Mar 13, 2022, 3:24 PM IST
ಬೆಂಗಳೂರು (ಮಾ. 13): ಬಿಜೆಪಿಗೂ, ಕಾಂಗ್ರೆಸ್ಗೂ ಹೋಲಿಕೆ ಮಾಡಬೇಡಿ. ಬಿಜೆಪಿ ಪಕ್ಷ ಅಂದ್ರೆ ಸ್ವರ್ಗ, ಕಾಂಗ್ರೆಸ್ ಪಕ್ಷ ಅಂದ್ರೆ ನರಕ' ಎಂದು ಮಂತ್ರಾಲಯದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿದೆ ಏನ್ರಿ..? ಗ್ರಾಪಂ ಚುನಾವಣೆಗೆ ನಿಂತರೂ ಗೆಲ್ಲೋದು ಕಷ್ಟ, ಆ ಮಟ್ಟಿಗೆ ಬಂದಿದ್ದಾರೆ. ಅವರಿಗೂ, ನಮಗೂ ಹೋಲಿಕೆ ಮಾಡಬೇಡ್ರಿ ಎಂದು ಈಶ್ವರಪ್ಪ ಹೇಳಿದ್ದಾರೆ.
Cabinet Reshuffle: 2 ಅವಧಿಯಲ್ಲಿ ಮಂತ್ರಿಯಾದವರಿಗೆ ಕೊಕ್.?
ಸಿದ್ದರಾಮಯ್ಯ ಜೊತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ, ಹಿಂದುಳಿದ ವರ್ಗದವರು ಇದ್ದಾರೆ. ಆದರೆ ಯಾಕೆ ಚುನಾವಣೆಯಲ್ಲಿ ಸೋತರು..? ಹಿಂದುಳಿದ ವರ್ಗದವರ ಸಮಾವೇಶ ಮಾಡಲು ಸ್ವಾತಂತ್ರ ಇಲ್ಲದಂಗೆ ಆಗಿದೆಯೆಲ್ರೀ ಎಂದು ವಾಗ್ದಾಳಿ ನಡೆಸಿದರು.