ಕನಕಪುರ ಬಂಡೆ ಟೆಂಪಲ್ ರನ್; ದುರ್ಗಾಮಾತೆ ಮೊರೆ ಹೋದ ಡಿಕೆಶಿ

Jan 29, 2020, 10:21 AM IST

ಬೆಂಗಳೂರು (ಜ. 29): ಕೆಪಿಸಿಸಿ ಅಧ್ಯಕ್ಷ ಪಟ್ಟ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವುದರಿಂದ ಡಿಕೆ ಶಿವಕುಮಾರ್ ಯಾದಗಿರಿಯ ಗಡೆ ದುರ್ಗಾದೇವಿ ದರ್ಶನಕ್ಕೆ ತೆರಳಿದ್ದಾರೆ. ಡಿಕೆಶಿ ಇಡಿ ಕೈಯಲ್ಲಿ ಸಿಲುಕಿದಾಗ ಅವರನ್ನು ರಕ್ಷಿಸಿದ್ದು ಇದೇ ದುರ್ಗಾದೇವಿ ಎಂಬುದು ಅವರ ನಂಬಿಕೆ. 

ಯಾದಗಿರಿಯ ಗಡೆ ದುರ್ಗಾದೇವಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕಳೆದ ವರ್ಷ ಜಾತ್ರೆಗೆ ಬರೋದಾಗಿ ಮುಡಿಪು ಕಟ್ಟಿದ್ದರು ಡಿಕೆಶಿ. ಆದರೆ ರಾಜಕೀಯ ಬೆಳವಣಿಗೆಗಳ ಮಧ್ಯೆ  ಜಾತ್ರೆಗೆ ಹೋಗಿರಲಿಲ್ಲ. ಇದೀಗ ದುರ್ಗಾ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಟೆಂಪಲ್ ರನ್ ಮೋರೆ ಹೋಗಿದ್ದಾರೆ.