ನನ್ನ ವೋಟು ನನ್ನ ಮಾತು: ಶಿಗ್ಗಾಂವಿ ಕ್ಷೇತ್ರದ ಸವಣೂರು ಮತದಾರರ ಮನದಾಳದ ಮಾತು ಏನು.?
ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಶಿಗ್ಗಾವಿಯ ಸವಣೂರು ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಶಿಗ್ಗಾವಿಯ ಸವಣೂರು ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲಾವನ್ನೂ ಕೂತು ಗಮನಿಸುತ್ತಿದ್ದು, ಶಿಗ್ಗಾವಿಯ ಸವಣೂರು ನಲ್ಲಿ ಬಿಜೆಪಿ ಬರುತ್ತೆ ಎಂದಿದ್ದಾರೆ. ಏಷ್ಯಾನೆಟ್ ಸುವರ್ಣ ಜತೆ ಮಾತನಾಡಿದ್ದು ಬೊಮ್ಮಾಯಿ ಶಿಗ್ಗಾವಿಯಲ್ಲಿ ಬರುತ್ತಾರೆ ನಾಲ್ಕನೇ ಬಾರಿ ಗೆಲ್ಲುತ್ತಾರೆ ಎಂದಿದ್ದಾರೆ. ಬೊಮ್ಮಾಯಿ ಎಲ್ಲರನ್ನು ಸಮಾನರಾಗಿ ನೋಡುತ್ತಿದ್ದಾರೆ. ಚೆನ್ನಾಗಿ ಕೆಲಸ ಮಾಡಿದ್ದಾರೆ ವಿನಯ್ ಕುಲಕರ್ಣಿ ಶಿಗ್ಗಾವಿಯಲ್ಲಿ ಬರಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ .