ಗೋಕರ್ಣ ಬಳಿ ಮುಳುಗುತ್ತಿದ್ದ ಹಡಗು ರಕ್ಷಣೆ; 8 ವಿಜ್ಞಾನಿಗಳ ಸಹಿತ 36 ಮಂದಿ ಸೇಫ್..!

ಗೋಕರ್ಣ ಬಳಿ ಮುಳುಗುತ್ತಿದ್ದ ಹಡಗು ರಕ್ಷಣೆ; 8 ವಿಜ್ಞಾನಿಗಳ ಸಹಿತ 36 ಮಂದಿ ಸೇಫ್..!

Published : Jul 28, 2023, 04:48 PM IST

ಕಾರವಾರದ ಗೋಕರ್ಣ ಬಳಿ ಮುಳುಗಡೆ ಭೀತಿಯಲ್ಲಿ ಇದ್ದ 8 ವಿಜ್ಞಾನಿಗಳನ್ನು ಹೊಂದಿದ್ದ ಸಂಶೋಧನಾ ಹಡಗನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
 

ಗೋಕರ್ಣದಿಂದ ಸುಮಾರು 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಎಂಜಿನ್ ಕೆಟ್ಟು ಮುಳುಗುವ ಹಂತದಲ್ಲಿದ್ದ ಹಡಗನ್ನು ರಕ್ಷಣೆ ಮಾಡಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಾಫಿಗೆ ಸೇರಿದ ಆರ್.ವಿ.ಸಿಂಧು ಸಾಧನಾ ಎಂಬ ಸಂಶೋಧನಾ ಹಡಗು ಇದಾಗಿದ್ದು, 8 ವಿಜ್ಞಾನಿಗಳು ಹಾಗೂ‌ ಹಡಗಿನ ಸಿಬ್ಬಂದಿ ಸೇರಿ ಒಟ್ಟು 36 ಜನರು ಅದರಲ್ಲಿ ಇದ್ದರು.
ಸಂಶೋಧನಾ ಕಾರ್ಯದ ಭಾಗವಾಗಿ ಗೋವಾದಿಂದ ಕೊಚ್ಚಿಯತ್ತ ಹಡಗಿನಲ್ಲಿ ವಿಜ್ಞಾನಿಗಳು ಸಾಗುತ್ತಿದ್ರು. ಸಮುದ್ರದಲ್ಲಿ ಬೃಹತ್ ಅಲೆಗಳು ಹಾಗೂ ವಿಪರೀತ ಗಾಳಿಯಿಂದಾಗಿ ಮಂಗಳೂರು, ಕಾರವಾರ ಬಂದರಿನ ಟಗ್ ನೆರವಿಗೆ ಧಾವಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಗೋವಾದಿಂದ ಶಿಪ್‌ನೊಂದಿಗೆ  ಇಂಡಿಯನ್ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗೆ ಇಳಿದಿದೆ.
ಬುಧವಾರ ರಾತ್ರಿಯೇ ಹಡಗನ್ನು ರವಾನೆ ಮಾಡಿ ಸಂಶೋಧನಾ ಹಡಗನ್ನು ದುರಸ್ಥಿ ಮಾಡಲು ಪ್ರಯತ್ನಿಸಿದ್ದರು, ಹಾಗೂ ಈ ವೇಳೆ ಮತ್ತೆರಡು ಬೋಟ್‌ಗಳನ್ನು ಕೂಡಾ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು. ವಿಜ್ಞಾನಿಗಳಿದ್ದ ಹಡಗಿನ ದುರಸ್ಥಿ ಸಾಧ್ಯವಾಗದ ಕಾರಣ ಗೋವಾದತ್ತ ಹಡಗನ್ನು  ಕೋಸ್ಟ್ ಗಾರ್ಡ್ ಎಳೆದೊಯ್ಯುತ್ತಿದ್ದು, ಹಡಗಿನಲ್ಲಿ ಗೋವಾದತ್ತ ವಿಜ್ಞಾನಿಗಳ ತಂಡ ಹಿಂತಿರುಗುತ್ತಿದೆ.

29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
22:53ತರಕಾರಿ ತರಲು ಹೋದ ನಗರಸಭೆ ಸದಸ್ಯ ಮರ್ಡರ್: ಕಾರಣವೇನು?
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
24:30ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!
01:59Karwar: ಆಟವಾಡೋವಾಗ ಸ್ಲೈಡಿಂಗ್‌ ಗೇಟ್‌ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!
05:11ಕಾಮಗಾರಿಗಾಗಿ ಗುಡ್ಡ ನೆಲಸಮ, ಉತ್ತರಕನ್ನಡದ ಭೂಕಂಪನ ಪ್ರಕೃತಿ ನೀಡಿದ ಎಚ್ಚರಿಕೆಯಾ?
24:03 ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ
08:22ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ, ಶಾಸಕರ ಭೇಟಿ: 'ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು'
11:32ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ
04:03ಶಿರೂರು ಗುಡ್ಡಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ!
Read more