Apr 13, 2022, 3:06 PM IST
ಬೆಂಗಳೂರು (ಏ. 13): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಈಶ್ವರಪ್ಪ (KS Eshwarappa)ರಾಜೀನಾಮೆ (Resignation) ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿವೆ.
ಕಮಿಷನ್ ದಂಧೆ, ಸಂತೋಷ್ ಆತ್ಮಹತ್ಯೆ: ಈಶ್ವರಪ್ಪ ಬಂಧನಕ್ಕೆ ಡಿಕೆಶಿ ಪಟ್ಟು
ಉಡುಪಿ (Udupi) ನಗರ ಪೊಲೀಸ್ ಠಾಣೆಯಲ್ಲಿ (Police Station) ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಎಫ್ಐಆರ್ (FIR) ಆಧಾರದಲ್ಲಿ ಈಶ್ವರಪ್ಪನವರು, ಅರೆಸ್ಟ್ ಆಗ್ತಾರಾ.? ಯಾವೆಲ್ಲಾ ಸಾಧ್ಯತೆಗಳಿವೆ..? ಎಂದು ಹಿರಿಯ ವಕೀಲರಾದ ಶ್ಯಾಮ್ ಸುಂದರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.