Asianet Suvarna News Asianet Suvarna News

ಪುಂಡರ ಅಸ್ತಿ ಹರಾಜು ಹಾಕಿ, ವಸೂಲಿ ಮಾಡಿ; ಉ.ಪ್ರ ಕಾನೂನು ಇಲ್ಲಿಯೂ ಬರಬೇಕಿದೆ!

ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂಬ ನೆಪವೊಡ್ಡಿ ಪುಂಡರ ಗುಂಪು ಡಿಜೆ ಹಳ್ಳಿ ಹೊತ್ತಿ ಉರಿಯುವಂತೆ ಮಾಡಿತು. ಕಂಡ ಕಂಡವರ ವಾಹನಗಳಿಗೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟರು. ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿದರು. ಪೊಲೀಸ್ ವಾಹನಗಳನ್ನು ಸುಟ್ಟರು. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟು ಬೀದಿಗೆ ಬರುವಂತೆ ಮಾಡಿದರು. ಈ ಗಲಭೆಯಿಂದ 3 ಕೋಟಿಗೂ ಹೆಚ್ಚು ನಷ್ಟ ಅನುಭವಿಸುವಂತೆ ಮಾಡಿದರು. ಯಾರೋ ಕೊಟ್ಟ ಕುಮ್ಮಕ್ಕಿನಿಂದ ಇಂತಹ ವಿಧ್ವಂಸಕ ಕೃತ್ಯ ಮಾಡಿದ್ದಾರೆ ಈ ಪುಂಡರು. ಆದರೆ ನಷ್ಟ ಅನುಭವಿಸಿದ್ದು ಮಾತ್ರ ಇನ್ಯಾರೋ.

ಬೆಂಗಳೂರು (ಆ. 16): ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂಬ ನೆಪವೊಡ್ಡಿ ಪುಂಡರ ಗುಂಪು ಡಿಜೆ ಹಳ್ಳಿ ಹೊತ್ತಿ ಉರಿಯುವಂತೆ ಮಾಡಿತು. ಕಂಡ ಕಂಡವರ ವಾಹನಗಳಿಗೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟರು. ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿದರು. ಪೊಲೀಸ್ ವಾಹನಗಳನ್ನು ಸುಟ್ಟರು. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟು ಬೀದಿಗೆ ಬರುವಂತೆ ಮಾಡಿದರು. ಈ ಗಲಭೆಯಿಂದ 3 ಕೋಟಿಗೂ ಹೆಚ್ಚು ನಷ್ಟ ಅನುಭವಿಸುವಂತೆ ಮಾಡಿದರು.

ಯಾರೋ ಕೊಟ್ಟ ಕುಮ್ಮಕ್ಕಿನಿಂದ ಇಂತಹ ವಿಧ್ವಂಸಕ ಕೃತ್ಯ ಮಾಡಿದ್ದಾರೆ ಈ ಪುಂಡರು. ಆದರೆ ನಷ್ಟ ಅನುಭವಿಸಿದ್ದು ಮಾತ್ರ ಇನ್ಯಾರೋ. ಇಂತವರನ್ನೆಲ್ಲಾ ಖಾಕಿ ಪಡೆ ಹೆಡೆಮುರಿ ಕಟ್ಟಿದೆ. ಬರೀ ಇಷ್ಟು ಮಾಡಿದರೆ ಇವರು ಸುಮ್ಮನಿರುವುದಿಲ್ಲ. ಆಗಿರುವ ನಷ್ಟವನ್ನು ಇವರೇ ಕಟ್ಟಿಕೊಡುವಂತೆ ಮಾಡಬೇಕು. ಇವರ ಆಸ್ತಿಯನ್ನೇ ಹರಾಜು ಹಾಕಿ ನಷ್ಟವನ್ನು ತುಂಬಬೇಕು. ಉತ್ತರ ಪ್ರದೇಶದಲ್ಲಿರುವ ಕಾನೂನು ಇಲ್ಲಿಯೂ ಬಂದರೆ ಇಂತವರೆಲ್ಲಾ ಬಿಲ ಸೇರುತ್ತಾರೆ. ಹಾಗಾದರೆ ಏನದು ಕಾನೂನು? ಏನಿದೆ ಅದರಲ್ಲಿ? ಇಲ್ಲಿದೆ ಒಂದು ರಿಪೋರ್ಟ್..!