Jun 18, 2021, 9:46 AM IST
ಬೆಂಗಳೂರು (ಜೂ. 18): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಿರುಗಾಳಿ, ಸಮನ್ವಯ ಕೊರತೆ ಸರಿಪಡಿಸಲು ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್, ಇಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲಿದ್ದಾರೆ. ನಳೀನ್ ಕುಮಾರ್, ಅರುಣ್ ಕುಮಾರ್, ರವಿ ಕುಮಾರ್, ಅಶ್ವಥ್ ನಾರಾಯಣ್, ಸಿದ್ಧರಾಜು, ಮಹೇಶ್ ಟೆಂಗಿನಕಾಯಿ ಭಾಗಿಯಾಗಲಿದ್ದಾರೆ. ಪಕ್ಷ, ಸಂಘಟನ ಬಲಪಡಿಸುವ ಕುರಿತಂತೆ ಸಭೆ ನಡೆಯಲಿದೆ.