ಶಿವಣ್ಣ ನಿವಾಸದಲ್ಲಿ ಮಹತ್ವದ ಸಭೆ; ಚಿತ್ರರಂಗದ ನೆರವಿಗೆ ಸಿಎಂಗೆ ಮನವಿ

Jul 24, 2020, 6:20 PM IST

ಬೆಂಗಳೂರು (ಜು. 24): ಲಾಕ್‌ಡೌನ್ ಸಂದರ್ಭದಲ್ಲಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ನಿಂತು ಹೋಗಿತ್ತು. ಸದ್ಯದ ಚಿತ್ರರಂಗದ ಸ್ಥಿತಿಗತಿ ಬಗ್ಗೆ ಚರ್ಚಿಸಲು ಶಿವಣ್ಣ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಚಿತ್ರರಂಗದ ಬೇಡಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಆ ನಂತರ ಶಿವರಾಜ್‌ಕುಮಾರ್ ನೇತೃತ್ವದಲ್ಲಿ ಹಲವು ಹಿರಿಯರು ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಾರೆ. 

 ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಕೆಲವರು ನಿರ್ದೇಶಕರು, ನಿರ್ಮಾಪಕರ ಸಂಘದಿಂದ ಪ್ರವೀಣ್, ರಾಮು, ಜಯಣ್ಣ ಸೇರಿದಂತೆ ಕೆಲವೇ ಕೆಲವು ಕಲಾವಿದರು ಭಾಗಿಯಾಗಿದ್ದಾರೆ. ಚಿತ್ರರಂಗದ ಕಾರ್ಮಿಕರ ಸಂಕಷ್ಟಗಳು, ಮುಂದೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸಚಿವರಿಂದ ಉತ್ತರ ಕೊಡಿಸಲು ಬಿಎಸ್‌ವೈ ರೆಡಿ