Aug 23, 2020, 5:10 PM IST
ಬೆಳಗಾವಿ (ಆ. 23): ಅಥಣಿಯ ಹುಲಗಬಾಳಿ ಗ್ರಾಮಸ್ಥರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ಜನರು ಪ್ರವಾಹದಲ್ಲಿ ಬೋಟ್ ಇಲ್ಲದೇ ಪ್ಲಾಸ್ಟಿಕ್ ಬ್ಯಾರೆಲ್ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯನ್ನು ನೋಡಿದ ಸಿಎಮ ಬೋಟ್ ಒದಗಿಸುವಂತೆ ಡಿಸಿಗೆ ಸೂಚಿಸಿದ್ರು. ಡಿಸಿ ಸ್ಥಳಕ್ಕೆ ಬಂದು ಬೋಟ್ ಹಸ್ತಾಂತರಿಸಿದ್ದಾರೆ. ಇದರಿಂದಾಗಿ ಅಥಣಿ ಜನರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್ ಇದು..!