Asianet Suvarna News Asianet Suvarna News

ಡಿಕೆಶಿ ಸ್ವಾಗತಕ್ಕೆ ಅಚ್ಚರಿಯ ಅತಿಥಿ; ಇದು ಎಚ್‌ಡಿಕೆ ನಡೆಯ ಹಿಂದಿನ ನೀತಿ!

ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಬಂದಿಳಿದಾಗ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಪಕ್ಷದಿಂದ ಬ್ಯಾಟರಾಯನಪುರ ಶಾಸಕ, ಮಾಜಿ ಸಚಿವ ಕೃಷ್ಣ ಭೈರೇಗೌಡ ತೆರಳಿದ್ದರು. ಆದರೆ ಅಚ್ಚರಿಯೆಂಬಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಡಿಕೆಶಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಘಟನೆ ನಡೆದಿದೆ.  

ಬೆಂಗಳೂರು (ಅ.26): ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಬಂದಿಳಿದಾಗ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಪಕ್ಷದಿಂದ ಬ್ಯಾಟರಾಯನಪುರ ಶಾಸಕ, ಮಾಜಿ ಸಚಿವ ಕೃಷ್ಣ ಭೈರೇಗೌಡ ತೆರಳಿದ್ದರು. ಆದರೆ ಅಚ್ಚರಿಯೆಂಬಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡಾ ಡಿಕೆಶಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಘಟನೆ ನಡೆದಿದೆ.  

ಒಂದು ಕಡೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಇಂದಿನ ರೋಡ್ ಶೋನಿಂದ ದೂರವುಳಿದಿದ್ದರೆ, ಎಚ್‌ಡಿಕೆ ಸ್ವಾಗತ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಕೆಲದಿನಗಳ ಹಿಂದೆ ತಿಹಾರ್‌ ಜೈಲಿಗೆ ತೆರಳಿ ಎಚ್‌ಡಿಕೆ ತಮ್ಮ ಸ್ನೇಹಿತ ಡಿಕೆಶಿಯನ್ನು ಭೇಟಿ ಕೂಡಾ ಆಗಿದ್ದರು.

ಹವಾಲಾ ಪ್ರಕರಣದ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಆರೋಪದಲ್ಲಿ  ಜಾರಿ ನಿರ್ದೇಶನಾಲಯ (ED) ಡಿಕೆಶಿಯನ್ನು ಕಳೆದ ತಿಂಗಳು ಬಂಧಿಸಿತ್ತು. 48 ದಿನಗಳ ಕಾಲ ಸೆರೆ ವಾಸ ಅನುಭವಿಸಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟ್ ಕಳೆದ ಬುಧವಾರ ಜಾಮೀನು ನೀಡಿತ್ತು.

 

Video Top Stories