Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?

Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?

Published : May 04, 2024, 11:22 AM IST

ಕಾಲಿವುಡ್‌ನಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಅದು ತಲೈವಾ ರಜನಿಕಾಂತ್ ಸಿನಿಮಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮಧ್ಯೆ. ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಕೂಲಿ ಸಿನಿಮಾಗೆ ಸಂಬಂಧಪಟ್ಟಂತೆ ಆಕ್ರೋಶಗೊಂಡಿರೋ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್ ಕಳಿಸಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರೋ ತಲೈವಾ ನಟಿಸುತ್ತಿರುವ ‘ಕೂಲಿ’ ಚಿತ್ರದ(Coolie Movie) ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚಿಗಷ್ಟೇ ಟೀಸರ್ ಮೂಲಕ ಚಿತ್ರದ ಟೈಟಲ್‌ನ್ನ ಚಿತ್ರತಂಡ ರಿವೀಲ್ ಮಾಡಿತ್ತು. ಟೈಟಲ್ ಟೀಸರ್ ರಿಲೀಸ್ ಆಗ್ತಿದ್ದಂತೆ 'ಕೂಲಿ' ಕ್ರೇಜ್ ದುಪ್ಪಟ್ಟಾಯ್ತು. ಅನಿರುದ್ಧ್ ಹಿನ್ನೆಲೆ ಸಂಗೀತ ನೀಡಿದ್ದ ಈ ಟೀಸರ್‌ನಲ್ಲಿ, ಡಿಸ್ಕೋ ಹಾಡನ್ನು ಬಳಸಲಾಗಿತ್ತು. ಅದು ಇಳಯರಾಜಾ(Ilayaraja) ಹಾಕಿದ ಟ್ಯೂನ್ ಹೀಗಾಗಿ 'ಕೂಲಿ' ನಿರ್ಮಾಣ ಸಂಸ್ಥೆಗೆ ಮ್ಯೂಸಿಕ್ ಮಾಂತ್ರಿಕ ಇಳಯರಾಜಾ ಕೃತಿ ಚೌರ್ಯದ ನೋಟಿಸ್(Copyright Notice) ಕಳಿಸಿದ್ದಾರೆ. 1983ರಲ್ಲಿ ರಜನಿಕಾಂತ್(Rajinikanth) ತಂಗಮಗನ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾಗೆ ಇಳಯಾರಾಜ ಅವರೇ ಟ್ಯೂನ್‌ಹಾಕಿದ್ರು. ಅದೇ ಸಿನಿಮಾದ ವಾ ವಾ..ಎಂಬ ಹಾಡಿನ ತುಣುಕನ್ನ, ಕೂಲಿಯಲ್ಲಿ ಬಳಸಿಕೊಳ್ಳಲಾಗಿದೆ ಎಂಬುದು ಇಳಯರಾಜಾ ಅವರ ಆರೋಪ. ಕೂಲಿ ಚಿತ್ರದ ಟೀಸರ್‌‌ನಲ್ಲಿ ಇಳಯರಾಜಾ ಅವರ ವಾ ವಾ ಪಾಕಂ ವಾ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ಆದ್ರೆ ಮ್ಯೂಸಿಕ್‌ನ ಮೊದಲ ಮಾಲೀಕ ಇಳಯರಾಜ ಆಗಿದ್ರಿಂದ, ಕೃತಿಚೌರ್ಯದ ಆರೋಪ ಮಾಡಿದ್ದಾರೆ.. ಹೀಗಾಗಿ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು, ಇಳಯರಾಜ ಸನ್ ಪಿಕ್ಚರ್ಸ್‌ಗೆ ನೋಟಿಸ್ ಕಳುಹಿಸಿದ್ದಾರೆ. ಸದ್ಯ ನೋಟೀಸ್ ನಲ್ಲಿ ಇದು ಹಕ್ಕುಸ್ವಾಮ್ಯ ಕಾಯಿದೆ 1957ರ ಅಡಿಯಲ್ಲಿ ಅಪರಾಧ ಅಂತ ಹೇಳಲಾಗಿದೆ.

ಇದನ್ನೂ ವೀಕ್ಷಿಸಿ:  Sudeep: ಕಿಚ್ಚನ ಕೋಟೆಗೆ 'ಜೈಲರ್' ಮಾಸ್ಟರ್ ಎಂಟ್ರಿ..!ಆಕ್ಷನ್ ಮೂಡ್‌ನಲ್ಲಿ ಬಾದ್ ಷಾ ಸುದೀಪ್..!

02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more