ರೀತಿ ಇಂದಿನ ನಮ್ಮ ಹೀರೋ ಯಾರು ಎಂದು ನೋಡುವುದಾದರೆ ಇವರು ಮಂಗಳಮುಖಿಯರು. ಅವಮಾನವನ್ನು ಮೆಟ್ಟಿ ನಿಂತು, 'ಸಂಕಲ್ಪ ' ಎನ್ನುವ ಟ್ರಸ್ಟ್ ವೊಂದನ್ನು ಸ್ಥಾಪಿಸಿಕೊಂಡು ಹೈನುಗಾರಿಕೆ ನಡೆಸುತ್ತಿದ್ದಾರೆ.  ಕಳೆದ ವರ್ಷ ನವೆಂಬರ್‌ನಲ್ಲಿ ಈ ಟ್ರಸ್ಟ್ ಸ್ಥಾಪಿಸಿಕೊಂಡು ಸರ್ಕಾರದಿಂದ ಕೆಲವು ಸೌಲಭ್ಯಗಳ ನಿರೀಕ್ಷೆಯಲ್ಲಿದ್ದಾರೆ.  ಇಬ್ಬರಿಂದ ಆರಂಭವಾದ ಈ ಟ್ರಸ್ಟ್‌ನಲ್ಲಿ 10 ಮಂದಿ ಕೆಲಸ ಮಾಡುತ್ತಿದ್ದಾರೆ. ಮಂಗಳಮುಖಿಯರೆಂದರೆ ಮೂಗು ತಿರುಗಿಸುವ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. 

ಗರ್ಭಿಣಿಯರು, ಅಂಗವಿಕಲರಿಗೆ ಇವರ ಆಟೋದಲ್ಲಿ ಫ್ರೀ ಸರ್ವೀಸ್, ಇವರೇ ನಮ್ಮ ಬಿಗ್ 3 ಹೀರೋ ಮುನ್ನ! 

Video Top Stories