Cabinet Reshuffle: ಹಿರಿಯರಿಗೆ ಕೊಕ್, ಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಡಾ ಸುಧಾಕರ್

Jan 24, 2022, 2:45 PM IST

ಬೆಂಗಳೂರು (ಜ. 24): ಸಂಪುಟ ವಿಸ್ತರಣೆ (Cabinet Reshuffle) ವೇಳೆ ಹಿರಿಯರಿಗೆ ಕೊಕ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹೈ ಕಮಾಂಡ್ (HighCommand) ತೀರ್ಮಾನ ಅಂತಿಮ, ನಮ್ಮ ಸಿಎಂ ಹಾಗೂ ಹೈಕಮಾಂಡ್ ಚರ್ಚಿಸಿ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧರಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

Karnataka Cabinet Reshuffle: ಸಂಪುಟ ಪುನಾರಚನೆ ಯಾವಾಗ.? ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Reshuffle) ಯಾವಾಗ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಪಂಚರಾಜ್ಯ ಚುನಾವಣೆ ಬಳಿಕ ಕ್ಯಾಬಿನೆಟ್ ಸರ್ಕಸ್ ನಡೆಯಲಿದೆ. ಮಾರ್ಚ್ 2 ನೇ ವಾರದವರೆಗೂ ಸಂಪುಟ ಪುನಾರಚನೆ ಇಲ್ಲ. ಸಚಿವ ಸಂಪುಟ ಪುನಾರಚನೆ ಸಭೆಗಳನ್ನು ನಡೆಸಬೇಡಿ. ಬಜೆಟ್ ಅಧಿವೇಶನದ ಬಳಿಕ ಸಿಎಂ ನಿರ್ಧಾರ ಮಾಡುತ್ತಾರೆ' ಎಂದು ಸಚಿವರಿಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.