One Child Dead, Three Missing After Drowning in Kaveri River During Picnic ಮೈಸೂರಿನ ಮದರಸದಿಂದ ಪ್ರವಾಸಕ್ಕೆಂದು ಮಂಡ್ಯಕ್ಕೆ ಬಂದಿದ್ದ ನಾಲ್ವರು ಮಕ್ಕಳು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
- Home
- News
- State
- Karnataka Latest News Live: Mandya - ಕಾವೇರಿ ನದಿಯಲ್ಲಿ ಕೊಚ್ಚಿಹೋದ ಪ್ರವಾಸಕ್ಕೆ ಬಂದಿದ್ದ ಮಕ್ಕಳು!
Karnataka Latest News Live: Mandya - ಕಾವೇರಿ ನದಿಯಲ್ಲಿ ಕೊಚ್ಚಿಹೋದ ಪ್ರವಾಸಕ್ಕೆ ಬಂದಿದ್ದ ಮಕ್ಕಳು!

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಸಂಬಂಧ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ವಿರುದ್ದದ ದೋಷಾರೋಪ ನಿಗದಿ ಪ್ರಕ್ರಿಯೆ ನ.3ಕ್ಕೆ ನಡೆಯಲಿದೆ. ಪ್ರಕರಣ ಸಂಬಂಧ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಮುಂದೆಶುಕ್ರವಾರ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ನ.3ರಂದು ಪ್ರಕರಣ ಸಂಬಂಧ ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.
Karnataka Latest News Live 1 November 2025Mandya - ಕಾವೇರಿ ನದಿಯಲ್ಲಿ ಕೊಚ್ಚಿಹೋದ ಪ್ರವಾಸಕ್ಕೆ ಬಂದಿದ್ದ ಮಕ್ಕಳು!
Karnataka Latest News Live 1 November 2025Belagavi - ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಯದ್ವಾತದ್ವಾ ಚಾಕು ಇರಿತ
Five Stabbed During Kannada Rajyotsava Procession in Belagavi ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ಸಂಭ್ರಮದ ವೇಳೆ ದುಷ್ಕರ್ಮಿಗಳು ಐದು ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಸದಾಶಿವ ನಗರದಲ್ಲಿ ನಡೆದ ಈ ಘಟನೆಯಲ್ಲಿ ಗಾಯಗೊಂಡವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Karnataka Latest News Live 1 November 2025ಬೆಂಗಳೂರಿನಿಂದ ಭಟ್ಕಳಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹೊನ್ನಾವರದ ಸೂಳೆಮುರ್ಕಿ ಕ್ರಾಸ್ನಲ್ಲಿ ಅಪಘಾತ, ಓರ್ವ ಸಾವು
KSRTC Bus Overturns After Hitting Car Near Honnavar ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಬಳಿ ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
Karnataka Latest News Live 1 November 2025ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡ ಯುವತಿ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
Bangalore 25 Year Old MBA Student Supriya Found Dead ಬೆಂಗಳೂರಿನ ಗಾಯತ್ರಿನಗರದಲ್ಲಿ 25 ವರ್ಷದ ಯುವತಿ ಸುಪ್ರಿಯಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಿಂದ ಲಾಕ್ ಆಗಿದ್ದ ಆಕೆಯ ಬಾಡಿಗೆ ಮನೆಯ ಕೋಣೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
Karnataka Latest News Live 1 November 2025ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ದೇವೇಗೌಡರ ಮನವಿಗೆ ಸಿಕ್ಕಿತು ಫಲ
ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ದೇವೇಗೌಡರ ಮನವಿಗೆ ಸಿಕ್ಕಿತು ಫಲ, ಸಂಕಷ್ಟದಲ್ಲಿದ್ದ ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಅನುಮೋದನೆ ಸಿಕ್ಕಿದೆ.
Karnataka Latest News Live 1 November 2025ಚಡ್ಡಿ ಹಾಕಿಕೊಂಡು ಸೊಳ್ಳೆ ಕಡಿಸಿಕೊಳ್ತಿದ್ದ ಪೊಲೀಸರಿಗೆ ಪ್ಯಾಂಟ್ ಕೊಡಬೇಕೆಂದು ಹೋರಾಟ ಮಾಡಿದ್ದೆ - ವಾಟಾಳ್ ನಾಗರಾಜ್!
Police Wore Shorts Mosquitoes Bit Them Vatal Nagaraj Recalls Fight for Police Trousers to CM Siddaramaiah ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, 1968ರಲ್ಲಿ ಪೊಲೀಸರಿಗೆ ಚಡ್ಡಿ ಬದಲು ಪ್ಯಾಂಟ್ ಕೊಡಿಸಲು ತಾವು ಮಾಡಿದ ಹೋರಾಟವನ್ನು ನೆನಪಿಸಿಕೊಂಡರು.
Karnataka Latest News Live 1 November 2025ಸಿಎಸ್ಕೆ ಅಲ್ಲ, ಟ್ರೇಡ್ ಮೂಲಕ ಈ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್
ಸಿಎಸ್ಕೆ ಅಲ್ಲ, ಟ್ರೇಡ್ ಮೂಲಕ ಈ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್, ಈಗಾಗಲೇ ಮಾತುಕತೆಗಳು ನಡೆದಿದ್ದು, ಶೀಘ್ರದಲ್ಲೇ ಸಂಜು ಸ್ಯಾಮ್ಸನ್ ಹೊಸ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ.
Karnataka Latest News Live 1 November 2025ಆಗಷ್ಟೇ ಹುಟ್ಟಿದ ಮಗುವನ್ನು ಕಸದ ಪೊಟ್ಟಣ ಎಸೆದಂತೆ ರಸ್ತೆ ಪಕ್ಕ ಎಸೆದು ಹೋದ ಪಾಪಿಗಳು!
Newborn Baby Girl Found Dead on Hoskote Roadside ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ, ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯ ಪೊದೆಯಲ್ಲಿ ಎಸೆದು ಹೋಗಿರುವ ಅಮಾನುಷ ಘಟನೆ ನಡೆದಿದೆ.
Karnataka Latest News Live 1 November 2025ಆರ್ಎಸ್ಎಸ್ ನೋಂದಣಿ ಮಾಡಿಲ್ಲ ಯಾಕೆ? ಪಥಸಂಚಲನದ ವೇಳೆ ಉತ್ತರ ನೀಡಿದ ರವೀಂದ್ರ
ಆರ್ಎಸ್ಎಸ್ ನೋಂದಣಿ ಮಾಡಿಲ್ಲ ಯಾಕೆ? ಪಥಸಂಚಲನದ ವೇಳೆ ಉತ್ತರ ನೀಡಿದ ರವೀಂದ್ರ, ಇದೇ ವೇಳೆ ಲಾಠಿಯಿಂದ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಡಿಕೆಶಿ ಹೆಸರು ಹೇಳದೆ ನಮಸ್ತೆ ಸದಾ ವತ್ಸಲೇ ಹೇಳಿದವರಿಗೆ ತೊಂದರೆ ಕೊಟ್ಟ ಘಟನೆಯನ್ನೂ ಪ್ರಸ್ತಾಪಿಸಿದ್ದಾರೆ.
Karnataka Latest News Live 1 November 2025Colors Kananda ಇನ್ಸ್ಟಾಗ್ರಾಮ್, ಫೇಸ್ಬುಕ್ ಏಕಾಏಕಿ ಮಾಯ? ನೆಟ್ಟಿಗರು ಶಾಕ್- ಏನಾಗಿದೆ?
ಕಲರ್ಸ್ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳು ಏಕಾಏಕಿ ಕಣ್ಮರೆಯಾಗಿವೆ. ಬಿಗ್ ಬಾಸ್ನಂತಹ ಕಾರ್ಯಕ್ರಮಗಳ ಅಪ್ಡೇಟ್ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಇದರಿಂದ ಆಘಾತವಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ.
Karnataka Latest News Live 1 November 2025ಬಿಹಾರ ಚುನಾವಣೆ ಬಳಿಕ ಸಿಎಂ ಬದಲಾಗೋದಿಲ್ಲ, ಪಿಎಂ ಬದಲಾಗಬಹುದು - ಸಚಿವ ಸಂತೋಷ್ ಲಾಡ್
Bihar Election Outcome CM Wont Change PM Might Change Says Minister Santosh Lad ಬಿಹಾರ ಚುನಾವಣೆ ಬಳಿಕ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುವುದು ಕೇವಲ ಊಹಾಪೋಹ, ಬೇಕಿದ್ದರೆ ಪ್ರಧಾನಿಯೇ ಬದಲಾಗಬಹುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
Karnataka Latest News Live 1 November 2025ಶಾಂತಿಕದಡುವ ಆರ್ಎಸ್ಎಸ್ ಬ್ಯಾನ್ ಆಗ್ಬೇಕ್, ಖರ್ಗೆ ಬಳಿಕ ನಿಷೇಧಕ್ಕೆ ಆಗ್ರಹಿಸಿದ ಬಿಕೆ ಹರಿಪ್ರಸಾದ್
ಶಾಂತಿಕದಡುವ ಆರ್ಎಸ್ಎಸ್ ಬ್ಯಾನ್ ಆಗ್ಬೇಕ್, ಖರ್ಗೆ ಬಳಿಕ ನಿಷೇಧಕ್ಕೆ ಆಗ್ರಹಿಸಿದ ಬಿಕೆ ಹರಿಪ್ರಸಾದ್, RSS ಪರ ಇದ್ದವರಿಗೆ ಕಾಂಗ್ರೆಸ್ನಲ್ಲಿ ಜಾಗ ಇಲ್ಲ. ಆರ್ಎಸ್ಎಸ್ ಕೋಮುಗಲಭೆಗಳಿಗೆ ಪ್ರತ್ಯಕ್ಷ ಕಾರಣವಾಗಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
Karnataka Latest News Live 1 November 2025ಹಿಂದಿವಾಲನಿಗೆ Niveditha Gowda ಕನ್ನಡ ಪಾಠ! 'ಹೇಳು' ಎನ್ನೋದನ್ನ ಸರಿಯಾಗಿ ಹೇಳಮ್ಮಾ ಎಂದ ಫ್ಯಾನ್ಸ್
Karnataka Latest News Live 1 November 2025ಹಿರಿಯಕ್ಕನಾಗಿ ಹೇಳ್ತಿದ್ದೇನೆ ಕೇಳಿ... ಪ್ರತಾಪ್ - ಪ್ರದೀಪ್ ಕಿತ್ತಾಟಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ನಡುವಿನ ವೈಯಕ್ತಿಕ ವಾಗ್ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಇಬ್ಬರೂ ಯುವ ಸಮೂಹಕ್ಕೆ ಮಾದರಿಯಾಗಬೇಕು ಎಂದು ಅಕ್ಕನಾಗಿ ಕಿವಿಮಾತು ಹೇಳುವುದಾಗಿ ಹೇಳಿದ್ದಾರೆ.
Karnataka Latest News Live 1 November 2025Bigg Boss 12 ಗ್ರ್ಯಾಂಡ್ ಫಿನಾಲೆ ಫೋಟೋ ರಿವೀಲ್ ಆಗೋಯ್ತು! ಗೆಲ್ಲೋರು, ರನ್ನರ್ ಅಪ್ ಇವರೇಯಂತೆ!
ಬಿಗ್ಬಾಸ್ 12 ಸೀಸನ್ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಗ್ರ್ಯಾಂಡ್ ಫಿನಾಲೆಯ ಎಐ ನಿರ್ಮಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಅಂತಿಮ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದು, ಇದು ವೀಕ್ಷಕರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
Karnataka Latest News Live 1 November 2025Celebrity Home - ಕೋಟಿ ಕೋಟಿ ಬೆಲೆಯ ಮನೆ ಹಿಂದೆ ಬಿದ್ದ ಸ್ಟಾರ್ ನಟರು; 150 ಕೋಟಿ ರೂ ಮನೆ ಒಡೆಯ ಯಾರು?
South Indian Celebrity Home: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ದುಬಾರಿ ಮನೆ ಹೊಂದಿರುವ ಸ್ಟಾರ್ ಹೀರೋ ಯಾರು ಗೊತ್ತಾ? ದುಬಾರಿ ಮನೆಗಳನ್ನು ಹೊಂದಿರುವ ಹೀರೋಗಳಲ್ಲಿ ತೆಲುಗು ಹೀರೋಗಳು ಎಷ್ಟು ಮಂದಿ ಇದ್ದಾರೆ? 150 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿರುವ ಹೀರೋ ಯಾರು?
Karnataka Latest News Live 1 November 2025BBK 12 - ಸೋಶಿಯಲ್ ಮೀಡಿಯಾಗೆ ಜೂನಿಯರ್ ರಕ್ಷಿತಾ ಶೆಟ್ಟಿ ಎಂಟ್ರಿ; ಪಡಿಯಚ್ಚು ಅಂದ್ರು ನೆಟ್ಟಿಗರು
Junior Rakshitha Shetty: ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯವರಂತೆ ಕಾಣುವ ಪ್ರಗತಿ ಎಂಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ರಕ್ಷಿತಾ ಅವರ ಸಂಭಾಷಣೆಗಳಿಗೆ ರೀಲ್ಸ್ ಮಾಡುವ ಇವರನ್ನು ನೆಟ್ಟಿಗರು 'ಜೂನಿಯರ್ ರಕ್ಷಿತಾ ಶೆಟ್ಟಿ' ಎಂದು ಕರೆಯುತ್ತಿದ್ದಾರೆ.
Karnataka Latest News Live 1 November 2025ಬೆಂಗಳೂರು Ola, Uber, Rapido ಕ್ರಾಬ್ ಡ್ರೈವರ್ಗಳಿಂದ ಹೊಸ ವಂಚನೆ; ಆಪ್ ಬಿಲ್ ನೋಡಿ ಮೋಸ ಹೋಗ್ಬೇಡಿ!
Bengaluru Cab Problems: ಬೆಂಗಳೂರಿನಲ್ಲಿ ಊಬರ್, ಒಲಾ, ರ್ಯಾಪಿಡೋ ಕ್ಯಾಬ್ಗಳ ಕೆಲ ಡ್ರೈವರ್ಗಳು ನಕಲಿ ಆಪ್ ತೋರಿಸಿ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಓರ್ವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
Karnataka Latest News Live 1 November 2025ಪ್ರತಿಷ್ಠಿತ ಕಂಪೆನಿಯಲ್ಲಿ ದೊಡ್ಡ ಮಟ್ಟದ ಲೇಆಫ್; ಆತಂಕದಲ್ಲಿ ನಿದ್ದೆ ಬಿಟ್ಟ ಉದ್ಯೋಗಿಗಳು!
ಸಾಕಷ್ಟು ಕಂಪೆನಿಗಳು ಲೇಆಫ್ ಮಾಡಿವೆ. ಕೊರೊನಾ ವೈರಸ್ ಬಂದು, ಲಾಕ್ಡೌನ್ ಆದಬಳಿಕ ಸಾಕಷ್ಟು ಉದ್ಯೋಗಗಳಲ್ಲಿ ಲೇಆಫ್ ಆಗಿವೆ, ಕಳೆದ ಎರಡು ವರ್ಷಗಳಿಂದ ಎಐ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಇದರಿಂದಲೂ ಉದ್ಯೋಗಿಗಳನ್ನು ಕಡಿತ ಮಾಡಲಾಗ್ತಿದೆ.
Karnataka Latest News Live 1 November 2025ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕರಾಳ ದಿನಾಚರಣೆ, ಎಂಇಎಸ್ ಮುಖಂಡ ಶುಭಂ ಶೆಳಕೆ ವಶ
ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕರಾಳ ದಿನಾಚರಣೆ, ಎಂಇಎಸ್ ಮುಖಂಡ ಶುಭಂ ಶೆಳಕೆ ವಶ, ಅನುಮತಿ ಪಡೆಯದೇ ಕರಾಳ ದಿನಾಚರಣೆ ಮೆರವಣಿಗೆ, ನಿರ್ಬಂಧಿತ ಪ್ರದೇಶಕ್ಕೆ ನುಗ್ಗಿದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.