ಜೂನ್-ಜುಲೈನಲ್ಲಿ ಈ 5 ಹೂವಿನ ಸಸ್ಯಗಳನ್ನು ನೆಡಿ ಮತ್ತು ಆಗಸ್ಟ್-ಸೆಪ್ಟೆಂಬರ್ನಲ್ಲಿ ನಿಮ್ಮ ತೋಟವು ವರ್ಣರಂಜಿತ ಹೂವುಗಳಿಂದ ಅರಳುವುದನ್ನು ನೋಡಿ. ಜಿನಿಯಾ, ಚೆಂಡು ಹೂವು, ಪೋರ್ಚುಲಕ, ಕ್ಯಾಲೆಡುಲ ಮತ್ತು ಬಾಲ್ಸಮ್ನಂತಹ ಸಸ್ಯಗಳು ಬೇಸಿಗೆಯಲ್ಲೂ ಸುಲಭವಾಗಿ ಬೆಳೆಯುತ್ತವೆ
- Home
- News
- State
- Karnataka News Live 13th June 2025: Rainy Season Flower Care - ಆಗಸ್ಟ್-ಸೆಪ್ಟೆಂಬರ್ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!
Karnataka News Live 13th June 2025: Rainy Season Flower Care - ಆಗಸ್ಟ್-ಸೆಪ್ಟೆಂಬರ್ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!

ನವದೆಹಲಿ: ಕೇಂದ್ರ ಸರ್ಕಾರ 2027ರಲ್ಲಿ ನಡೆಸಲಿರುವ ರಾಷ್ಟ್ರೀಯ ಜನಗಣತಿಯು ಭಾರತದ ಪಾಲಿಗೆ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ ಆಗಿರಲಿದೆ. ಈ ಜನ ಗಣತಿಯ ಅಂತಿಮ ಅಂಕಿ-ಅಂಶಗಳು 9 ತಿಂಗಳೊಳಗೇ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ. ಅಂದರೆ ಅದೇ ವರ್ಷದ ಅಂತ್ಯದಲ್ಲಿ ಜನಗಣತಿಯ ಸಂಪೂರ್ಣ ಅಂಕಿ-ಅಂಶಗಳು ಸಿದ್ದವಾಗಲಿವೆ. ಮೊಬೈಲ್ ಆ್ಯಪ್ನಂಥ ತಂತ್ರಜ್ಞಾನ ಬಳಸಿ ಈ ಕಾರ್ಯ ಮಾಡುವ ಹಿನ್ನೆಲೆಯಲ್ಲಿ ಈ ಬದಲಾವಣೆ ಸಾಧ್ಯವಾಗಲಿದೆ. ಈ ಹಿಂದೆ ಜನಗಣತಿ ಅಂಕಿ-ಅಂಶಗಳು ಬಹಿರಂಗವಾಗಬೇಕಿದ್ದರೆ ಸಾಕಷ್ಟು ಸಮಯ ಕಾಯಬೇಕಿತ್ತು. 2011ರ ಜನಗಣತಿ ಮಾಹಿತಿಯನ್ನು ಒಟ್ಟು ಗೂಡಿಸಲು ಸುಮಾರು 2 ವರ್ಷಗಳಷ್ಟು ಸುಧೀರ್ಘ ಸಮಯ ಹಿಡಿದಿತ್ತು. ಆದರೆ ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಜನಗಣತಿ ಮಾಡುತ್ತಿರುವ ಕಾರಣ ಅಂಕಿ-ಅಂಶಗಳ ಸಂಗ್ರಹ ಸಲೀಸಾಗಲಿದೆ ಎಂದು ಮೂಲಗಳು ತಿಳಿಸಿವೆ. 2017ರ ಮಾರ್ಚ್ನಲ್ಲಿ ಜನಗಣತಿ ನಡೆಸುವುದಾಗಿ ಕೇಂದ್ರ ತಿಳಿಸಿದೆ. ಈ ಜನಗಣತಿ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ.
Karnataka News Live 13th June 2025Rainy Season Flower Care - ಆಗಸ್ಟ್-ಸೆಪ್ಟೆಂಬರ್ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!
Karnataka News Live 13th June 2025ಕೊಡಗು ಕಾಫಿ ತೋಟದ ಲೈನ್ ಮನೆಗಳಲ್ಲಿ 470ಕ್ಕೂ ಹೆಚ್ಚು ಬಾಲ ಗರ್ಭಿಣಿಯರು ಪತ್ತೆ!
ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 470 ಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗಿದ್ದು, ವ್ಯವಸ್ಥೆಯ ದುರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Karnataka News Live 13th June 2025ರೀಲ್ಸ್ ಶೋಕಿಗೆ ದಾನ ಮಾಡಿದ್ರೆ ಪುಣ್ಯ ಬರೊಲ್ಲ; ಚಾಣಕ್ಯ ನೀತಿಯಲ್ಲಿ ಉಲ್ಲೇಖ!
ದಾನ ಮಾಡೋದು ಪುಣ್ಯದ ಕೆಲಸ. ಆದರೆ ತಪ್ಪು ರೀತಿಯಲ್ಲಿ ಮಾಡಿದ ದಾನ ಆರ್ಥಿಕ ಸಮಸ್ಯೆ ತರುತ್ತೆ. ಪ್ರದರ್ಶನಕ್ಕಾಗಿ ರೀಲ್ಸ್ ಮಾಡಿ ದಾನ ಮಾಡಿದರೆ ಪುಣ್ಯ ಲಭಿಸುವುದಿಲ್ಲ, ಪಾಪ ಸುತ್ತಿಕೊಳ್ಳಲಿದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.
Karnataka News Live 13th June 2025ಗರ್ಭಿಣಿ ಹಸುವಿನ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳು; ಪಶು ಹಿಂಸೆ ವಿರುದ್ಧ ಆಕ್ರೋಶ
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಗರ್ಭಿಣಿ ಹಸುವಿನ ಕೆಚ್ಚಲು ಕೊಯ್ದಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಹಸುವಿನ ಮೊಲೆಯ ತುದಿಯನ್ನು ಕತ್ತರಿಸಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Karnataka News Live 13th June 2025ದುರಂತದ ಬೆನ್ನಲ್ಲೇ ಏರ್ ಇಂಡಿಯಾದ ಎಲ್ಲಾ ಡ್ರೀಮ್ಲೈನರ್ ವಿಮಾನ ತಪಾಸಣೆಗೆ ಸರ್ಕಾರದ ಆದೇಶ
ಏರ್ ಇಂಡಿಯಾ ಪತನದ ನಂತರ, DGCA ಬೋಯಿಂಗ್ 787-8/9 ಡ್ರೀಮ್ಲೈನರ್ ವಿಮಾನಗಳಿಗೆ ವಿಶೇಷ ಸುರಕ್ಷತಾ ತಪಾಸಣೆಗೆ ಆದೇಶಿಸಿದೆ. ಜೂನ್ 15 ರಿಂದ ಪ್ರಾರಂಭವಾಗುವ ಈ ತಪಾಸಣೆಯಲ್ಲಿ ಎಂಜಿನ್, ಇಂಧನ ಮತ್ತು ಹೈಡ್ರಾಲಿಕ್ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಯಲಿದೆ.
Karnataka News Live 13th June 2025ಪಾರ್ಕ್ಗೆ ಬರ್ತಿದ್ದ ಯುವಕ ಇಷ್ಟ ಆದನಂತ ಅವನಿಗೇ ಸಿಂದೂರ ಇಡೋದಾ ಇವ್ಳು? ವಿಡಿಯೋ ನೋಡಿ
ಕಾಲ ಬದಲಾಗೋಯ್ತು ಕಣ್ರೀ ಎನ್ನೋದು ಸುಳ್ಳಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಈ ಘಟನೆ. ಪ್ರತಿದಿನ ಪಾರ್ಕ್ಗೆ ಬರ್ತಿದ್ದ ಯುವಕನ ಮೇಲೆ ಕ್ರಷ್ ಆದ ಅದೇ ಪಾರ್ಕ್ನ ಲೇಡಿ ಗಾರ್ಡ್ ಅವನಿಗೆ ಗೊತ್ತಿಲ್ಲದೇ ಸಿಂದೂರ ಇಟ್ಟು ಮದ್ವೆಯಾಯ್ತು ಅಂತಿದ್ದಾಳೆ. ವಿಡಿಯೋ ವೈರಲ್ ಆಗಿದೆ.
Karnataka News Live 13th June 2025ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆ ಆಯ್ಕೆ ಮಾಡಲು 17 ದಿನಗಳು ಬಾಕಿ! ಇಲ್ಲದಿದ್ದರೆ ಏನಾಗುತ್ತೆ?
ಸರ್ಕಾರಿ ನೌಕರರು ನಿವೃತ್ತಿಗಾಗಿ NPS ಅಥವಾ UPS ಆಯ್ಕೆ ಮಾಡಲು ಜೂನ್ 30 ಕೊನೆಯ ದಿನಾಂಕ. ಸಮಯ ಮಿತಿಯೊಳಗೆ ಆಯ್ಕೆ ಮಾಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ವರದಿ ಓದಿ.
Karnataka News Live 13th June 2025ಭಾರತದಿಂದ ಪ್ರೇರಿತ, ಮರ್ಸಿಡಿಸ್ ಬೆಂಜ್ AMG G 63 ಕಾರು ಲಾಂಚ್, ಕೇವಲ 30 ಕಾರು ಮಾತ್ರ
ಕೇವಲ 30 ಕಾರು ಮಾತ್ರ ಲಭ್ಯ. ಕಾರು ಖರೀದಿಸುವ ಮಾಲೀಕನ ಹೆಸರು ಕಾರಿನ ಗ್ರ್ಯಾಬ್ ಹ್ಯಾಂಡಲ್ನಲ್ಲಿ ಇರಲಿದೆ. ಭಾರತೀಯರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಮರ್ಸಿಡಿಸ್ ಬೆಂಜ್ AMG G 63 ಬಿಡುಗಡೆಯಾಗಿದೆ.
Karnataka News Live 13th June 2025ಕಾವ್ಯಾ ಮಾರನ್ ಜೊತೆ ಅನಿರುದ್ಧ್ ಲವ್? ಈ ಹಿಂದೆ ದೊಡ್ಡ ದೊಡ್ಡ ನಟಿಯರನ್ನು ಡೇಟ್ ಮಾಡಿದ್ದ ಸಂಗೀತ ನಿರ್ದೇಶಕ!
Karnataka News Live 13th June 2025ರಿವರ್ ರಾಫ್ಟಿಂಗ್ ವೇಳೆ ಉಕ್ಕಿ ಹರಿದ ನದಿಗೆ ಬಿದ್ದ ಪ್ರವಾಸಿಗ, ಗೈಡ್ ರಕ್ಷಣೆ ವಿಡಿಯೋ ವೈರಲ್!
ರಿವರ್ ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ರಾಫ್ಟಿಂಗ್ ಗೈಡ್ ಮತ್ತು ತಂಡದವರು ಸಾಹಸದಿಂದ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೈಡ್ನ ಧೈರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
Karnataka News Live 13th June 2025ಅಂಬಾನಿ, ಅದಾನಿ ಅಲ್ಲ, ಬೆಂಟ್ಲಿ ಕಾರು ಖರೀದಿಗೆ ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಈ ಉದ್ಯಮಿ
ಅಂಬಾನಿ, ಅದಾನಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಈ ಉದ್ಯಮಿ ರೀತಿ ಯಾರೂ ಡೆಲಿವರಿ ಪಡೆದುಕೊಂಡಿಲ್ಲ. ಕಾರಣ ಈ ಉದ್ಯಮಿ ರೋಸ್ ಗೋಲ್ಡ್ ಬಣ್ಣದ ಅತ್ಯಂತ ದುಬಾರಿ ಬೆಂಟ್ಲಿ ಬೆಂಟಿಯಾಗ್ ಕಾರು ಖರೀದಿಸಿದ್ದಾರೆ. ಆದರೆ ಕಾರು ಡೆಲಿವರಿ ಪಡೆಯಲು ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.
Karnataka News Live 13th June 2025₹250 ಕೋಟಿ ಮೌಲ್ಯದ ಆಸ್ತಿಯನ್ನ ತನ್ನ 2 ವರ್ಷದ ಮಗಳಿಗೆ ಬಿಟ್ಟ ಈ ಸ್ಟಾರ್ ಹೀರೋ ಯಾರು?
ಮಕ್ಕಳು ದೊಡ್ಡವರಾದ ನಂತರ ಪೋಷಕರು ತಮ್ಮ ಆಸ್ತಿಯನ್ನು ಹಂಚಿಕೊಳ್ಳುವುದು ಸಾಮಾನ್ಯ, ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ತನ್ನ ಒಬ್ಬಳೇ ಮಗಳಿಗೆ 2 ವರ್ಷ ತುಂಬುವ ಮೊದಲೇ 250 ಕೋಟಿ ಆಸ್ತಿಯನ್ನು ದಾನ ಮಾಡಿದ. ಹೀರೋ ಯಾರು? ಹೀಗೆ ಏಕೆ ನಿರ್ಧಾರ ಮಾಡಿದ? ತಿಳಿಯಿರಿ.
Karnataka News Live 13th June 2025ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ
ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹39 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 516 ಲೀಟರ್ ಮದ್ಯ, ಖಾಲಿ ಬಾಟಲಿಗಳು ಮತ್ತು ಸಿಗರೇಟು ಬಾಕ್ಸ್ಗಳನ್ನು ನಾಶಪಡಿಸಲಾಗಿದೆ.
Karnataka News Live 13th June 2025ನಿಮ್ಗೆ ಒಳ್ಳೇದಾಗ್ಬೇಕು ಅಂದ್ರೆ ಮನೆನಲ್ಲಿ ಕನ್ನಡಿನ ಈ ಜಾಗದಲ್ಲಿ ಇಡಿ... ಇದು ವಾಸ್ತು ಪ್ರಕಾರ ಟಿಪ್ಸ್!
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕನ್ನಡಿಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಕನ್ನಡಿ ಇಡಬಾರದು.
Karnataka News Live 13th June 2025ಮಾವಿನಲ್ಲಿ 4000 ವರ್ಷ ಇತಿಹಾಸವಿರುವ ಭಾರತ ಹಿಂದಿಕ್ಕಿದ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಚಾಲೆಂಜ್
ಮಾವು ಕೃಷಿಯಲ್ಲಿ ಭಾರತಕ್ಕೆ 4,000 ವರ್ಷದ ಇತಿಹಾಸವಿದೆ. ಆದರೆ ನಿನ್ನೆ ಮೊನ್ನೆ ಬಂದಿರುವ ಮೆಕ್ಸಿಕೋ ದೇಶ ಮಾವು ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕಿದೆ. ಇದೀಗ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಸವಾಲು ಹಾಕಿದ್ದಾರೆ.
Karnataka News Live 13th June 2025ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಲ್ಲಿ NTCA ನಿಯಮ ಗಾಳಿಗೆ - ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನು ಕರೆತಂದ ಅರಣ್ಯ ಸಿಬ್ಬಂದಿಯ ಎಡವಟ್ಟು!
ಬಂಡೀಪುರದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದಡಿಯಲ್ಲಿ APC ಕ್ಯಾಂಪ್ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ NTCA ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
Karnataka News Live 13th June 2025ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್ - ಓಲಾ, ಉಬರ್, ರಾಪಿಡೋ ಸೇವೆ ನಿಷೇಧ ಮುಂದುವರಿಕೆ!
Karnataka News Live 13th June 2025ಯಾರಿಗೆಲ್ಲಾ ಸಿಕ್ಕಿದೆ ಬಿಗ್ ಬಾಸ್ 19 ಆಫರ್? ಸ್ಪರ್ಧಿಗಳ ಸಂಪೂರ್ಣ ಲಿಸ್ಟ್
ಬಿಗ್ ಬಾಸ್ 19ನೇ ಆವೃತ್ತಿ ಆರಂಭಕ್ಕೆ ತಯಾರಿ ಆರಂಭಗೊಂಡಿದೆ. ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈಗಾಗಲೇ ಹಲವು ಸೆಲೆಬ್ರೆಟಿಗಳಿಗೆ ಕರೆ ಮಾಡಲಾಗಿದೆ. ಯಾರಿಗೆಲ್ಲಾ ಬಿಗ್ ಬಾಸ್ ಆಫರ್ ನೀಡಲಾಗಿದೆ?