ಚಿಂತಾಮಣಿ: ಮಗನಿಗೆ ಈಜು ಕಲಿಸಲು ಹೋಗಿ ತಂದೆ ನೀರುಪಾಲು

Published : May 05, 2024, 01:03 PM IST
ಚಿಂತಾಮಣಿ: ಮಗನಿಗೆ ಈಜು ಕಲಿಸಲು ಹೋಗಿ ತಂದೆ ನೀರುಪಾಲು

ಸಾರಾಂಶ

ಬಾಬು ತನಗೆ ಈಜು ಬಾರದಿದ್ದರೂ ತನ್ನ 10 ವರ್ಷದ ಮಗನಿಗೆ ಕೃಷಿ ಹೊಂಡದಲ್ಲಿ ಈಜು ಕಲಿಸಲು ತೆರಳಿದ್ದು, ಮಗನಿಗೆ ಈಜಲು ಟೂಬ್ ಹಾಕಿ ತಾನೂ ಕೂಡ ನೀರಿನಲ್ಲಿ ಇಳಿದಿದ್ದಾರೆ. ಈಜು ಬಾರದೆ ಬಾಬು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. 

ಚಿಂತಾಮಣಿ(ಮೇ.05):  ಕೃಷಿ ಹೊಂಡದಲ್ಲಿ ಮಗನಿಗೆ ಈಜು ಕಲಿಸಲು ಹೋಗಿ ತಂದೆಯೇ ನೀರುಪಾಲಾದ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಪಲ್ಲಿಯಲ್ಲಿ ಶನಿವಾರ ನಡೆದಿದೆ. 
ಮೃತನನ್ನು ತಾಲೂಕಿನ ಎಸ್ ರಾಗುಟ್ಟಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೋನಪಲ್ಲಿಯ ಬಾಬು (೪೦) ಎಂದು ಗುರುತಿಸಲಾಗಿದೆ. 

ಬಾಬು ತನಗೆ ಈಜು ಬಾರದಿದ್ದರೂ ತನ್ನ ೧೦ ವರ್ಷದ ಮಗನಿಗೆ ಕೃಷಿ ಹೊಂಡದಲ್ಲಿ ಈಜು ಕಲಿಸಲು ತೆರಳಿದ್ದು, ಮಗನಿಗೆ ಈಜಲು ಟೂಬ್ ಹಾಕಿ ತಾನೂ ಕೂಡ ನೀರಿನಲ್ಲಿ ಇಳಿದಿದ್ದಾರೆ.

ಕೋಲಾರ: ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ..!

ಈಜು ಬಾರದೆ ಬಾಬು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಕೆಂಚರ‍್ಲಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಹಾಸನದಲ್ಲೇ ಹಾಡ ಹಗಲೇ ಬೆಚ್ಚಿ ಬೀಳಿಸುವ ಘಟನೆ: ಶಾಲಾ ಬಾಲಕಿಯ ಬೆನ್ನಟ್ಟಿಕೊಂಡು ಮನೆ ಬಾಗಿಲವರೆಗೂ ಬಂದ ಅಪರಿಚಿತ
ಡ್ರಗ್ಸ್ ಹಾಗೂ ಅಕ್ಕಿ ದಂಧೆಯಲ್ಲಿ ಆಪ್ತರ ಹೆಸರು: ಅವರು ಮಾಡಿದ್ದನ್ನೆಲ್ಲಾ ನಮ್ಮ ತಲೆಗೆ ಕಟ್ಟಿದರೆ ಹೇಗೆ? - ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್