ಮುಡಾ ಅಕ್ರಮ ಗಂಭೀರವಾಗುತ್ತಿದ್ದಂತೆ 1 ರೂಪಾಯಿ ಜಮೀನು ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ!

Jul 27, 2024, 1:38 PM IST

ಬೆಂಗಳೂರು(ಜು.27) ಮುಡಾ ಅಕ್ರಮ ಹಗರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸತತ ಆರೋಪ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ತಿರುಗೇಟು ನೀಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ 1 ರೂಪಾಯಿ ಜಮೀನಿನ ರಹಸ್ಯ ಬಿಚ್ಚಿಟ್ಟಿದ್ದಾರೆ. 89 ವರ್ಷಗಳ ಹಿಂದಿನ ಲೆಕ್ಕವನ್ನು ನೆನಪಿಸಿದ ಸಿದ್ದರಾಮಯ್ಯ,  ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದ ಡಿನೋಟಿಫೈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಏನು