'ಆಗ ಲಾಕ್‌ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದ್ರು, ಈಗ ಲಾಕ್‌ಡೌನ್ ಮಾಡ್ಬೇಕಿತ್ತು'

Jun 26, 2020, 4:37 PM IST

ಬೆಂಗಳೂರು (ಜೂ. 26): ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತದೆ ಎಂಬ ವದಂತಿಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ. 

ಲಾಕ್‌ಡೌನ್‌ ಆಗುತ್ತಾ? ಆಗಲ್ವಾ? ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಆಗ ಲಾಕ್‌ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದ್ರು. ಈಗ ಲಾಕ್‌ಡೌನ್ ಮಾಡ್ಬೇಕಿತ್ತು. ಸರ್ವಪಕ್ಷಗಳ ಸಭೆ ಕರೆದರೆ ಸಲಹೆ ಕೊಡುತ್ತೇವೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.