ಹುಣಸೋಡು ದುರಂತದಲ್ಲಿ ಬಿರುಕು ಬಿಟ್ಟಿದ್ದ ಮನೆ ನೆಲಸಮ, ಸಂಕಷ್ಟದಲ್ಲಿ ಕೂಲಿ ಕಾರ್ಮಿಕ ದಂಪತಿ

Sep 4, 2021, 9:56 AM IST

ಶಿವಮೊಗ್ಗ (ಸೆ. 04): ಹುಣಸೋಡು ಸ್ಫೋಟ ಪ್ರಕರಣದಲ್ಲಿ ಅಂದು ಬಿರುಕು ಬಿಟ್ಟಿದ್ದ ಮನೆ, ಈಗ ಮಳೆಯ ಆರ್ಭಟಕ್ಕೆ ನೆಲಸಮವಾಗಿದೆ. ಸೂರು ಕಳೆದುಕೊಂಡು ಕೂಲಿ ಕಾರ್ಮಿಕ ದಂಪತಿ ಸಂಕಷ್ಟದಲ್ಲಿದ್ದಾರೆ. ಇನ್ನೂ ಹತ್ತಾರು ಮನೆಗಳು ಬೀಳುವ ಹಂತದಲ್ಲಿದೆ. 

ಪುಲ್ವಾಮಾ ದಾಳಿ ಕೋರರ ಜೊತೆ ಮಾತುಕತೆ; ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕಿದೆ ಎಂದ ತಾಲಿಬಾನ್

ಇನ್ನು ತುಮಕೂರಿನ ಕುಂದೂರು ಗ್ರಾಮ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕವಿಲ್ಲದೇ ಕುಗ್ರಾಮವಾಗಿ ಉಳಿದಿದೆ. ನಗರಕ್ಕೆ ಹೊಂದಿಕೊಂಡಿದ್ದರೂ ಯಾವುದೇ ಸೌಕರ್ಯವಿಲ್ಲದೇ ಕುಗ್ರಾಮವಾಗಿಯೇ ಉಳಿದಿದೆ. ಶಾಸಕ ಗೌರಿ ಶಂಕರ್, ಮಾಜಿ ಶಾಸಕ ಸುರೇಶ್ ಗೌಡ ಒಣ ಪ್ರತಿಷ್ಠೆಯಿಂದಾಗಿ ಜನರು ಪರದಾಡುವಂತಾಗಿದೆ.