ಧುವ್ರನಾರಾಯಣ ನಿಧನದಿಂದ ಸಿದ್ದರಾಮಯ್ಯ ತಲೆಬಿಸಿ ಹೆಚ್ಚಿಸಿದ ನಂಜನಗೂಡು ಟಿಕೆಟ್ ವಿವಾದ!
ಕಾಂಗ್ರೆಸ್ನಲ್ಲಿ ನಂಜನಗೂಡು ಟಿಕೆಟ್ ವಿವಾದ, ಕಾಂಗ್ರೆಸ್ನತ್ತ ಪ್ರಯಾಣ ಆರಂಭಿಸಿದ್ರಾ ವಿ ಸೋಮಣ್ಣ ಸೇರಿದಂತೆ ಹಲವು ನಾಯಕರು? ಏಷ್ಯಾನೆಟ್ ಸುವರ್ಣನ್ಯೂಸ್ , ಕನ್ನಡಪ್ರಭದ ಸಾಧಕರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಧ್ರುವನಾರಾಯಣ ಪಾರ್ಥೀವ ಶರೀರದ ಮುಂದೆಯೇ ನಂಜನಗೂಡು ಟಿಕೆಟ್ ಪುತ್ರನಿಗೆ ನೀಡಲು ಬೆಂಬಲಿಗರು, ಕಾಂಗ್ರೆಸ್ ಹಿರಿಯ ಮುಖಂಡರ ಮುಂದೆ ಒತ್ತಾಯಿಸಿದ್ದರು. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯ ಆಪ್ತ ಹೆಚ್ಸಿ ಮಹದೇವಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಾರ್ಥೀವ ಶರೀರದ ಮುಂದೆ ಹೈಡ್ರಾಮ ನಡೆದು ಹೋಗಿದೆ. ಧ್ರುವನಾರಾಯಣ ಬೆಂಬಲಿಗರು ಆಕ್ರೋಶ, ಪ್ರತಿಭಟನೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತಂದಿದೆ. ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಕೈಮುಗಿದು ಸುಮ್ಮನಿರಲು ಮನವಿ ಮಾಡಿದರೂ ಆಕ್ರೋಶ ಕಡಿಮೆಯಾಗಲಿಲ್ಲ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಆಘಾತದಿಂದ ನಾವು ಹೊರಬಂದಿಲ್ಲ. ಆದರೆ ಅವರ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇತ್ತ ಪ್ರತಿಭಟನೆಯಿಂದ ಸಿದ್ದರಾಮಯ್ಯ ತಲೆನೋವು ಹೆಚ್ಚಾಗಿದೆ. ಈ ಕರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದು, ನಮ್ಗೆ ತಲೆಬಿಸಿಯಾಗಿದೆ ಎಂದಿದ್ದಾರೆ.