ಸಿಎಂ ವಿರುದ್ಧ ಗೌರ್ನರ್‌ಗೆ ದೂರು; ಈಶ್ವರಪ್ಪ ಬಗ್ಗೆ ನಳೀನ್ ಕುಮಾರ್ ಕಟೀಲ್ ಮೌನ

Apr 2, 2021, 11:09 AM IST

ಬೆಂಗಳೂರು (ಏ. 02): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹಸ್ತಕ್ಷೇಪದ ಆರೋಪದೊಂದಿಗೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ನಡೆಗೆ ಹಲವು ಸಚಿವರು ಹಾಗೂ ಆಡಳಿತಾರೂಢ ಬಿಜೆಪಿಯ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಳೀನ್ ಕುಮಾರ್ ಕಟೀಲ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. 

ಸಿಎಂ ವಿರುದ್ಧ ಗೌರ್ನರ್‌ಗೆ ದೂರು; ಈಶ್ವರಪ್ಪ ವಿರುದ್ಧ ಸಚಿವ, ಶಾಸಕರ ಕಿಡಿ

ಕೆಲ ಶಾಸಕರು ಸ್ವತಃ ಕಟೀಲ್‌ಗೆ ಕರೆ ಮಾಡಿ, ಈಶ್ವರಪ್ಪ ವಿರುದ್ಧ ದೂರು ನೀಡಿದರೂ, ಆಯ್ತು ಮಾತನಾಡೋಣ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.