'ಕೈ' ಪಾಳಯಲ್ಲಿ ಜಾತಿ ಪಾಲಿಟಿಕ್ಸ್, ಸಂಚಲನ ಮೂಡಿಸಿದೆ ಲಿಂಗಾಯತರ ಪ್ರತ್ಯೇಕ ಸಭೆ

Sep 23, 2021, 3:33 PM IST

ಬೆಂಗಳೂರು (ಸೆ. 23): ಕಾಂಗ್ರೆಸ್‌ನಲ್ಲಿ ಜಾತಿ ಪಾಲಿಟಿಕ್ಸ್ ತಾರಕಕ್ಕೇರಿದೆ. ನಿನ್ನೆ ಒಕ್ಕಲಿಗರ ಸಭೆ, ಇಂದು ಲಿಂಗಾಯತ ನಾಯಕರ ಸಭೆ ನಡೆದಿದೆ. ಡಿಕೆಶಿ ಪ್ರಾಯೋಜಿತ ಒಕ್ಕಲಿಗರ ಸಭೆ ಬೆನ್ನಲ್ಲೇ ಲಿಂಗಾಯತ ನಾಯಕರು ಅಲರ್ಟ್ ಆಗಿದ್ದಾರೆ. 

ಗೊತ್ತೇನ್ರಿ..ಕೇಳ್ರಿ ಇಲ್ಲಿ.. ಸಿದ್ದರಾಮಯ್ಯ 'ಲಾ' ಪಾಯಿಂಟ್‌ಗೆ ತಬ್ಬಿಬ್ಬಾಯ್ತು ವಿಧಾನಸಭೆ.!

ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಂಬಿ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. 2 ನೇ ಹಂತದ ನಾಯಕರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನ ಗಮನ ಸೆಳೆಯಲು ಲಿಂಗಾಯತರು ಸಭೆ ನಡೆಸಿದ್ದಾರೆ.