ಸನಾತನ ಧರ್ಮ ನಾಶ ವಿಚಾರದಲ್ಲಿ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಒಂದೇ ಅಭಿಪ್ರಾಯ!
ಹಲವು ಭಿನ್ನಾಭಿಪ್ರಾಯವಿದ್ದರೂ ಸನತಾನ ಧರ್ಮ ನಾಶದಲ್ಲಿ ಇಂಡಿಯಾ ಮೈತ್ರಿ ಒಕ್ಕೂಟ ಒಗಟ್ಟು, ಸಿದ್ದರಾಮಯ್ಯ ಸಚಿವರ ಮೇಲೆ ಜಾತಿ ನಿಂದನೆ ಕೇಸ್, ಸಿದ್ದರಾಮಯ್ಯ ಹೆಣ ಯಾಕೆ ಜೀವಂತ ಬಂದ್ರೂ ಸೇರಿಸಿಕೊಳ್ಳಲಲ್ಲ, ಯತ್ನಾಳ್ ತಿರುಗೇಟು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಸನಾತನ ಧರ್ಮ ನಾಶ ಮಾಡಲೇ ಇಂಡಿಯಾ ಮೈತ್ರಿ ಒಕ್ಕೂಟ ರಚನೆಯಾಗಿದೆ ಅನ್ನೋ ಬಿಜೆಪಿ ಆರೋಪ ನಿಜವಾಗಿದೆ. ಇದೀಗ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇಂಡಿಯಾ ಮೈತ್ರಿ ಒಕ್ಕೂಟ26ಕ್ಕೂ ಹೆಚ್ಚು ಪಕ್ಷಗಳಲ್ಲಿ ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ ಸನಾತನಧರ್ಮ ನಾಶ ವಿಚಾರದಲ್ಲಿ ಒಂದೇ ಅಭಿಪ್ರಾಯ ಹೊಂದಿದ್ದೇವೆ ಎಂದಿದ್ದಾರೆ. ಈ ಮೂಲಕ ಇಂಡಿಯಾ ಮೈತ್ರಿ ಒಕ್ಕೂಟದ ನಿಲುವು ಸ್ಪಷ್ಟವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸನಾತನ ಧರ್ಮ ಹಾಗೂ ಧರ್ಮ ನಾಶದ ನಡುವೆ ನಡೆಯುವದರಲ್ಲಿ ಯಾವುದೇ ಅನುಮಾನವಿಲ್ಲ.