Jun 3, 2020, 5:51 PM IST
ಬೆಂಗಳೂರು (ಜೂ. 03): ಕನಕಪುರ ಬಂಡೆ ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ತಿರುಗಿ ಬಿದ್ದಿದ್ದಾರೆ. ಅಂದು ಎಚ್ಡಿಕೆ ಪಾಲಿಗೆ ಬಲಗೈ ಬಂಟನಾಗಿದ್ದ ಡಿಕೆಶಿ ಇಂದು ಸೆರಗಲ್ಲಿ ಕಟ್ಟಿಕೊಂಡ ಕೆಂಡವಾಗಿದ್ದಾರೆ. ಎರಡು ವರ್ಷಗಳ ಹಿಂದೆ ಎಚ್ಡಿಕೆ ಮುಖ್ಯಮಂತ್ರಿಯಾಗಲು ಡಿಕೆಶಿಯೇ ಕಾರಣ. ಆಪರೇಶನ್ ಭೀತಿಯಲ್ಲಿದ್ದ ಶಾಸಕರನ್ನು ರಕ್ಷಿಸಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ಡಿಕೆಶಿ ವಹಿಸಿದ ಪಾತ್ರ ಮಹತ್ತರವಾದದ್ದು. ಆಗ ಇಂದಿನ ಸಿಎಂ ಯಡಿಯೂರಪ್ಪ ಡಿಕೆಶಿಯನ್ನು 'ಖಳನಾಯಕ' ಎಂದು ಹೇಳಿದ್ದಾರೆ.
ರಾಜ್ಯಸಭೆಗೆ ಹೋಗೊಲ್ಲ, ಚನ್ನಪಟ್ಟಣ ಬಿಡೊಲ್ಲ: ಎಚ್ಡಿಕೆ
ಡಿಕೆಶಿ- ಎಚ್ಡಿಕೆ ಸ್ನೇಹ ಕೈ ನಾಯಕರ ಕೆಂಂಗಣ್ಣಿಗೆ ಗುರಿಯಾಗಿದ್ದೂ ಇದೆ. ಕುಮಾರಸ್ವಾಮಿಯವರು ಡಿಕೆಶಿ ಋಣದಲ್ಲಿದ್ದಾರೆ . ತೀರಿಸಬೇಕು ಎಂಬ ಮಾತು ಕೇಳಿ ಬಂದಿದ್ದು, ಅದಕ್ಕೆ ಕುಮಾರಣ್ಣ ಟಾಂಗ್ ಕೊಟ್ಟಿದ್ದಾರೆ. 'ನಾನು ಯಾರ ಋಣದಲ್ಲಿಯೂ ಇಲ್ಲ. ಇವೆಲ್ಲ ಲೂಸ್ ಟಾಕ್' ಎಂದು ಹೇಳಿದ್ದಾರೆ.