ಧಾರವಾಡದಲ್ಲಿ ರಾಮಮಂದಿರ ನಿರ್ಮಾಣ, ಮನಗೆದ್ದ ಮರಳಿನ ಕಲಾಕೃತಿ
ಧಾರವಾಡದಲ್ಲಿ ರಾಮಮಂದಿರ ಕಲಾಕೃತಿ/ ಮನಸೂರೆಗೊಂಡ ಮರಳಿನ ಕಲಾಕೃತಿ/ ಕಲಾವಿದ ಮಂಜುನಾಥ ಹಿರೇಮಠ ಅವರಿಂದ ನಿರ್ಮಾಣ/ ಜನಜಾಗೃತಿ ಸಂಘದ ಬಸವರಾಜ ಕೊರವರ ಮತ್ತು ಗ್ರಾಮಸ್ಥರ ಸಹಕಾರ
ಧಾರವಾಡ(ಆ. 05) ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಧಾರವಾಡದಲ್ಲಿಯೂ ರಾಮಮಂದಿರ ನಿರ್ಮಾಣವಾಗಿದೆ.
ಅಯೋಧ್ಯಾ ಹೇಗೆ ಕಂಗೊಳಿಸುತ್ತಿದೆ? ನೋಡಿಕೊಂಡು ಬನ್ನಿ
ಧಾರವಾಡ ದೊಡ್ಡನಾಯಕನ ಕೊಪ್ಪದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಕಲಾಕೃತಿಯನ್ನು ಮರಳಿನಲ್ಲಿ ರಚಿಸಲಾಗಿದೆ. 12 ಅಡಿ ಅಗಲ ಹಾಗೂ 8 ಅಡಿ ಎತ್ತರದ ಶ್ರೀರಾಮ ಮಂದಿರದ ಕಲಾಕೃತಿ ಸುಂದರವಾಗಿ ಮೂಡಿಬಂದಿದೆ. ಕೆಲಗೇರಿಯ ಪರಿಸರಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಕಲಾಕೃತಿ ನಿರ್ಮಿಸಿದ್ದಾರೆ. ಜನಜಾಗೃತಿ ಸಂಘದ ಬಸವರಾಜ ಕೊರವರ ಮತ್ತು ಗ್ರಾಮಸ್ಥರು ಸಹಕಾರ ನೀಡಿದ್ದಾರೆ.