ಬಿಪಿಎಲ್‌ ಕಾರ್ಡ್‌ ವಿವಾದ: ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಪ್ರತಿಕ್ರಿಯೆ!

Feb 15, 2021, 5:45 PM IST

ಬೆಂಗಳೂರು ( ಫೆ.15): ಮನೆಯಲ್ಲಿ ಟೀವಿ, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ  ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಹಜವಾಗಿ ಸರ್ಕಾರದ ಈ ನಡೆ ಜನಾಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರ ಖುದ್ದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.  

ಇದನ್ನೂ ನೋಡಿ: ನಿಮಗೆ ಬಡವರ ಯೋಜನೆಗಳು ಮಾತ್ರ ಕಾಣೋದೇನ್ರಿ..? ಸರ್ಕಾರದ ನಡೆಗೆ ಖಾದರ್ ಆಕ್ರೋಶ...

ಇನ್ನೊಂದು ಕಡೆ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಕೂಡಾ ಅಚ್ಚರಿ ಹುಟ್ಟಿಸಿದೆ. ಬಡವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಅನ್ನಭಾಗ್ಯದ ತಂಟೆಗೆ ಯಾರಾದ್ರೂ ಹೋದ್ರೆ ಗುಡುಗುವ ಸಿದ್ದರಾಮಯ್ಯನವರ ಇಂದಿನ ಪ್ರತಿಕ್ರಿಯೆ ಮಾತ್ರ 'ಥಂಡಾ'ವಾಗಿತ್ತು!