ಕಾನೂನಿನ ಕಪಿಮುಷ್ಠಿಯಲ್ಲಿ ಡಿಜೆ ಹಳ್ಳಿ ಕೀಚಕರು; ಜೀವನವಿಡೀ ಠಾಣೆ ಅಲೆಯಬೇಕು..!

Aug 16, 2020, 5:28 PM IST

ಬೆಂಗಳೂರು (ಆ. 16): ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂಬ ನೆಪವೊಡ್ಡಿ ಪುಂಡರ ಗುಂಪು ಡಿಜೆ ಹಳ್ಳಿ ಹೊತ್ತಿ ಉರಿಯುವಂತೆ ಮಾಡಿತು. ಕಂಡ ಕಂಡವರ ವಾಹನಗಳಿಗೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟರು. ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿದರು. ಇಂತವರನ್ನು ಕಾನೂನಿನಿಂದಲೇ ಕಟ್ಟಿ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಜೀವನವಿಡೀ ಠಾಣೆ ಅಲೆಯುವಂತೆ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮೆಗಾ ಪ್ಲಾನ್ ಮಾಡಿದ್ದಾರೆ. ಪ್ರತಿ ಆರೋಪಿಗೂ ಕೋಮುಗಲಭೆಗೆ ಪ್ರೇರಣೆ, ಸರ್ಕಾರಿ ಕೆಲಸಕ್ಕೆ ಅಡ್ಡಿ, ರಾಬರಿ, ಹಲ್ಲೆ, ಸರ್ಕಾರಿ ಆಸ್ತಿ ನಷ್ಟ ಸೇರಿ ಹಲವು ಕೇಸ್‌ ಹಾಕಲು ಸಿದ್ಧತೆ ನಡೆಸಲಾಗಿದೆ. ಕಾನೂನಿನಿಂದಲೇ ಇಂತವರನ್ನು ಕಟ್ಟಿ ಹಾಕಲು ಸಿದ್ಧತೆ ನಡೆಸಿದ್ದಾರೆ. 

ಪುಂಡರ ಆಸ್ತಿ ಹರಾಜು ಹಾಕಿ, ವಸೂಲಿ ಮಾಡಿ; ಉ.ಪ್ರ ಕಾನೂನು ಇಲ್ಲಿಯೂ ಬರಬೇಕಿದೆ!