Mekedatu Project: ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ: ಸಿದ್ದರಾಮಯ್ಯ

Jan 5, 2022, 3:11 PM IST

ಬೆಂಗಳೂರು (ಜ. 05): ಕೊರೋನಾ ನಿಯಂತ್ರಣಕ್ಕೆ (Covid Control) ರಾಜ್ಯಾದ್ಯಂತ 2 ವಾರ ಟಫ್‌ರೂಲ್ಸ್ (Tough Rules) ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ. 50 ರಷ್ಟು ಮಿತಿಗೊಳಿಸಲಾಗಿದೆ. ಜ. 19 ರವರೆಗೂ ನೈಟ್ ಕರ್ಫ್ಯೂ ಮುಂದೂಡಿಕೆಯಾಗಲಿದೆ. 

Covid Tough Rules: ಇದು ಕೋವಿಡ್ ಲಾಕ್‌ಡೌನ್ ಅಲ್ಲ, ಬಿಜೆಪಿ ಲಾಕ್‌ಡೌನ್: ಡಿಕೆಶಿ

ಸರ್ಕಾರದ ಈ ನಿರ್ಧಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ. ಜನರ ಹಿತಕ್ಕಾಗಿ ನಾವು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ' ಎಂದಿದ್ದಾರೆ.