ಮುಸ್ಲಿಂ ವ್ಯಾಪಾರಿಗೆ HDK 10 ಸಾವಿರ ರೂ ಕೊಟ್ಟಿದ್ದಾನೆ, ಅವರೇನು ಇವರಕ್ಕನ ಮಕ್ಕಳಾ..? RSS ಮುಖಂಡ

Apr 12, 2022, 2:01 PM IST

ಬೆಂಗಳೂರು (ಏ. 12): ಕುಮಾರಸ್ವಾಮಿ ಹಾಗೂ ಆರ್‌ಎಸ್‌ಎಸ್‌ ನಡುವೆ ಕಲ್ಲಂಗಡಿ ಫೈಟ್ ನಡೆದಿದೆ. ಎಚ್‌ಡಿಕೆ ಬವಿರುದ್ಧ ಆರ್‌ಎಸ್‌ಎಸ್ ಮುಖಂಡ ಹನುಮಂತ ಮಳಲಿ ಕಿಡಿಕರಿದ್ದಾರೆ. ಮುಸ್ಲಿಂ ವ್ಯಾಪಾರಿಗೆ 10 ಸಾವಿರ ರೂ ಸಹಾಯ ಮಾಡಿದ್ದರು ಕುಮಾರಸ್ವಾಮಿ. ಇದಕ್ಕೆ ಹನುಮಂತ ಮಳಲಿ, ಅವರೇನು ಎಚ್‌ಡಿಕೆ ಅಕ್ಕನ ಮಕ್ಕಳಾ..? ಎಂದು ವಾಗ್ದಾಳಿ ನಡೆಸಿದರು. 

ರಸ್ತೆಗಳಿಗೆ ಇಟ್ಟ ಮುಸ್ಲಿಂ ಹೆಸರು ಬದಲಿಸಿ: ಮುಸ್ಲಿಮರ ವಿರುದ್ಧ ಹಿಂದೂ ಸಂಘಟನೆಗಳ ಮತ್ತೊಂದು ಅಭಿಯಾನ

ಬರೀ ಕಲ್ಲಂಗಡಿ ಹಣ್ಣು ಒಡೆದಿದ್ದು ತಪ್ಪು ಅವರಿಗೆ ಶಿಕ್ಷೆಯಾಗಬೇಕೆಂದು ನಾವು ಒಪ್ಪಿಕೊಳ್ಳುತ್ತೇವೆ. ನಿಮಗೆ ಗಂಡಸ್ತನ ಇದ್ರೆ ಹೇಳ್ರಿ, ಕಾಶ್ಮೀರದಲ್ಲಿ ಹಿಂದೂಗಳ ತಲೆ ಒಡೆದಿದ್ದಾರಲ್ಲೋ, ನಿನಗೆ ಗೊತ್ತಿಲ್ಲವೇನೋ ನಾಚಿಕೆಗೇಡಿ ಎಂದು ಕೇಳಿ ನೋಡೋಣ..? ಎಂದು ಪ್ರಶ್ನಿಸಿದರು.