May 5, 2021, 5:01 PM IST
ಬೆಂಗಳೂರು (ಮೇ. 05): ಜನತಾ ಕರ್ಫ್ಯೂಗೆ ನಿರ್ಗತಿಕರು ಹೈರಾಣಾಗಿದ್ದಾರೆ. ಭಿಕ್ಷುಕರ ನೆರವಿಗೆ ಧಾವಿಸಿದ್ದಾರೆ ದೇವನಹಳ್ಳಿ ಪೊಲೀಸರು. ಭಿಕ್ಷುಕರಿಗೆ ಕ್ಷೌರ ಮಾಡಿಸಿ, ಊಟ ನೀಡಿ, ಬಟ್ಟೆ ತೊಡಿಸಿ ಮಾನವೀಯತೆ ಮೆರೆದಿದ್ಧಾರೆ. ದೇವನಹಳ್ಳಿ ಎಸಿಪಿ, ಎಸ್ಐ ನಾಗರಾಜ್ ಹಾಗೂ ಸಿಬ್ಬಂದಿ ಮಾನವೀಯತೆ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 'ನಮ್ಮ ಮನೆಯವರೇ ನಮ್ಮನ್ನು ಕೇರ್ ಮಾಡಲಿಲ್ಲ. ಪೊಲೀಸರು ಕಷ್ಟಕಾಲದಲ್ಲಿ ಸ್ಪಂದಿಸಿದ್ದಾರೆಂದು' ಕಣ್ಣೀರು ಹಾಕಿದ್ದಾರೆ.